ಸಂಜೆ ಆಗಸದಲ್ಲಿ ತಾರೆಗಳು ಹೊಳೆಯುವುದು,
ಗಗನದಲ್ಲಿ ದೀಪಗಳ ಸಾಲು ಸಾಲು ಸರತಿಯಲ್ಲಿವೆ.
ಚಂದ್ರನ ಬರುವಿಕೆಗೆ ತಾರೆಗಳು ಕಾಯುವುವು,
ತಂಗಾಳಿ ಬೀಸುವಾಗ ಗಾಳಿ ಹಾಡು ಹಾಡುವುದು.
ಮರಗಳ ನಡುವೆ ಹಕ್ಕಿಗಳು ತಂಪಾಗಿ ಮಲಗುವುವು,
ತಂಗಾಳಿಯ ಸ್ಪರ್ಶಕ್ಕೆ ಕನಸುಗಳು ಕಣ್ಣು ತೆರೆಯುವುವು.
ಹೊಂಗೆ ಮರದ ನೆರಳಲ್ಲಿ ತಾಯಿಯ ತಂಪು ನೆನಪಾಗುವುದು,
ಪ್ರತಿ ಎಲೆಯಲ್ಲೂ ತಂಗಾಳಿಯ ಸಂಗೀತ ಹರಡುವುದು.
ಈ ಜಗವು ದಿನದ ಗಡಿಬಿಡಿಯಲ್ಲಿ ಎಲ್ಲವ ಮರೆವುದು,
ಇರುಳ ನಿದ್ದೆಯಲ್ಲಿ ಶಾಂತಿಯ ಹುಡುಕಾಟ ನಡೆಸುವುದು.
ಚಿಂತೆ ಮರೆ ಆಗಲಿ, ವಿಶ್ರಾಂತಿಯಲ್ಲಿ ಶಾಂತಿ ಹರಡಲಿ,
ಹೃದಯ, ಮನಸ್ಸು ಮೌನದಲಿ ನವ ಚೈತನ್ಯ ಹೊರಳಲಿ.
ಅವಘಡವು ಅವಸರದ ಹೆಜ್ಜೆ, ತಾಳ್ಮೆಯೆಡೆ ಸಾಗಲಿ,
ಅಮೃತತ್ವದೆಡೆ ನಡೆಯಲಿ ನಮ್ಮಯ ಚಿತ್ತ, ಅದೇ
ಗುರಿ.
ಹೃದಯದಲಿ ಹೊಮ್ಮಲಿ ಕರುಣೆ, ಮಮತೆಯ ರಸಧಾರೆ,
ಒಳಗಣ್ಣ ತೆರೆ,ಬೆಳಕ ಹರಿದು ಕತ್ತಲೊಡಲಿ ಮನಮನಗಳಿಂದೆ.
No comments:
Post a Comment