ಒಳಗೊಂದು ಕದನ ನಡೆಯುತಿದೆ
ಸೋಲು ಗೆಲುವಿನೊಡನೆ ಹಗ್ಗ ಜಗ್ಗಾಟ
ಕಾಣದ ದಾರಿ ಸೆಳೆಯುತಿಹುದು
ಗುರಿಯ ದಿಕ್ಕು ಬದಲಿಸಿ ಹಿಂಸಿಸಿದೆ||
ಒಂಟಿ ಜೀವ, ಸುತ್ತಲೂ ನಿಂತಿಹರು ನೂರಾರು
ಈಟಿ ,ಭರ್ಜಿಯ ಹಿಡಿದಿಹರು
ಕಣ್ಣು ಮಂಜಾಗಿದೆ,
ತಿವಿದ ನೋವು ಸಹಿಸದಾಗಿದೆ||
ಕತ್ತಲು ನನ್ನನ್ನೇ ನುಂಗುವಂತೆ ಭಾಸವಾಗಿದೆ
ನನ್ನೊಳ ಶಕ್ತಿಯ ಹೀರುವಂತೆ ತೋರುತಿದೆ
ಧೈತ್ಯರೂ ,ವೀರಾಧಿವೀರರೂ ,ಸಾವಿನ ಸರಧಾರರು
ಮರಣವನ್ನೇ ಕೈಯಲ್ಲಿ ಹಿಡಿದವರು||
ಶಕ್ತಿಯಾಯಿತು ಶೂನ್ಯ
ಧರೆಗುರುಳುತಿದೆ ದೇಹ
ನೆತ್ತರು ಹರಿಯುತಿದೆ ಭುವಿಯ ತಂಪಾಗಿಸಲು
ಶತ್ರುಗಳ ಸಂತೈಸುತಿಹುದು ಧರೆಗುರುಳಿ।।
Monday, October 7, 2019
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment