ಮನವು ಮರಳಿ ನೆನಪಿಸುತಿದೆ
ಹಗಲುಗನಸನೆ ತೆರೆಯುತಿದೆ
ನೊಂದು ಬೆಂದು ಬದುಕುತಿರೆ
ಮತ್ತೆ ಬೇಕೆಂದಿದೆ।।
ತಪ್ಪಿ ಹೋದ ಭಾವಕೆ
ಮರಳಿ ಸಿಗದ ಪ್ರೀತಿಗೆ
ನರಳಿ ನರಳಿ ಬೇಯುತಿದೆ
ತನ್ನ ಭಾಗ್ಯಕೆ।।
ಸಿಗಲಾರದ ಹಣ್ಣಿಗೆ ಕೈ ಚಾಚಿ
ಎಟುಕಲಾರದೆ ತುಂಬಿರಲುನಿರಾಸೆ
ಜೀವನ ಪಯಣ ಹೇಗೋ ಸಾಗುತ್ತಿರಲು
ಮತ್ತೆ ಬಂದು ಕೆದಕಿದೆ
ಮನದಲಿ ನೂರು ಕಹಿ ನೆನೆಪುಗಳ।।
ಕಾಣುತಿದೆ ದೂರ ತೀರ
ಕಲಕುತಿದೆ ಎದೆಯನೀರ
ಏರುತ್ತಿದೆ ಹೃದಯ ಭಾರ
ತಾಳನಾದೆ ನಾ।।
ಯಾರ ಒಲವು ಯಾರ ಬಲವು
ತಾಳಬೇಕು ವಿರಹ ನೋವು
ಅರಿತು ದಂಡಿಸಲು ಮನವು
ನೋಯಬೇಕು ನಾ।।
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
No comments:
Post a Comment