Saturday, November 8, 2025

ಗುರು ನಮನ

ನಿಮ್ಮ ಮಾತುಗಳು ನಮ್ಮೊಳಗಿನ ಹಣತೆಯ ಹೊತ್ತಿಸಿದವು,

ನಿಮ್ಮ ಕರುಣೆಯ ನೋಟ ಧೈರ್ಯವನ್ನು ತುಂಬಿದವು.

ನಿಮ್ಮ ತಾಳ್ಮೆಯಿಂದ ನಮ್ಮ ಮನಸ್ಸು ಗಟ್ಟಿಯಾಯಿತು,

ನಮ್ಮ ಕನಸುಗಳಿಗೆ ಬಲವಾದ ಅಡಿಪಾಯವಾಯಿತು.

 

ಪುಸ್ತಕಗಳಿಗಿಂತ ಹೆಚ್ಚು ನೀವು ಕಲಿಸಿದಿರಿ,

ದಯೆ, ಧೈರ್ಯ, ಮಾನವೀಯತೆ ತುಂಬಿದಿರಿ.

ಮಾತು, ಮೌನ, ಕರಿ ಹಲಗೆಯಷ್ಟೇ ಪರಿಶುದ್ಧ,

ನಮ್ಮ ಭವಿಷ್ಯದ ದಾರಿಯನ್ನು ತೋರಿಸಿದಿರಿ.

 

ನೀವು ನಮ್ಮ ಬೆಳಕುನಮ್ಮ ಮಾರ್ಗದರ್ಶಕರು,

ತಪ್ಪುಗಳನ್ನು ಸರಿಪಡಿಸಿ, ನಿಜದ ದಾರಿಯ ತೋರಿದವರು.

ಈ ದಿನ, ಹೆಮ್ಮೆಯಿಂದ ನೆನೆವೆವು,  ನಮಸ್ಕರಿಸುವೆವು,

ನೀವು ನೀಡಿದ ಅಕ್ಷರ ಭಿಕ್ಷೆಗೆ  ಸದಾ ಕೃತಜ್ಞರಾಗಿರುವೆವು.

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...