ನನ್ನ ಕೋಗಿಲೆ ಹಾಡುತ್ತಿಲ್ಲ
ಏಕೆ ನೀವು ಬಲ್ಲಿರಾ?
ಮುಂಜಾವಿನ ರಸ ಗಳಿಗೆಯಲಿ
ರಾಗರವಿಗೆ ಸುಪ್ರಭಾತ ಹಾಡ ಹೇಳಿ
ಕವಿಯದರ ಮಧುರತೆಯಲಿ ತೇಲಿ
ದಿನದ ಕಾಯಕಕ್ಕೆ ಅದುವೆ ಲಾಲಿ
ಮಧುರತೆಗೆ ಮನಸೋತು
ಕಾಲವು ಮುಂದೆಹೋತು
ನೆನಹು ಭಾವ ನಲ್ಮೆ ಹೂತು
ಭಾವ ಬೆಸುಗೆ ಮನದಲಿ ಮೂಡಿತು
ಇಂದು ಹಾಡ ಇಂಪು ಕೇಳಿಸದು
ಕವಿಯ ಮನಸು ಬೆದರಿಹುದು
ಯಾರ ಕೇಳಲಿ? ಎಲ್ಲಿ ಹುಡುಕಲಿ?
ಹೃದಯ ಭಾರ ಭಾವಬಿಂದು
ಮನುಸು ಅದನು ಕೇಳದು
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
tumba chennagide sir
ReplyDeleteನಿಮ್ಮ ಪ್ರೀತಿಯ ನುಡಿಗಳಿಗೆ ವಂದನೆಗಳು.
ReplyDelete