ನನಗೇನಾಗಿದೆ? ಮಾಯೆಯೋ? ಭ್ರಮೆಯೋ?
ಈ ನನ್ನ ಕಂಗಳಿಗೆ ಏನು ಕಾಣದಾಗಿದೆ;
ಕೃಷ್ಣಾ,ಕೃಷ್ಣಾ ನೀನಲ್ಲದೆ ನನಗಾರು ಕಾಣರು
ಇದು ಮತಿಭ್ರಮಣೆಯೋ! ಅವ್ಯಕ್ತ ಪ್ರೀತಿಯೋ!
ನಿರ್ಮಲ ಪ್ರೀತಿಯೋ! ಈ ಜೀವಕೆ ನೀ ಜೊತೆಯಿರಲು....।।
ನಡೆಯುತ್ತಲೇ ಇದ್ದೇನೆ, ನೀ ಜೊತೆಗಿರಲು
ದಣಿವಿಲ್ಲ,ದಾಹವಿಲ್ಲ ಇದೆಂತಹ ಸುಖ?
ದೂರ ದೂರ ನಡೆದರೂ ಈ ಕಾಲ್ಗಳಿಗೆ ನೋವಿಲ್ಲ
ಪ್ರಶಾಂತವಾದ ಇಂತಹ ಮನಸ್ಸು ಹಿಂದೆಂದೂ ಕಂಡಿರಲಿಲ್ಲ
ಭಯವಿಲ್ಲ, ಸಂದೇಹವಿಲ್ಲ ಈ ಜೀವಕೆ ನೀ ಜೊತೆಯಿರಲು....||
ಯಾವುದೂ ನೆನಪಿಲ್ಲ ಕಾಲ, ದೇಶ, ಕಾಲಾತೀತ
ಏನಿದು ಯೋಚನೆಗೆ, ಮನಸ್ಸಿಗೂ ನಿಲುಕುತ್ತಿಲ್ಲ
ತನು-ಮನ ಕುಣಿಯುವುದು ನೀ ಜೊತೆಯಿರಲು
ರಾತ್ರಿ-ಹಗಲೆನ್ನದೆ ನಿನ್ನೊಡನೆಯೇ ಅಲೆಯುವಾಸೆ
ಎಲ್ಲವೂ ನಿನ್ನ ಲೀಲೆ, ಸ್ವರ್ಗ ಈ ಜೀವಕೆ ನೀ ಜೊತೆಯಿರಲು.....||
Tuesday, September 24, 2019
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment