ಎತ್ತರೆತ್ತರದ ಸೌಧಗಳು ಏನನೋ ಸಾರುತಿವೆ
ಎಣಿಸಲಾರದೆ ಸೋತೆವು ನಿಲುಕದು ಈ ಮನಸಿಗೆ
ವಿಜಯದ ಸಂಕೇತವೋ?
ನಾಶಪಡಿಸಿದ ಅಹಮ್ಮೋ?
ತಿಳಿಸುವವರಾರು ಈ ಮೂಡ ಮನಸಿಗೆ !
ಸಾವಿರ ಸಾವಿರ ನೋಡುವರು ಬರಿಗಣ್ಣಿನಿಂದ
ಒಳಗಣ್ಣ ತೆರೆಯದೇ ನೋಡಣ್ಣ
ಬೆರಗುಪಡುವರು ,ಹೌಹಾರುವರು
ಮನದೊಳಗೆ ನೋವುಂಡವರು ಕೆಲವರು
ನಮ್ಮ ಸಮಾಧಿಯ ಮೇಲೆ ಸೌಧವಕಟ್ಟಿದವರ
ಬೆನ್ನುತಟ್ಟಬೇಕೇ ?
ಅದ್ಭುತವೆಂದು ಹಾಡಿ ಹೊಗಳಬೇಕೆ?
ನಮ್ಮ ಸಂಸ್ಕೃತಿಯ ಮೇಲಾದ ದೌರ್ಜನ್ಯದ ಪ್ರತೀಕಗಳು......
ಒಳಗೊಳಗೇ ಹೃದಯ ನರಳುವುದು
ಮೌನವಾಗಿ ಹಾಡುತಿರುವ ಸೌಧಗಳ ಕಂಡು
ಅಡಿಪಾಯದಲ್ಲಿ ಸಿಲುಕಿ ನರಳುತ್ತಿರುವ ನಮ್ಮತನವ ಕಂಡು।।
Sunday, October 6, 2019
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment