ಮನವು ಮರಳಿ ನೆನಪಿಸುತಿದೆ
ಹಗಲುಗನಸನೆ ತೆರೆಯುತಿದೆ
ನೊಂದು ಬೆಂದು ಬದುಕುತಿರೆ
ಮತ್ತೆ ಬೇಕೆಂದಿದೆ।।
ತಪ್ಪಿ ಹೋದ ಭಾವಕೆ
ಮರಳಿ ಸಿಗದ ಪ್ರೀತಿಗೆ
ನರಳಿ ನರಳಿ ಬೇಯುತಿದೆ
ತನ್ನ ಭಾಗ್ಯಕೆ।।
ಸಿಗಲಾರದ ಹಣ್ಣಿಗೆ ಕೈ ಚಾಚಿ
ಎಟುಕಲಾರದೆ ತುಂಬಿರಲುನಿರಾಸೆ
ಜೀವನ ಪಯಣ ಹೇಗೋ ಸಾಗುತ್ತಿರಲು
ಮತ್ತೆ ಬಂದು ಕೆದಕಿದೆ
ಮನದಲಿ ನೂರು ಕಹಿ ನೆನೆಪುಗಳ।।
ಕಾಣುತಿದೆ ದೂರ ತೀರ
ಕಲಕುತಿದೆ ಎದೆಯನೀರ
ಏರುತ್ತಿದೆ ಹೃದಯ ಭಾರ
ತಾಳನಾದೆ ನಾ।।
ಯಾರ ಒಲವು ಯಾರ ಬಲವು
ತಾಳಬೇಕು ವಿರಹ ನೋವು
ಅರಿತು ದಂಡಿಸಲು ಮನವು
ನೋಯಬೇಕು ನಾ।।
Subscribe to:
Post Comments (Atom)
ಅಣುವಿನಿಂದ ಅನಂತದವರೆಗೆ
ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment