Thursday, December 9, 2010

||ಸತ್ಯ-ಮಿಥ್ಯ||

ಸೂರ್ಯಾಸ್ತದ ರಕ್ತವರ್ಣ
ನಾಳೆಗೆ ಮುನ್ನುಡಿ
ಕಹಿನೆನಪುಗಳ ಕರಾಳವರ್ಣ
ಕಳೆದದಿನಗಳ ಹಿನ್ನುಡಿ
ನಾಳೆಯು ಬರಲಿ.....
ಸಂತಸ ತರಲಿ.....


ಸಾಗರದಲೆಗಳ ಮಾರ್ಧನಿಯ ಲಹರಿ
ನಾಳೆಯ ಜೀವನಕೆ ಮುನ್ನುಡಿಯ ಶಾಯರಿ
ಹೋದವರು ಕೆಲವರು ಮರಳಿಬಾರರು
ಮಿಥ್ಯ ಜೀವನದ ಭಾಗೀದಾರರು
ಹಿರಿಯರ ಜೀವನ ಸಂಧ್ಯೆಯ ತಿಳಿಹಾಸ
ಎಳೆಯರ ನಾಳೆಗಳ ಮಂದಹಾಸ

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...