ಮೌನ ತಬ್ಬಿದೆ ಬೆತ್ತಲಾದ ಮಾನವನು
ನೊಂದು,ಬೆಂದ ಮನಕೆ ಸ್ವಾಂತನ ಬೇಕಾಗಿದೆ||
ಎಲ್ಲಿಂದಲೋ ಬಂದವರು ನಮ್ಮನಾಳುತಿಹರು
ನಮ್ಮ ಮನೆಯಲ್ಲೇ ನಾವು ಪರಕೀಯರಾಗಿಹೆವು।।
ಬಣ್ಣದ ಮಾತುಗಳು ತೆರೆಯ ಮೇಲೆ
ಕತ್ತಿ ಮಸೆಯುತಿಹರು ತೆರೆಯ ಹಿಂದೆ।।
ನಂಬಿಕೆ, ಮೌಲ್ಯಗಳು ಮೂಲೆ ಗುಂಪಾಗಿವೆ
ಕಾಲು ನೆಕ್ಕುವರೇ ಗೆಳೆಯರು ನೈತಿಕತೆ ಹಿಂದೆ ಸರಿದಿದೆ।।
ಬೇಕಂತಲೇ ನಮ್ಮ ಕೆಳಗೆದೂಡಿದರು
ಕೈಗೆಲ್ಲಾ ಎಣ್ಣೆ, ಚಾಚಿಹರು ಮುಂದೆ
ಕೈಲಾಗದವರೆಂದು ಕುಟುಕುತಿಹರು।।
ನಮ್ಮವರು ಸ್ವಾರ್ಥಿಗಳು, ಸಮಯ ಸಾಧಕರು
ತಮ್ಮ ಜೋಳಿಗೆ ತುಂಬಿಸಿಕೊಂಡರು
ತಮ್ಮ ಕುಹಕದಿಂದ ನಮ್ಮೆದೆಯ ಇರಿದರು।।
ಮೌನ ತಬ್ಬಿದೆ ಬೆತ್ತಲಾದ ಮನವನು
ನಂಬಿಕೆಯ ಕೊಂದರು,
ನಮ್ಮಯ ಸ್ಥಿತಿಯ ಕಂಡು ನಕ್ಕರು।।
ಮೌನ ತಬ್ಬಿದೆ, ಮನವು ನರಳಿದೆ,ಬಿಕ್ಕಿದೆ
ಕಾಲಕ್ಕೆ ನಮಿಸುತ್ತಾ,ತೊಳಲುತ್ತಾ...
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
No comments:
Post a Comment