Saturday, May 25, 2013

ಮನದೊಳ ಕದನ


ನೀನು ಏನು ತಿಳಿದಿರುವೆಯೋ ಅದು ನಾನಲ್ಲ
ಬಾಹ್ಯದಲ್ಲಿ ಹೀಗೆ ಕಾಣುವ ನಾನು, ನಾನಲ್ಲ;
ಆಂತರ್ಯದಲ್ಲಿ ಎದೆ ತಟ್ಟಿದೆ ನೂರು ಕದನ
ಅಲ್ಲಿ ಯೋಧನೂ ನಾನೇ!
ಶಾಂತಿ ಧೂತನೂ ನಾನೇ!
ನಡೆಯುವ ಯುದ್ಧ ಏತಕ್ಕೋ? ನಾನರಿಯೆ
ಪ್ರತಿದಿನ ಕದನ ನಡೆವುದು ಮನದೊಳಗೆ
ತೀವ್ರ ಹೋರಾಟದ ನಡುವೆಯೂ ಸಾಯುತ್ತೇನೆ
ರಾತ್ರಿ ಕತ್ತಲಾವರಿಸಿದ ಮೇಲೆ;
ಉದಯಿಸುವ ರವಿಯ ಬೆಳಕಿಡಿಗಳ ಮೂಲಕ ಮರುಜನ್ಮ
ಹೊಸಶಕ್ತಿಯೊಂದಿಗೆ ಕದನವು ಮುಂದುವರೆಯುವುದು
ಸತ್ತು-ಬದುಕಿ,ಸತ್ತು-ಬದುಕಿ
ಜೀವನದರ್ಥ ಬದಲಾಗಿದೆ, ಹೊಸತನ ಅರಳಿದೆ
ಹೊಸ ಕವನ ಕಣ್ಣುತೆರೆದಿದೆ;

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...