ಅಧ್ಯಾಯದ ಆರಂಭ-ಕೊನೆ

ಏಕೆ ಹೀಗಾಗುವುದೋ ನಾ ಕಾಣೆ
ಎಲ್ಲವೂ ನಿರ್ಧಾರಿತವಾದುದಕ್ಕೆ ತಡೆ ಬೀಳುವುದೇಕೋ?
ಆಗೇ ಹೋಯಿತು ಅನ್ನುವುದರೊಳಗಾಗಿ
ಇನ್ನೇನೋ ಆಗುವತ್ತ ನಿರ್ಧಾರ ಹೊರಳಿರುತ್ತದೆ
ಬದ್ಧತೆ,ದೃಢತೆ ಮಗ್ಗುಲು ಮಲಗಿಕೊಳ್ಳುತ್ತದೆ
ವಚನ ಭ್ರಷ್ಟತೆ ನಗುತಾ ಹೊರಹೊಮ್ಮುತ್ತದೆ
ಮನಸ್ಸುಗಳು ನರಳುತ್ತದೆ
ಒಂದು ಅಧ್ಯಾಯದ ಕೊನೆ
ಮತ್ತೊಂದು ಅಧ್ಯಾಯದ ಆರಂಭ
ಕೊನೆ ಮೊದಲಿಲ್ಲದ ಕಾಲ ನಾಳೆಗೆ ಹೊರಳುತ್ತದೆ
ಉದಯರವಿ ಮತ್ತೊಂದು ಭರವಸೆಯ ದಿವಸ ಕಾದಿರಿಸುವನು ಎಲ್ಲರಿಗೂ||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...