ಮೌನಕ್ಕೆ ಶರಣು

ಏಕೆ ಮೌನಕ್ಕೆ ಶರಣಾಗಿರುವೆ ರಾಧೇ?
ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ
ನಿನ್ನ ಮೌನ ಕಂಡು\\

ಚೈತನ್ಯದ ಚೆಲುವು ನೀನು
ಪುಷ್ಫಗಳ ಸುಗಂಧವು ನೀನು
ತಂಗಾಳಿಯ ತಂಪು ನೀನು
ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\

ನಮ್ಮೆಲ್ಲರ ಸಖಿಯು ನೀನು
ಬೃಂದಾವನದ ಚೆಲುವು ನೀನು
ಶ್ಯಾಮನ ಪ್ರಾಣವು ನೀನು
ಇಂದೇಕೆ ಮೌನಕ್ಕೆ ಮನಸೋತೆ ಹೇಳು ನೀನು\\

ಹೇಳು ಮನದ ನೋವನು
ನಿನ್ನ ನೋವು ನಮ್ಮದೇ ಹೇಳು ನೀನು
ಶ್ಯಾಮನಿಲ್ಲ ಬೃಂದಾವದಲ್ಲಿ ತಿಳಿದೆವು ನಾವು
ಬಂದ ಭಾಗ್ಯವು ಕೆಲಸ ಮುಗಿಸಿ ಹೊರಟು ಹೋಯಿತು\\

ಸಮಾಧಾನವಿರಲಿ ಗೆಳತಿ
ಮಧುರ ನೆನಪುಗಳ ಅವ ಬಿಟ್ಟು ಹೋದನಲ್ಲಾ
ಹೇಳದೇ ಬಂದ ಮಧುರ ನೋವು ಹೇಳದೇ ಹೋಯಿತಷ್ಟೆ
ಶ್ಯಾಮ ನಮ್ಮೊಡನಿದ್ದನೆಂಬುದೇ ನಮಗೆಲ್ಲಾ ಹರುಷವಷ್ಟೇ ಗೆಳತಿ\\

ಜೀವನದ ಪಾಠ ಕಲಿಸಿದ ಗುರು ಅವನು
ನಮ್ಮ ತಪ್ಪು-ಒಪ್ಪುಗಳನ್ನೆಲ್ಲಾ ತಿದ್ದಿ ತೀಡಿದ ಗೆಳೆಯ ಅವನು
ಆತ್ಮದ ಕಣ್ಣು ತೆರೆಸಿದ ಸ್ವಾಮಿ ಅವನು
ಜೀವನದಲ್ಲಿ ಇದ್ದರೂ ಇಲ್ಲದಂತೆ ಇರುವುದ ಕಲಿಸಿ ಮೋಹವ ತೊಳೆದ ಮನ ಮೋಹನ ಅವನು\\

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...