ಮುಂಜಾನೆ ಸಂಧ್ಯಾ ಸಮಯದೊಳ್
ತರುವಿನ ಶಿಶುವೊಂದು ಕಣ್ಣಬಿಟ್ಟು
ಲೋಕವನ್ನು ನೋಡಲು ಬಿರಿಯ ಬಯಸಿತು
ಹಿಮಮಣಿಯೊಂದು ಮುತ್ತಿಕ್ಕಿ
ತಂಪೆರೆಯುತ್ತಿತ್ತು ಮುದದಿಂದಲಿ
ದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯ
ಕೆಂಪುವರ್ಣವು ತರುವಿನ ಶಿಶುವಿಗೆ ಸುಪ್ರಭಾತ ಹಾಡಿತ್ತು
ನಗುತ ನಗುತ ಅರಳಿತು ಕುಸುಮವು
ಹಿಮಮಣಿಯ ತುಟಿಯು ಸೋಂಕಿ ಪರಿಮಳವ ಪಸರಿತು
ಸೃಷ್ಟಿಸಿದ ಬ್ರಹ್ಮನೇ ಕುಸುಮ ಸೌಂದರ್ಯಕೆ
ಮನಸೋತು ಮರಿದುಂಬಿಯಾಗಿ ಮಧುವ
ಹೀರಲು ಬಯಸಿ ಹಾರಿಬಂದನು
Tuesday, December 21, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment