ಸೆರೆಮನೆಯಲ್ಲಿ ಬಂಧಿಸಿರಲು ದೇವಕಿ,
ಕಾರ್ಗತ್ತಲ ರಾತ್ರಿಯಲಿ ಅವತರಿಸಿತು,
ನೋವು, ಅಸಹಾಯಕತೆಯ ಕಣ್ಣೀರು
ಒರೆಸಲು ಅವತರಿಸಿತು ದೇವಕುಂಜರ.
ದರ್ಪ,ದೌರ್ಜನ್ಯಗಳು ನಡೆಯುತಿರಲು,
ಅಧರ್ಮ, ನೋವುಗಳೇ ಮೆರೆಯುತಿರಲು,
ಧರ್ಮ, ಗೋವು, ಶಿಷ್ಟರ, ಮಾನಿನಿಯರ
ರಕ್ಷಿಸಲು ಧರೆಗಿಳಿಯಿತು ದೇವಕುಂಜರ.
ತಾಯಿಯ ನೋವ ಮರೆಯಲು,
ರಕ್ಕಸರ ಅಟ್ಟಹಾಸವ ಅಳಿಸಲು,
ವನಿತೆಯರ ಗೌರವ ಕಾಪಾಡಲು,
ಭೂಮಿಗೆ ಅಡಿಯಿಟ್ಟಿತು ದೇವಕುಂಜರ.
ಯಾರಿಗೂ ತಿಳಿಯಲಾಗದವನು,
ಯಾವ ಅಳೆತೆಗೂ ಸಿಗದವನು,
ಎಲ್ಲವೂ ತಾನೇ ಆಗಿರುವವನು,
ಶರಣಾಗತಿಗೆ ಒಲಿಯುವವನು ನಮ್ಮ ಕೃಷ್ಣಾ.
No comments:
Post a Comment