ಮನವು ಮರಳಿ ನೆನಪಿಸುತಿದೆ
ಹಗಲುಗನಸನೆ ತೆರೆಯುತಿದೆ
ನೊಂದು ಬೆಂದು ಬದುಕುತಿರೆ
ಮತ್ತೆ ಬೇಕೆಂದಿದೆ।।
ತಪ್ಪಿ ಹೋದ ಭಾವಕೆ
ಮರಳಿ ಸಿಗದ ಪ್ರೀತಿಗೆ
ನರಳಿ ನರಳಿ ಬೇಯುತಿದೆ
ತನ್ನ ಭಾಗ್ಯಕೆ।।
ಸಿಗಲಾರದ ಹಣ್ಣಿಗೆ ಕೈ ಚಾಚಿ
ಎಟುಕಲಾರದೆ ತುಂಬಿರಲುನಿರಾಸೆ
ಜೀವನ ಪಯಣ ಹೇಗೋ ಸಾಗುತ್ತಿರಲು
ಮತ್ತೆ ಬಂದು ಕೆದಕಿದೆ
ಮನದಲಿ ನೂರು ಕಹಿ ನೆನೆಪುಗಳ।।
ಕಾಣುತಿದೆ ದೂರ ತೀರ
ಕಲಕುತಿದೆ ಎದೆಯನೀರ
ಏರುತ್ತಿದೆ ಹೃದಯ ಭಾರ
ತಾಳನಾದೆ ನಾ।।
ಯಾರ ಒಲವು ಯಾರ ಬಲವು
ತಾಳಬೇಕು ವಿರಹ ನೋವು
ಅರಿತು ದಂಡಿಸಲು ಮನವು
ನೋಯಬೇಕು ನಾ।।
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment