ಮುಂಜಾನೆ ಸಂಧ್ಯಾ ಸಮಯದೊಳ್
ತರುವಿನ ಶಿಶುವೊಂದು ಕಣ್ಣಬಿಟ್ಟು
ಲೋಕವನ್ನು ನೋಡಲು ಬಿರಿಯ ಬಯಸಿತು
ಹಿಮಮಣಿಯೊಂದು ಮುತ್ತಿಕ್ಕಿ
ತಂಪೆರೆಯುತ್ತಿತ್ತು ಮುದದಿಂದಲಿ
ದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯ
ಕೆಂಪುವರ್ಣವು ತರುವಿನ ಶಿಶುವಿಗೆ ಸುಪ್ರಭಾತ ಹಾಡಿತ್ತು
ನಗುತ ನಗುತ ಅರಳಿತು ಕುಸುಮವು
ಹಿಮಮಣಿಯ ತುಟಿಯು ಸೋಂಕಿ ಪರಿಮಳವ ಪಸರಿತು
ಸೃಷ್ಟಿಸಿದ ಬ್ರಹ್ಮನೇ ಕುಸುಮ ಸೌಂದರ್ಯಕೆ
ಮನಸೋತು ಮರಿದುಂಬಿಯಾಗಿ ಮಧುವ
ಹೀರಲು ಬಯಸಿ ಹಾರಿಬಂದನು
Tuesday, December 21, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment