Saturday, April 4, 2026

ಹಳೆಯ ನೆನೆಪಿನ ತೇಪೆ

ಒಂದು ಮೂಲೆಯಲ್ಲಿ ಹಳೆಯ ಕಪಾಟು, 

ಅದರಲ್ಲಿ ಹಳೆಯ ಕಾಗದಗಳ ಕಂತೆ. 

ಊಹೆಗೆ ನಿಲುಕದ ನೋವಿನ ಬೊಂತೆ,

ಮರೆತ ಹೃದಯದ ಕಂಬನಿಯ ಮೊರೆತ.


ತೆರೆದ ಕಿಟಕಿ, ಮುರಿದ ಹೆಂಚು,

ಕಿಲುಬು ಹಿಡಿದ ಬಾಗಿಲ ಬೀಗ.

ಎಂದೋ ಮರೆತ ದಾರಿಯ ಕದನ,

ದೂರಕ್ಕೆ ಓಡಿದ ಹೃದಯದ ಕರೆಗೆ.


ಮಳೆ ಗಾಳಿ ಕಾಲನ ಹೊಡೆತ,

ಸುಳಿಗೆ ಸಿಕ್ಕು ಸೂತ್ರವಿಲ್ಲದಂತೆ.

ಬದುಕ ಪಯಣ ಮೂರಾಬಟ್ಟೆ,

ಬದುಕ ಬೇಕೆಂಬ ಹಪಾಹಪಿತನ.


ಅಳಬೇಕೊ?, ನಗಬೇಕೋ?,

ಎಲ್ಲವೂ ಭ್ರಮೆಯಂತೆ ಕಂಡಿದೆ.

ಇದ್ದು ಸಾಧಿಸಿದ್ದು ಏನು?

ಜೀವನ ಪ್ರೀತಿಯೇ? ಪ್ರಶ್ನೆ ಉಳಿದಿದೆ. 

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...