Saturday, June 1, 2013

ಉದಯ ರವಿಗೆ ಸ್ವಾಗತ

ಆಗಸದಲ್ಲಿ ಕತ್ತಲು ಕವಿಯುತ್ತಿದ್ದಂತೆ ಕಪ್ಪು ಮೋಡಗಳು ಆಕ್ರಮಿಸಿದವು
ದಾಳಿಮಾಡಲು ಇಳೆಯ ಮೇಲೆ
ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಇಳೆಯ ಹಸನುಮಾಡಲು
ಎಡೆಬಿಡದೆ ಸುರುಸಿದವು ಮುತ್ತಿನ ಹನಿಗಳನ್ನು
ಚಿಟಪಟ,ಚಿಟಪಟ ತದೇಕ ಚಿತ್ತದಿಂದ ಹೊಮ್ಮಿದ ನಾದಸ್ವರ
ಸಂಗೀತ ಕಛೇರಿ ಮುಗಿದದ್ದು ಯಾವಾಗಲೋ!

ಬೆಳಗಿನ ಹಕ್ಕಿಗಳ ಚಿಲಿಪಿಲಿ ದನಿ ಕೇಳಿಸಲಿಲ್ಲ
ಮೌನ ಆಕ್ರಮಿಸಿತ್ತು ಮುಂಜಾನೆಯ ಸಮಯದಲ್ಲಿ
ರಸ್ತೆ ಬದಿಯಲ್ಲೇ ನಿಂತ ದೇವದೂತರು ನಿದ್ರಾಪರವಶರಾಗಿದ್ದರು
ಆಕಾಶ ಕಳೆಗಟ್ಟಿತು
ಬೇಸರಿಸಿತು ಮನ
ಏಕಾಂಗಿ ಸಂಚಾರಿ ನಾನು
ಸಮಯ ಹೊರಳಿತು,ತಂಗಾಳಿ ಬೀಸಿತು
ಮರಗಿಡಗಳ ಮರ್ಮರ ಸಂಗೀತ ಹಬ್ಬಿತು
ಹೊಸ ಚೈತನ್ಯ ಹರಡಿತು
ಕೋಗಿಲೆ,ಕಾಗೆ.ಗೊರವಂಕ ಹಕ್ಕಿಗಳು
ಉದಯ ರವಿಗೆ ಸುಪ್ರಭಾತದ ಸ್ವಾಗತ ಕೋರಿದವು

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...