ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿ
ತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?
ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿ
ಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರು
ದಿನಕರ-ಭೂಮಿಯ ಸುರತಿಯಿಂದಲೆ
ಜನಿಸಿದವರು ಭೂಮಿಯ ಸಕಲ ಜೀವಗಳು
ಸಂನ್ಯಾಸಿಗಳೆಂದರೆ ಪ್ರಶ್ನಾರ್ಥಕವೇ?
ಭಾವ-ಮನಸ್ಸು-ಜ್ನಾನಗಳ ನಡುವೆ ಸುರತದಿಂದಲೇ
ಜನಿಸಿದವು ಎಲ್ಲಾ ದರ್ಶನಗಳು, ತತ್ವಗಳು ಜಗದಲಿ
ಲೌಕಿಕರೋ, ಜ್ನಾನಿಗಳೋ, ಚಾರ್ವಾಕರೋ
ಯಾರನೂ ಬಿಟ್ಟಿಲ್ಲ ಈ ಸು-ರತ
ಎರಕ ಹೊಯ್ಯುವ ಕಾಯಕ ನಿಂತಿಲ್ಲ ಈ ತನಕ
ಸು-ರತವಿಲ್ಲದ ಜೀವನ ಎಲ್ಲಿದೆ ಈ ಜಗದಲಿ?
ಕಾಲದ ಸು-ರತವೇ ಭೂತ-ಭವಿಷ್ಯತ್-ಪರಿವರ್ತನೆ
Tuesday, December 21, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment