ಸಾವು ನಿದ್ದೆಯ ಅಣ್ಣ
ನಿದ್ದೆಯೇ ನೀನೆಷ್ಟು ಕರುಣಾಳು
ದಿನದ ನೋವೆಲ್ಲಾ ನಿನ್ನ ಕಂಡರೆ ಓಡುವುದು
ನಿನ್ನ ಅಣ್ಣನು ಬಲು ಕರುಣಾಳೆಂದು ಕೇಳಿದ್ದೇನೆ
ಅವನು ಬರುವುದೇ ಅಪರೂಪವೆಂದು ತಿಳಿದಿದ್ದೇನೆ
ನೀನಾದರೂ ದಿನವೂ ಬರುವೆ ಅನೇಕ ಪರಿಹಾರಗಳೊಂದಿಗೆ
ಆದರೆ ದಿನಬೆಳಗಾದರೆ ಮತ್ತೆ ಒಕ್ಕರಿಸುವುವು ಅವೇ ಸಮಸ್ಯೆಗಳು
ಅವನೆಂದರೆ ಎಲ್ಲರಿಗೂ ಹೆದರಿಕೆ ಏಕೋ?
ಆವನಾದರೂ ಬಾಳಲಿ ಬಂದರೆ ಎಲ್ಲವೂ ಶಾಶ್ವತವಾಗಿ ಮಾಯವಾಗುವುದು
ಸಮಸ್ಯೆಗಳೆಲ್ಲವೂ ಪರರ ಹೆಗಲೇರುವುದು ಖಂಡಿತ .....
Wednesday, October 16, 2019
Tuesday, October 15, 2019
ಗಾನ ಗಂಧರ್ವ
ನನ್ನೊಳು ಕನಸೊಂದು ಆವರಿಸುತ್ತಿದೆ
ಎನ್ನೆಂದು ಹೇಳಲಿ, ಅದ್ಬುತವೆನ್ನಲೇ? ಚಮತ್ಕಾರವೆನ್ನಲೇ?
ಮಾತುಗಳಂತೂ ಬಣ್ಣಿಸಲಾರೆ ಈ ಅನುಭವವ
ಮನವು ತೇಲುತಿದೆ
ಹೃದಯದ ಮಾತು ಕೇಳದೆ
ಆ ಗಾನ ತೇಲಿಬಂದ ಕಡೆಗೆ ಹಾರುತಿದೆ
ಎಂದು ಕೇಳದ ಅನಾದಿಗಾನವದು
ಭಾವನೆಗಳ ಹೊನಲೆನ್ನಲೋ?
ಮಧುರ ಭಾವಗಳ ವರ್ಷವೆನ್ನಲೋ?
ಹೀಗೆ ತೇಲಲಿ ಮನ ಅನಂತಾದೆಡೆಗೆ ಸಾಗಲಿ
ಸ್ವರ್ಗವೆಂದರೆ ಇದೆ
ಅನಂತಸುಖವೆಂದರೆ ಇದೆ
ಸಂಗೀತಸುಧೆಯಲ್ಲಿ ತೇಲಿಹೋಯಿತು
ಓ ವೈಣಿಕನೇ ನಿನಗೆ ನಮನ
ನೀನು ಗಾನ ಗಂಧರ್ವನೇ ಸರಿ
ನಿನಗೆ ಸರಿ ಸಮನಾರು ಹೇಳು
ಎನ್ನೆಂದು ಹೇಳಲಿ, ಅದ್ಬುತವೆನ್ನಲೇ? ಚಮತ್ಕಾರವೆನ್ನಲೇ?
ಮಾತುಗಳಂತೂ ಬಣ್ಣಿಸಲಾರೆ ಈ ಅನುಭವವ
ಮನವು ತೇಲುತಿದೆ
ಹೃದಯದ ಮಾತು ಕೇಳದೆ
ಆ ಗಾನ ತೇಲಿಬಂದ ಕಡೆಗೆ ಹಾರುತಿದೆ
ಎಂದು ಕೇಳದ ಅನಾದಿಗಾನವದು
ಭಾವನೆಗಳ ಹೊನಲೆನ್ನಲೋ?
ಮಧುರ ಭಾವಗಳ ವರ್ಷವೆನ್ನಲೋ?
ಹೀಗೆ ತೇಲಲಿ ಮನ ಅನಂತಾದೆಡೆಗೆ ಸಾಗಲಿ
ಸ್ವರ್ಗವೆಂದರೆ ಇದೆ
ಅನಂತಸುಖವೆಂದರೆ ಇದೆ
ಸಂಗೀತಸುಧೆಯಲ್ಲಿ ತೇಲಿಹೋಯಿತು
ಓ ವೈಣಿಕನೇ ನಿನಗೆ ನಮನ
ನೀನು ಗಾನ ಗಂಧರ್ವನೇ ಸರಿ
ನಿನಗೆ ಸರಿ ಸಮನಾರು ಹೇಳು
Monday, October 7, 2019
ಒಳಗೊಂದು ಕದನ
ಒಳಗೊಂದು ಕದನ ನಡೆಯುತಿದೆ
ಸೋಲು ಗೆಲುವಿನೊಡನೆ ಹಗ್ಗ ಜಗ್ಗಾಟ
ಕಾಣದ ದಾರಿ ಸೆಳೆಯುತಿಹುದು
ಗುರಿಯ ದಿಕ್ಕು ಬದಲಿಸಿ ಹಿಂಸಿಸಿದೆ||
ಒಂಟಿ ಜೀವ, ಸುತ್ತಲೂ ನಿಂತಿಹರು ನೂರಾರು
ಈಟಿ ,ಭರ್ಜಿಯ ಹಿಡಿದಿಹರು
ಕಣ್ಣು ಮಂಜಾಗಿದೆ,
ತಿವಿದ ನೋವು ಸಹಿಸದಾಗಿದೆ||
ಕತ್ತಲು ನನ್ನನ್ನೇ ನುಂಗುವಂತೆ ಭಾಸವಾಗಿದೆ
ನನ್ನೊಳ ಶಕ್ತಿಯ ಹೀರುವಂತೆ ತೋರುತಿದೆ
ಧೈತ್ಯರೂ ,ವೀರಾಧಿವೀರರೂ ,ಸಾವಿನ ಸರಧಾರರು
ಮರಣವನ್ನೇ ಕೈಯಲ್ಲಿ ಹಿಡಿದವರು||
ಶಕ್ತಿಯಾಯಿತು ಶೂನ್ಯ
ಧರೆಗುರುಳುತಿದೆ ದೇಹ
ನೆತ್ತರು ಹರಿಯುತಿದೆ ಭುವಿಯ ತಂಪಾಗಿಸಲು
ಶತ್ರುಗಳ ಸಂತೈಸುತಿಹುದು ಧರೆಗುರುಳಿ।।
ಸೋಲು ಗೆಲುವಿನೊಡನೆ ಹಗ್ಗ ಜಗ್ಗಾಟ
ಕಾಣದ ದಾರಿ ಸೆಳೆಯುತಿಹುದು
ಗುರಿಯ ದಿಕ್ಕು ಬದಲಿಸಿ ಹಿಂಸಿಸಿದೆ||
ಒಂಟಿ ಜೀವ, ಸುತ್ತಲೂ ನಿಂತಿಹರು ನೂರಾರು
ಈಟಿ ,ಭರ್ಜಿಯ ಹಿಡಿದಿಹರು
ಕಣ್ಣು ಮಂಜಾಗಿದೆ,
ತಿವಿದ ನೋವು ಸಹಿಸದಾಗಿದೆ||
ಕತ್ತಲು ನನ್ನನ್ನೇ ನುಂಗುವಂತೆ ಭಾಸವಾಗಿದೆ
ನನ್ನೊಳ ಶಕ್ತಿಯ ಹೀರುವಂತೆ ತೋರುತಿದೆ
ಧೈತ್ಯರೂ ,ವೀರಾಧಿವೀರರೂ ,ಸಾವಿನ ಸರಧಾರರು
ಮರಣವನ್ನೇ ಕೈಯಲ್ಲಿ ಹಿಡಿದವರು||
ಶಕ್ತಿಯಾಯಿತು ಶೂನ್ಯ
ಧರೆಗುರುಳುತಿದೆ ದೇಹ
ನೆತ್ತರು ಹರಿಯುತಿದೆ ಭುವಿಯ ತಂಪಾಗಿಸಲು
ಶತ್ರುಗಳ ಸಂತೈಸುತಿಹುದು ಧರೆಗುರುಳಿ।।
ಮೌನ ತಬ್ಬಿದೆ
ಮೌನ ತಬ್ಬಿದೆ ಬೆತ್ತಲಾದ ಮಾನವನು
ನೊಂದು,ಬೆಂದ ಮನಕೆ ಸ್ವಾಂತನ ಬೇಕಾಗಿದೆ||
ಎಲ್ಲಿಂದಲೋ ಬಂದವರು ನಮ್ಮನಾಳುತಿಹರು
ನಮ್ಮ ಮನೆಯಲ್ಲೇ ನಾವು ಪರಕೀಯರಾಗಿಹೆವು।।
ಬಣ್ಣದ ಮಾತುಗಳು ತೆರೆಯ ಮೇಲೆ
ಕತ್ತಿ ಮಸೆಯುತಿಹರು ತೆರೆಯ ಹಿಂದೆ।।
ನಂಬಿಕೆ, ಮೌಲ್ಯಗಳು ಮೂಲೆ ಗುಂಪಾಗಿವೆ
ಕಾಲು ನೆಕ್ಕುವರೇ ಗೆಳೆಯರು ನೈತಿಕತೆ ಹಿಂದೆ ಸರಿದಿದೆ।।
ಬೇಕಂತಲೇ ನಮ್ಮ ಕೆಳಗೆದೂಡಿದರು
ಕೈಗೆಲ್ಲಾ ಎಣ್ಣೆ, ಚಾಚಿಹರು ಮುಂದೆ
ಕೈಲಾಗದವರೆಂದು ಕುಟುಕುತಿಹರು।।
ನಮ್ಮವರು ಸ್ವಾರ್ಥಿಗಳು, ಸಮಯ ಸಾಧಕರು
ತಮ್ಮ ಜೋಳಿಗೆ ತುಂಬಿಸಿಕೊಂಡರು
ತಮ್ಮ ಕುಹಕದಿಂದ ನಮ್ಮೆದೆಯ ಇರಿದರು।।
ಮೌನ ತಬ್ಬಿದೆ ಬೆತ್ತಲಾದ ಮನವನು
ನಂಬಿಕೆಯ ಕೊಂದರು,
ನಮ್ಮಯ ಸ್ಥಿತಿಯ ಕಂಡು ನಕ್ಕರು।।
ಮೌನ ತಬ್ಬಿದೆ, ಮನವು ನರಳಿದೆ,ಬಿಕ್ಕಿದೆ
ಕಾಲಕ್ಕೆ ನಮಿಸುತ್ತಾ,ತೊಳಲುತ್ತಾ...
ನೊಂದು,ಬೆಂದ ಮನಕೆ ಸ್ವಾಂತನ ಬೇಕಾಗಿದೆ||
ಎಲ್ಲಿಂದಲೋ ಬಂದವರು ನಮ್ಮನಾಳುತಿಹರು
ನಮ್ಮ ಮನೆಯಲ್ಲೇ ನಾವು ಪರಕೀಯರಾಗಿಹೆವು।।
ಬಣ್ಣದ ಮಾತುಗಳು ತೆರೆಯ ಮೇಲೆ
ಕತ್ತಿ ಮಸೆಯುತಿಹರು ತೆರೆಯ ಹಿಂದೆ।।
ನಂಬಿಕೆ, ಮೌಲ್ಯಗಳು ಮೂಲೆ ಗುಂಪಾಗಿವೆ
ಕಾಲು ನೆಕ್ಕುವರೇ ಗೆಳೆಯರು ನೈತಿಕತೆ ಹಿಂದೆ ಸರಿದಿದೆ।।
ಬೇಕಂತಲೇ ನಮ್ಮ ಕೆಳಗೆದೂಡಿದರು
ಕೈಗೆಲ್ಲಾ ಎಣ್ಣೆ, ಚಾಚಿಹರು ಮುಂದೆ
ಕೈಲಾಗದವರೆಂದು ಕುಟುಕುತಿಹರು।।
ನಮ್ಮವರು ಸ್ವಾರ್ಥಿಗಳು, ಸಮಯ ಸಾಧಕರು
ತಮ್ಮ ಜೋಳಿಗೆ ತುಂಬಿಸಿಕೊಂಡರು
ತಮ್ಮ ಕುಹಕದಿಂದ ನಮ್ಮೆದೆಯ ಇರಿದರು।।
ಮೌನ ತಬ್ಬಿದೆ ಬೆತ್ತಲಾದ ಮನವನು
ನಂಬಿಕೆಯ ಕೊಂದರು,
ನಮ್ಮಯ ಸ್ಥಿತಿಯ ಕಂಡು ನಕ್ಕರು।।
ಮೌನ ತಬ್ಬಿದೆ, ಮನವು ನರಳಿದೆ,ಬಿಕ್ಕಿದೆ
ಕಾಲಕ್ಕೆ ನಮಿಸುತ್ತಾ,ತೊಳಲುತ್ತಾ...
Sunday, October 6, 2019
ಹಂಬಲ
ನಿನ್ನ ಪ್ರೀತಿಯಿಂದಲೇ
ನೋವೆಲ್ಲಾ ಮಾಯವಾಗಿದೆ;
ಈ ತನು-ಮನ ನಿನ್ನದೇ
ಶರಣಾಗತಿಯಿಂದ ಮನವು ಹಾಯಾಗಿದೆ;
ಹಸಿವಿಲ್ಲ, ದಣಿವಿಲ್ಲ
ನಿನ್ನ ನೆನೆದರೆ;
ನಿನ್ನ ಸೇರುವ ಬಯಕೆಯೊಂದೇ
ಮನದಲಿ ತೀರದ ದಾಹವಾಗಿದೆ;
ಎಷ್ಟು ಕೂಗಿದರು ಕೇಳಿಸದೇ ನಿನಗೆ
ನಿನ್ನ ಪ್ರೀತಿಯ ಬಯಸಿಹೆನು;
ಇಂದೋ! ನಾಳೆಯೋ ! ಬರುವಿಯೆಂಬ
ಹಂಬಲವೊಂದೆ ಈ ಜೀವಕೆ;
ಬಾ,ಬಾ ನಿನ್ನ ಕಾಣಬೇಕೆಂಬ ಹಂಬಲವೊಂದೆ
ಒಮ್ಮೆ ಮುಖತೋರು ಬಾ ...
ಇಷ್ಟುಕಾಲ ಸತಾಯಿಸಿದ್ದು ಸಾಕು;
ಈ ಜೀವ ಹೋಗುವ ಮುನ್ನ
ಒಮ್ಮೆ ನನ್ನ ಸಂತೈಸು,
ಈ ಸಂಘರ್ಷವ ಕೊನೆಗೊಳಿಸು ಬಾ ....
ನೋವೆಲ್ಲಾ ಮಾಯವಾಗಿದೆ;
ಈ ತನು-ಮನ ನಿನ್ನದೇ
ಶರಣಾಗತಿಯಿಂದ ಮನವು ಹಾಯಾಗಿದೆ;
ಹಸಿವಿಲ್ಲ, ದಣಿವಿಲ್ಲ
ನಿನ್ನ ನೆನೆದರೆ;
ನಿನ್ನ ಸೇರುವ ಬಯಕೆಯೊಂದೇ
ಮನದಲಿ ತೀರದ ದಾಹವಾಗಿದೆ;
ಎಷ್ಟು ಕೂಗಿದರು ಕೇಳಿಸದೇ ನಿನಗೆ
ನಿನ್ನ ಪ್ರೀತಿಯ ಬಯಸಿಹೆನು;
ಇಂದೋ! ನಾಳೆಯೋ ! ಬರುವಿಯೆಂಬ
ಹಂಬಲವೊಂದೆ ಈ ಜೀವಕೆ;
ಬಾ,ಬಾ ನಿನ್ನ ಕಾಣಬೇಕೆಂಬ ಹಂಬಲವೊಂದೆ
ಒಮ್ಮೆ ಮುಖತೋರು ಬಾ ...
ಇಷ್ಟುಕಾಲ ಸತಾಯಿಸಿದ್ದು ಸಾಕು;
ಈ ಜೀವ ಹೋಗುವ ಮುನ್ನ
ಒಮ್ಮೆ ನನ್ನ ಸಂತೈಸು,
ಈ ಸಂಘರ್ಷವ ಕೊನೆಗೊಳಿಸು ಬಾ ....
ಅಮರ ಸ್ಫೂರ್ತಿ
ಮೌನ, ಮೌನದಾಳದೊಳಗಿಂದ
ಎದ್ದೇಳು! ಎದ್ದೇಳು! ಓ ಅಮರ ಸ್ಫೂರ್ತಿಯೇ,
ಕಾಲಚಕ್ರದ ಮಾಯಾಜಾಲಕ್ಕೆ ಸಿಲುಕದೆ
ಏರೂ,ಏಕಾಂಗಿಯಾಗಿ ಅಮರತ್ವದೆಡೆಗೆ;
ಕತ್ತಲದೊಳಗಣ ಪಿಸುಮಾತುಗಳ ಕಡೆಗಣಿಸು
ನೋವು,ಆಕ್ರಂದನ, ದುಗುಡ,ಸಂಘರ್ಷಗಳ ತೊರೆ
ಮೌನದೊಳಗಡೆ ಎಲ್ಲವನ್ನು ತೂರು ।।
ಎಲ್ಲವನ್ನು ನೋಡು ಒಳಗಣ್ಣಿನಿಂದ
ಬೆರಗುಗಣ್ಣಿನಿಂದ ಮೌನವಾಗಿ ಅವಲೋಕಿಸು
ಮಾತುಗಳ ಕೇಳಿಸಿಕೋ! ನಸುನಗು ಒಳಗೊಳಗೇ
ಇಂದು ನಾಳೆಗಳ ಅಳೆದು ನೋಡು
ಉತ್ತರವಿಲ್ಲದ ಪ್ರಶ್ನೆ ಯಾವುದಿದೆ? ಆಲೋಚಿಸು
ವಿಶ್ರಾಂತಿಯ ಬಿಡು, ಏಕಾಂಗಿಯಾಗಿ ನಡೆ
ಪ್ರಕೃತಿಯೊಳಗಡಗಿದೆ ಸಮಸ್ಯೆಗಳಿಗೆ ಉತ್ತರ
ನೋಡು, ಆಳಕ್ಕಿಳಿ, ಚಿಂತಿಸು,ಆಲೋಚಿಸು
ಶಾಶ್ವತವಾಗಿರಲಿ,ಶಾಂತಿಯಿಂದಿರಲಿ, ತಾಳ್ಮೆಯೊಂದಿರಲಿ
ಏಕಾತ್ಮತಾ ಸೂತ್ರ ಒಂದೇ ಮೌನ, ಶಾಂತಿ
ಅನುಭವಿಸು ,ಪರಿಗ್ರಹಿಸು ಅಮರ ಸ್ಫೂರ್ತಿಯ ।।
ಎದ್ದೇಳು! ಎದ್ದೇಳು! ಓ ಅಮರ ಸ್ಫೂರ್ತಿಯೇ,
ಕಾಲಚಕ್ರದ ಮಾಯಾಜಾಲಕ್ಕೆ ಸಿಲುಕದೆ
ಏರೂ,ಏಕಾಂಗಿಯಾಗಿ ಅಮರತ್ವದೆಡೆಗೆ;
ಕತ್ತಲದೊಳಗಣ ಪಿಸುಮಾತುಗಳ ಕಡೆಗಣಿಸು
ನೋವು,ಆಕ್ರಂದನ, ದುಗುಡ,ಸಂಘರ್ಷಗಳ ತೊರೆ
ಮೌನದೊಳಗಡೆ ಎಲ್ಲವನ್ನು ತೂರು ।।
ಎಲ್ಲವನ್ನು ನೋಡು ಒಳಗಣ್ಣಿನಿಂದ
ಬೆರಗುಗಣ್ಣಿನಿಂದ ಮೌನವಾಗಿ ಅವಲೋಕಿಸು
ಮಾತುಗಳ ಕೇಳಿಸಿಕೋ! ನಸುನಗು ಒಳಗೊಳಗೇ
ಇಂದು ನಾಳೆಗಳ ಅಳೆದು ನೋಡು
ಉತ್ತರವಿಲ್ಲದ ಪ್ರಶ್ನೆ ಯಾವುದಿದೆ? ಆಲೋಚಿಸು
ವಿಶ್ರಾಂತಿಯ ಬಿಡು, ಏಕಾಂಗಿಯಾಗಿ ನಡೆ
ಪ್ರಕೃತಿಯೊಳಗಡಗಿದೆ ಸಮಸ್ಯೆಗಳಿಗೆ ಉತ್ತರ
ನೋಡು, ಆಳಕ್ಕಿಳಿ, ಚಿಂತಿಸು,ಆಲೋಚಿಸು
ಶಾಶ್ವತವಾಗಿರಲಿ,ಶಾಂತಿಯಿಂದಿರಲಿ, ತಾಳ್ಮೆಯೊಂದಿರಲಿ
ಏಕಾತ್ಮತಾ ಸೂತ್ರ ಒಂದೇ ಮೌನ, ಶಾಂತಿ
ಅನುಭವಿಸು ,ಪರಿಗ್ರಹಿಸು ಅಮರ ಸ್ಫೂರ್ತಿಯ ।।
ಮೌನ ಹೃದಯ
ಎತ್ತರೆತ್ತರದ ಸೌಧಗಳು ಏನನೋ ಸಾರುತಿವೆ
ಎಣಿಸಲಾರದೆ ಸೋತೆವು ನಿಲುಕದು ಈ ಮನಸಿಗೆ
ವಿಜಯದ ಸಂಕೇತವೋ?
ನಾಶಪಡಿಸಿದ ಅಹಮ್ಮೋ?
ತಿಳಿಸುವವರಾರು ಈ ಮೂಡ ಮನಸಿಗೆ !
ಸಾವಿರ ಸಾವಿರ ನೋಡುವರು ಬರಿಗಣ್ಣಿನಿಂದ
ಒಳಗಣ್ಣ ತೆರೆಯದೇ ನೋಡಣ್ಣ
ಬೆರಗುಪಡುವರು ,ಹೌಹಾರುವರು
ಮನದೊಳಗೆ ನೋವುಂಡವರು ಕೆಲವರು
ನಮ್ಮ ಸಮಾಧಿಯ ಮೇಲೆ ಸೌಧವಕಟ್ಟಿದವರ
ಬೆನ್ನುತಟ್ಟಬೇಕೇ ?
ಅದ್ಭುತವೆಂದು ಹಾಡಿ ಹೊಗಳಬೇಕೆ?
ನಮ್ಮ ಸಂಸ್ಕೃತಿಯ ಮೇಲಾದ ದೌರ್ಜನ್ಯದ ಪ್ರತೀಕಗಳು......
ಒಳಗೊಳಗೇ ಹೃದಯ ನರಳುವುದು
ಮೌನವಾಗಿ ಹಾಡುತಿರುವ ಸೌಧಗಳ ಕಂಡು
ಅಡಿಪಾಯದಲ್ಲಿ ಸಿಲುಕಿ ನರಳುತ್ತಿರುವ ನಮ್ಮತನವ ಕಂಡು।।
ಎಣಿಸಲಾರದೆ ಸೋತೆವು ನಿಲುಕದು ಈ ಮನಸಿಗೆ
ವಿಜಯದ ಸಂಕೇತವೋ?
ನಾಶಪಡಿಸಿದ ಅಹಮ್ಮೋ?
ತಿಳಿಸುವವರಾರು ಈ ಮೂಡ ಮನಸಿಗೆ !
ಸಾವಿರ ಸಾವಿರ ನೋಡುವರು ಬರಿಗಣ್ಣಿನಿಂದ
ಒಳಗಣ್ಣ ತೆರೆಯದೇ ನೋಡಣ್ಣ
ಬೆರಗುಪಡುವರು ,ಹೌಹಾರುವರು
ಮನದೊಳಗೆ ನೋವುಂಡವರು ಕೆಲವರು
ನಮ್ಮ ಸಮಾಧಿಯ ಮೇಲೆ ಸೌಧವಕಟ್ಟಿದವರ
ಬೆನ್ನುತಟ್ಟಬೇಕೇ ?
ಅದ್ಭುತವೆಂದು ಹಾಡಿ ಹೊಗಳಬೇಕೆ?
ನಮ್ಮ ಸಂಸ್ಕೃತಿಯ ಮೇಲಾದ ದೌರ್ಜನ್ಯದ ಪ್ರತೀಕಗಳು......
ಒಳಗೊಳಗೇ ಹೃದಯ ನರಳುವುದು
ಮೌನವಾಗಿ ಹಾಡುತಿರುವ ಸೌಧಗಳ ಕಂಡು
ಅಡಿಪಾಯದಲ್ಲಿ ಸಿಲುಕಿ ನರಳುತ್ತಿರುವ ನಮ್ಮತನವ ಕಂಡು।।
Tuesday, September 24, 2019
ಕೃಪೆ ತೋರು, ಸಂತೈಸು ಬಾ
ಈ ನೋವು ಯಾರಿಗೂ ಅರ್ಥವಾಗದು
ಪ್ರೀತಿಯ ಬೇಗೆಗೆ ಪರಿಹಾರವುಂಟೇ !
ಈ ನೋವು ಕೊಟ್ಟವಗೇ ತಿಳಿಯುವುದು
ಈ ಹೃದಯದ ಬೇಗೆ ಏನೆಂದು
ಈ ವಿರಹಾಗ್ನಿ ಮನವೆಲ್ಲ ಸುಡುತಿರಲು
ನಿನ್ನಿಂದ ಮಾತ್ರ ಸಾಧ್ಯ ಕೃಷ್ಣಾ,ಕೃಷ್ಣಾ
ಕೃಪೆ ತೋರು, ಸಂತೈಸು ಬಾ ,ಬಳಿ ಬಾ ದೇವಾ.....
ಪ್ರೀತಿಯ ಬೇಗೆಗೆ ಪರಿಹಾರವುಂಟೇ !
ಈ ನೋವು ಕೊಟ್ಟವಗೇ ತಿಳಿಯುವುದು
ಈ ಹೃದಯದ ಬೇಗೆ ಏನೆಂದು
ಈ ವಿರಹಾಗ್ನಿ ಮನವೆಲ್ಲ ಸುಡುತಿರಲು
ನಿನ್ನಿಂದ ಮಾತ್ರ ಸಾಧ್ಯ ಕೃಷ್ಣಾ,ಕೃಷ್ಣಾ
ಕೃಪೆ ತೋರು, ಸಂತೈಸು ಬಾ ,ಬಳಿ ಬಾ ದೇವಾ.....
ಕೃಷ್ಣಾ,ಕೃಷ್ಣಾ
ನನಗೇನಾಗಿದೆ? ಮಾಯೆಯೋ? ಭ್ರಮೆಯೋ?
ಈ ನನ್ನ ಕಂಗಳಿಗೆ ಏನು ಕಾಣದಾಗಿದೆ;
ಕೃಷ್ಣಾ,ಕೃಷ್ಣಾ ನೀನಲ್ಲದೆ ನನಗಾರು ಕಾಣರು
ಇದು ಮತಿಭ್ರಮಣೆಯೋ! ಅವ್ಯಕ್ತ ಪ್ರೀತಿಯೋ!
ನಿರ್ಮಲ ಪ್ರೀತಿಯೋ! ಈ ಜೀವಕೆ ನೀ ಜೊತೆಯಿರಲು....।।
ನಡೆಯುತ್ತಲೇ ಇದ್ದೇನೆ, ನೀ ಜೊತೆಗಿರಲು
ದಣಿವಿಲ್ಲ,ದಾಹವಿಲ್ಲ ಇದೆಂತಹ ಸುಖ?
ದೂರ ದೂರ ನಡೆದರೂ ಈ ಕಾಲ್ಗಳಿಗೆ ನೋವಿಲ್ಲ
ಪ್ರಶಾಂತವಾದ ಇಂತಹ ಮನಸ್ಸು ಹಿಂದೆಂದೂ ಕಂಡಿರಲಿಲ್ಲ
ಭಯವಿಲ್ಲ, ಸಂದೇಹವಿಲ್ಲ ಈ ಜೀವಕೆ ನೀ ಜೊತೆಯಿರಲು....||
ಯಾವುದೂ ನೆನಪಿಲ್ಲ ಕಾಲ, ದೇಶ, ಕಾಲಾತೀತ
ಏನಿದು ಯೋಚನೆಗೆ, ಮನಸ್ಸಿಗೂ ನಿಲುಕುತ್ತಿಲ್ಲ
ತನು-ಮನ ಕುಣಿಯುವುದು ನೀ ಜೊತೆಯಿರಲು
ರಾತ್ರಿ-ಹಗಲೆನ್ನದೆ ನಿನ್ನೊಡನೆಯೇ ಅಲೆಯುವಾಸೆ
ಎಲ್ಲವೂ ನಿನ್ನ ಲೀಲೆ, ಸ್ವರ್ಗ ಈ ಜೀವಕೆ ನೀ ಜೊತೆಯಿರಲು.....||
ಈ ನನ್ನ ಕಂಗಳಿಗೆ ಏನು ಕಾಣದಾಗಿದೆ;
ಕೃಷ್ಣಾ,ಕೃಷ್ಣಾ ನೀನಲ್ಲದೆ ನನಗಾರು ಕಾಣರು
ಇದು ಮತಿಭ್ರಮಣೆಯೋ! ಅವ್ಯಕ್ತ ಪ್ರೀತಿಯೋ!
ನಿರ್ಮಲ ಪ್ರೀತಿಯೋ! ಈ ಜೀವಕೆ ನೀ ಜೊತೆಯಿರಲು....।।
ನಡೆಯುತ್ತಲೇ ಇದ್ದೇನೆ, ನೀ ಜೊತೆಗಿರಲು
ದಣಿವಿಲ್ಲ,ದಾಹವಿಲ್ಲ ಇದೆಂತಹ ಸುಖ?
ದೂರ ದೂರ ನಡೆದರೂ ಈ ಕಾಲ್ಗಳಿಗೆ ನೋವಿಲ್ಲ
ಪ್ರಶಾಂತವಾದ ಇಂತಹ ಮನಸ್ಸು ಹಿಂದೆಂದೂ ಕಂಡಿರಲಿಲ್ಲ
ಭಯವಿಲ್ಲ, ಸಂದೇಹವಿಲ್ಲ ಈ ಜೀವಕೆ ನೀ ಜೊತೆಯಿರಲು....||
ಯಾವುದೂ ನೆನಪಿಲ್ಲ ಕಾಲ, ದೇಶ, ಕಾಲಾತೀತ
ಏನಿದು ಯೋಚನೆಗೆ, ಮನಸ್ಸಿಗೂ ನಿಲುಕುತ್ತಿಲ್ಲ
ತನು-ಮನ ಕುಣಿಯುವುದು ನೀ ಜೊತೆಯಿರಲು
ರಾತ್ರಿ-ಹಗಲೆನ್ನದೆ ನಿನ್ನೊಡನೆಯೇ ಅಲೆಯುವಾಸೆ
ಎಲ್ಲವೂ ನಿನ್ನ ಲೀಲೆ, ಸ್ವರ್ಗ ಈ ಜೀವಕೆ ನೀ ಜೊತೆಯಿರಲು.....||
ಸೋಜಿಗ
ನಗೆಯು ಬರುವುದೆನಗೆ
ಹಿಂತಿರುಗಿ ನೋಡಲು;
ಕ್ಷಣಿಕ ಲಾಲೆಸೆಗೆ ಬೀಳುವ
ಇಂತಹವರ ಕಂಡು ಸೋಜಿಗವೆನಿಸುವುದು
ನನ್ನ ನಾನೇ ನಂಬದಾದೆ
ಇದು ಭ್ರಮೆಯೋ?, ಮತ್ತೇನೋ ತಿಳಿಯದಾಗಿದೆ!
ಎಷ್ಟು ಬದಲಾಗಿದೆ, ಅರಿವಿಗೆ ಬಾರದೆ
ಎಲ್ಲವು ಕೆಟ್ಟ ಕನಸುಗಳಂತೆ ಭಾಸವಾಗುತ್ತಿದೆ।।
ಹಿಂತಿರುಗಿ ನೋಡಲು;
ಕ್ಷಣಿಕ ಲಾಲೆಸೆಗೆ ಬೀಳುವ
ಇಂತಹವರ ಕಂಡು ಸೋಜಿಗವೆನಿಸುವುದು
ನನ್ನ ನಾನೇ ನಂಬದಾದೆ
ಇದು ಭ್ರಮೆಯೋ?, ಮತ್ತೇನೋ ತಿಳಿಯದಾಗಿದೆ!
ಎಷ್ಟು ಬದಲಾಗಿದೆ, ಅರಿವಿಗೆ ಬಾರದೆ
ಎಲ್ಲವು ಕೆಟ್ಟ ಕನಸುಗಳಂತೆ ಭಾಸವಾಗುತ್ತಿದೆ।।
Sunday, September 22, 2019
ಕನಸು
ನನ್ನೊಳ ಬುದ್ಧಿ ಕೆಡಿಸಿದೆ
ಕನಸುಗಳ ಬೇಗೆಗೆ।।
ನನ್ನ ಹೃದಯ ಜಾರಿದೆ
ಕನಸುಗಳ ಒಸಗೆಗೆ।।
ನನ್ನಾತ್ಮ ನರಳಿದೆ, ಹಂಬಲಿಸಿದೆ
ಕನಸುಗಳ ಬೆಸುಗೆಗೆ।।
ಕನಸುಗಳ ಬೇಗೆಗೆ।।
ನನ್ನ ಹೃದಯ ಜಾರಿದೆ
ಕನಸುಗಳ ಒಸಗೆಗೆ।।
ನನ್ನಾತ್ಮ ನರಳಿದೆ, ಹಂಬಲಿಸಿದೆ
ಕನಸುಗಳ ಬೆಸುಗೆಗೆ।।
Subscribe to:
Posts (Atom)
ರಾತ್ರಿ ಊಟ: ಧ್ಯಾನ
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...