Saturday, November 29, 2025

ಕರುನಾಡ ಬೆಳಕು

ಮುದ್ದೇನಹಳ್ಳಿಯಲ್ಲಿ ಹೊತ್ತಿತು ಬೆಳಕೊಂದು,

ಬೀದಿ ದೀಪದಲ್ಲಿ ಅರಳಿತು ದೇಶದ ಪ್ರತಿಭೆಯೊಂದು,

ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಿದ ಶಕ್ತಿಯೊಂದು,

ಬುದ್ಧಿವಂತ, ಧೈರ್ಯವಂತ, ಎಲ್ಲರಿಗೂ ಮಾದರಿ,

ಸರ್ ವಿಶ್ವೇಶ್ವರಯ್ಯನಮ್ಮ ಹೆಮ್ಮೆ, ನಮ್ಮ ಗರಿ.

 

ಇಂಜನೀಯರ್ ಅಂದರೆ ಅನ್ವರ್ಥನಾಮ,

ಕೃಷ್ಣರಾಜ ಸಾಗರ ಭಾರತದ ಅಚ್ಚರಿ,

ಮಾಡಿದ ಕೆಲಸಗಳು ಹಲವಾರು- ಒಂದೇ, ಎರಡೇ,

ಹೊಲಗಳಿಗೆ ಜೀವ ತಂದವರು, ರೈತರಲ್ಲಿ ನಗು,

ಬರದಿಂದ ಬತ್ತಲಾದ ಭೂಮಿಗೆ ಹಸಿರು ತಂದವರು,

ಆದುನಿಕ ಭಗೀರಥ, ಕರುನಾಡ ಕುಲಪುತ್ರ.

 

ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಮೈಸೂರು ದಿವಾನರು,

ರಾಜ್ಯ, ದೇಶದ ಅಭಿವೃದ್ಧಿಗೆ ಹೊಸ ಮಾರ್ಗ ತೋರಿದವರು.

"ಉದ್ಯಮ ಬೆಳೆಸಿ, ದೇಶವನ್ನು ಮುನ್ನಡೆಸಿ"

ಅವರು ಹೇಳಿದ ಮಾತುಗಳು ನಮ್ಮಯ ಪ್ರೇರಣೆ.

 

೧೫ ಸೆಪ್ಟೆಂಬರ್,ಸರ್ ವಿಶ್ವೇಶ್ವರಯ್ಯ ಹುಟ್ಟಿದ ದಿನ,

ಭಾರತದ ಇಂಜಿನಿಯರ್ದಿನವೆಂದು ಆಚರಿಸುವೆವು,

ಅವರ ನಿಸ್ವಾರ್ಥತೆ, ಕಾರ್ಯ ನಿಷ್ಠೆ ಹೆಸರುವಾಸಿ,

ಕಾಯಕ ಯೋಗಿ, ಕರ್ಮ ಯೋಗಿ , ನಮಗೆ ಸದಾ ಸ್ಫೂರ್ತಿ,

ಅವರ ನೆನಪಿಸಿಕೊಳ್ಳುವೆವು, ಹೆಮ್ಮೆಪಡುವೆವು ಇಂದು,

ಅವರ ಹಾದಿಯಲ್ಲಿ ನಾವು ನಡೆಯೋಣ,ದುಡಿಯೋಣ,

ಕರುನಾಡ ಬೆಳೆಸೋಣ, ಭಾರತವನ್ನು ಬೆಳಗಿಸೋಣ. 

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...