Saturday, October 4, 2025

ದೇವಕುಂಜರ

ಸೆರೆಮನೆಯಲ್ಲಿ ಬಂಧಿಸಿರಲು ದೇವಕಿ,

ಕಾರ್ಗತ್ತಲ ರಾತ್ರಿಯಲಿ ಅವತರಿಸಿತು,

ನೋವು, ಅಸಹಾಯಕತೆಯ ಕಣ್ಣೀರು

ಒರೆಸಲು ಅವತರಿಸಿತು ದೇವಕುಂಜರ.

 

ದರ್ಪ,ದೌರ್ಜನ್ಯಗಳು ನಡೆಯುತಿರಲು,

ಅಧರ್ಮ, ನೋವುಗಳೇ ಮೆರೆಯುತಿರಲು,

ಧರ್ಮ, ಗೋವು, ಶಿಷ್ಟರ, ಮಾನಿನಿಯರ

ರಕ್ಷಿಸಲು ಧರೆಗಿಳಿಯಿತು ದೇವಕುಂಜರ.

 

ತಾಯಿಯ ನೋವ ಮರೆಯಲು,

ರಕ್ಕಸರ ಅಟ್ಟಹಾಸವ ಅಳಿಸಲು,

ವನಿತೆಯರ ಗೌರವ ಕಾಪಾಡಲು,

ಭೂಮಿಗೆ ಅಡಿಯಿಟ್ಟಿತು ದೇವಕುಂಜರ.

 

ಯಾರಿಗೂ ತಿಳಿಯಲಾಗದವನು,

ಯಾವ ಅಳೆತೆಗೂ ಸಿಗದವನು,

ಎಲ್ಲವೂ ತಾನೇ ಆಗಿರುವವನು,

ಶರಣಾಗತಿಗೆ ಒಲಿಯುವವನು ನಮ್ಮ ಕೃಷ್ಣಾ.

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...