ಜಲ ಬರಿದು.....


ಜಲ ಬರಿದು.....
ಬರಿದಾಗುತ್ತಿದೆ ವಸುಂಧರೆಯ ಒಡಲು
ಕೆರೆ,ತೊರೆ,ನದಿ,ಜೀವನದಿ ಎಲ್ಲಾ ಬಟ್ಟಾಬಯಲು
ಕೇಳಲ್ಲಿ ಪ್ರಾಣಿ,ಪಕ್ಷಿ ಸಂಕುಲದ ಮೂಕ ಹುಯಿಲು
ಇಂದೇ ಬರೆದಿಡು ನಾಳೆಗೆ ನಿನ್ನಯ ಉಯಿಲು
ಸರ್ಕಾರ ಮಾಡಬೇಕಿದೆ ಜನರಿಗೆ ಅಪೀಲು
ಉಳಿಸಿ ಉಳಿಸಿ ಜೀವ ಜಲ ಉಳಿಸಿ||

ದುಡ್ಡು ಕೊಡುವೆವು;
ನೀರು ಸಿಗುವುದು;
ನಮ್ಮಯ ಜನರ ಅಹಂಕಾರ,ಧರ್ಪ;
ಅರಿತು ಬಳಸುವವರು ಯಾರಿಲ್ಲ ಇಲ್ಲಿ;
ಎಚ್ಚರಿಕೆ ಕೋರಿಕೆಗಳಿಗೆ ಬೆಲೆ ಇಲ್ಲ ಇಲ್ಲಿ;
ಜಲಕ್ಷಾಮ ಬಂದಾಯ್ತು;
ಎಚ್ಚರಗೊಳ್ಳದಿರೆ ಅಪಾಯ ಕಾದಿದೆ
ಊರಿಗೆ ಊರೇ ಸಾಯುವುದು ಖರೆ
ಕೇಳು ನೀ ಮನುಜ ವಸುಂಧರೆಯ ಕರೆ
ಎಲ್ಲೆಡೆ ಮುಕ್ಕುವುದು ಸೂತಕ
ಹಣ,ಅಂತಸ್ತು,ಸಂಪತ್ತು ಮಣ್ಣುಗೂಡುವುದು
ಎಚ್ಚರಗೊಳ್ಳೋ ಮನುಜ
ರಕ್ಷಿಸು ಜೀವಜಲ
ಉಳಿಸು ಮನುಜ ಕುಲ||

ಚಿತ್ರಕೃಪೆ:ಕನ್ನಡಪ್ರಭ




No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...