ಸಾವು ನಿದ್ದೆಯ ಅಣ್ಣ
ನಿದ್ದೆಯೇ ನೀನೆಷ್ಟು ಕರುಣಾಳು
ದಿನದ ನೋವೆಲ್ಲಾ ನಿನ್ನ ಕಂಡರೆ ಓಡುವುದು
ನಿನ್ನ ಅಣ್ಣನು ಬಲು ಕರುಣಾಳೆಂದು ಕೇಳಿದ್ದೇನೆ
ಅವನು ಬರುವುದೇ ಅಪರೂಪವೆಂದು ತಿಳಿದಿದ್ದೇನೆ
ನೀನಾದರೂ ದಿನವೂ ಬರುವೆ ಅನೇಕ ಪರಿಹಾರಗಳೊಂದಿಗೆ
ಆದರೆ ದಿನಬೆಳಗಾದರೆ ಮತ್ತೆ ಒಕ್ಕರಿಸುವುವು ಅವೇ ಸಮಸ್ಯೆಗಳು
ಅವನೆಂದರೆ ಎಲ್ಲರಿಗೂ ಹೆದರಿಕೆ ಏಕೋ?
ಆವನಾದರೂ ಬಾಳಲಿ ಬಂದರೆ ಎಲ್ಲವೂ ಶಾಶ್ವತವಾಗಿ ಮಾಯವಾಗುವುದು
ಸಮಸ್ಯೆಗಳೆಲ್ಲವೂ ಪರರ ಹೆಗಲೇರುವುದು ಖಂಡಿತ .....
Wednesday, October 16, 2019
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment