ಭಾರತೀಯನೇ! ಎದ್ದೇಳು ಸಾಕಿನ್ನು ಈ ಗಾಢ ನಿದ್ದೆ
ಶತಶತಮಾನಗಳ ಕುಂಭಕರ್ಣ ನಿದ್ದೆಯಿಂದೆದ್ದೇಳು!
ರಾಜ ಮಹಾರಾಜರುಗಳ ತಲೆಗಳುರುಳಿದವು ಈ ಧರೆಗೆ
ಕೋಟೆಕೊತ್ತಲಗಳು ಮಣ್ಣುಗೂಡಿದವು, ಸಾಕಿನ್ನು ಎದ್ದೇಳು ।।
ದುರುಳರು ಧಾಂಗುಡಿಯಿಟ್ಟರು ನಿನ್ನ ತಾಯ್ನಾಡಿಗೆ
ರುಧಿರ ಹರಿಯಿತು, ಶಿರಗಳುರುಳಿದವು ರಕ್ಷಣೆಗೈಯುತ್ತಾ
ಪರಂಗಿಯರು ದಾಳಿಗೈದರು ವ್ಯಾಪಾರದ ಸೋಗಿನಲಿ
ರಾಜ್ಯ ರಾಜ್ಯಗಳ ಉರುಳಿಸುತಾ ,ಸಾಕಿನ್ನು ಎದ್ದೇಳು ।।
ದೇಶಭಕ್ತರು ಪ್ರಾಣಗಳನೇ ಮುಡಿಪಾಗಿಟ್ಟರು ತಾಯಿಗೆ
ದೇಶಭಕ್ತರ ಸೋಗುಹಾಕಿದರು ಕೆಲರು ಮೊಸಳೆಕಣ್ಣೀರಿಡುತಾ
ನೂರಾರು ದೇಶಭಕ್ತರು ಕೊರಳನೊಡ್ಡಿದರು ಕುಣಿಕೆಗೆ
ಎದೆಯನೊಡ್ಡಿದರು ತುಪಾಕಿ ಗುಂಡಿಗೆ, ಸಾಕಿನ್ನು ಎದ್ದೇಳು ।।
ಮಂದಿರಗಳುರುಳಿದವು ಹಲವರ ತಣಿಸಲು ಕೆಲರಿಂದ
ದೇಶವೇ ಇಬ್ಬಾಗವಾಯಿತು ಧೂರ್ತರಿಂದ ಓಲೈಕೆಗೆ
ಇನ್ನೂ ನಿಂತಿಲ್ಲ ಓಲೈಕೆ ಸೋಗುಹಾಕುವ ರಾಜಕಾರಣಿ
ಧೂರ್ತ ನರಿಜನರ ಬೆಣ್ಣೆಮಾತುಗಳಿಂದ , ಸಾಕಿನ್ನು ಎದ್ದೇಳು ।।
Tuesday, April 21, 2020
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment