Saturday, April 11, 2026

ಅಂತರಂಗದ ಹೋರಾಟ

ಏಕೆ ಹೀಗೆ?,ಏಕೆ ಹೀಗೆ?,

ನಾನು ಬದಲಾಗಲಿಲ್ಲ.

ನನ್ನಿಂದ ಹಲವರಿಗೆ ನೋವು, ಕಷ್ಟ,

ನನ್ನಿಂದ ಅವರಿಗೆ ಅವಮಾನ.

 

ಆದರೆ ನಾನೋ!,.....


ಏನೂ ಆಗಿಲ್ಲವೆಂದು ನಿರ್ಲಿಪ್ತ,

ಅವರ ಬಗ್ಗೆ ಕಾಳಜಿ ನನಗಿಲ್ಲವೇ?,

ಅವರ ಪ್ರೀತಿ,ವಿಶ್ವಾಸ ನನಗೇನೆಂದೇ?,

ಅವರಿಗೆ ನಾ ಮಾಡುತ್ತಿರುವ ಅವಮಾನವೇ?

 

ಮನದೊಳು ಎಲ್ಲಾ ದುಗುಡಗಳು ಅಡಗಿವೆ,

ಭಯ, ಆತಂಕ, ಕತ್ತಲೆ, ಇನ್ನೇನೋ....

ಪ್ರತಿದಿನ ಹೋರಾಟ ಅವುಗಳ ಮೇಲೆ,

ಒಂದು ದಿನ ಗೆಲ್ಲುತ್ತೇನೆ, ಮತ್ತೊಮ್ಮೆ ಸೋಲುತ್ತೇನೆ.

 

ಯಾರ ಕೈ ಮೇಲಾಗುವುದೋ ನಾ ತಿಳಿಯೆ,

ಒಂದಂತೂ ಸತ್ಯ, ನಾನು ಬದಲಾಗಿಲ್ಲ.

ನನ್ನ ಹುಡುಕಾಟದಲ್ಲಿ ದಾರಿ ಕಾಣದಾಗಿದೆ,

ನನ್ನಿಂದಲೇ ನನ್ನವರಿಗೆ ಸುಖವಿಲ್ಲ, ನೆಮ್ಮದಿಯಿಲ್ಲ.

 

ಮುಂದೆ ಏನು? ನನಗೆ ತಿಳಿದಿಲ್ಲ.

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...