ಮೌನ, ಮೌನದಾಳದೊಳಗಿಂದ
ಎದ್ದೇಳು! ಎದ್ದೇಳು! ಓ ಅಮರ ಸ್ಫೂರ್ತಿಯೇ,
ಕಾಲಚಕ್ರದ ಮಾಯಾಜಾಲಕ್ಕೆ ಸಿಲುಕದೆ
ಏರೂ,ಏಕಾಂಗಿಯಾಗಿ ಅಮರತ್ವದೆಡೆಗೆ;
ಕತ್ತಲದೊಳಗಣ ಪಿಸುಮಾತುಗಳ ಕಡೆಗಣಿಸು
ನೋವು,ಆಕ್ರಂದನ, ದುಗುಡ,ಸಂಘರ್ಷಗಳ ತೊರೆ
ಮೌನದೊಳಗಡೆ ಎಲ್ಲವನ್ನು ತೂರು ।।
ಎಲ್ಲವನ್ನು ನೋಡು ಒಳಗಣ್ಣಿನಿಂದ
ಬೆರಗುಗಣ್ಣಿನಿಂದ ಮೌನವಾಗಿ ಅವಲೋಕಿಸು
ಮಾತುಗಳ ಕೇಳಿಸಿಕೋ! ನಸುನಗು ಒಳಗೊಳಗೇ
ಇಂದು ನಾಳೆಗಳ ಅಳೆದು ನೋಡು
ಉತ್ತರವಿಲ್ಲದ ಪ್ರಶ್ನೆ ಯಾವುದಿದೆ? ಆಲೋಚಿಸು
ವಿಶ್ರಾಂತಿಯ ಬಿಡು, ಏಕಾಂಗಿಯಾಗಿ ನಡೆ
ಪ್ರಕೃತಿಯೊಳಗಡಗಿದೆ ಸಮಸ್ಯೆಗಳಿಗೆ ಉತ್ತರ
ನೋಡು, ಆಳಕ್ಕಿಳಿ, ಚಿಂತಿಸು,ಆಲೋಚಿಸು
ಶಾಶ್ವತವಾಗಿರಲಿ,ಶಾಂತಿಯಿಂದಿರಲಿ, ತಾಳ್ಮೆಯೊಂದಿರಲಿ
ಏಕಾತ್ಮತಾ ಸೂತ್ರ ಒಂದೇ ಮೌನ, ಶಾಂತಿ
ಅನುಭವಿಸು ,ಪರಿಗ್ರಹಿಸು ಅಮರ ಸ್ಫೂರ್ತಿಯ ।।
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
No comments:
Post a Comment