ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?
ನಿನ್ನೆಯಿಂದ ಕಾಣುತ್ತಿಲ್ಲ;
ನನ್ನ ನೋಡಲು ಬಂದಿಲ್ಲ;
ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\
ಯಮುನೆಯ ದಡದಲ್ಲಿ ಕುಳಿತಿದ್ದೆ
ಅವನು ಬರುವನೆಂದು;
ಬಂದು ಕೆಣಕುವನೆಂದು;
ಕಾದು ಕಾದು ಬೇಸರಿಸಿದೆ ಅವ ಬರಲಿಲ್ಲ ಕೇಳು ಸಖಿ\\
ಅವನಿಗಾಗಿ ಬೆಣ್ಣೆ ತೆಗೆದಿರಿಸಿದ್ದೆ
ಬಂದು ಕಾಡಿಸುವನೆಂದು;
ಬೆಣ್ಣೆ ಕದ್ದು ಹೋಗುವನೆಂದು;
ಬೆಣ್ಣೆ ಕರಗಿ ಕರಗಿ ಹೋಯಿತು;ನನ್ನ ಭಾವ ಕರಗಿ ಹೋಗುತಿದೆ ಸಖಿ\\
ಅವನಿಗಾಗಿ ಕಾಯುತ್ತಿರುವೆ ಗೆಳತಿ
ಎಲ್ಲಿ ಹೋದನೋ ತಿಳಿಯದಾಗಿದೆ;
ತಿಳಿಯುವ ಕುತೂಹಲ ದೊಡ್ಡದಾಗಿದೆ;
ಬಾ ಗೆಳತಿ ಶ್ಯಾಮನ ತೋರು;ಈ ವಿರಹವ ಪರಿಹರಿಸು ಸಖಿ\\
Saturday, December 25, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment