ಸಹಬಾಳ್ವೆಗೆ ಸಮರಸ ಭಾವ


ಅಶಾಂತಿ ಅಜ್ಞಾನವು ಜಗದಲಿ ಪಸರಿಸೆ ಅಂಧಕಾರವು
ದೈವೀಗುಣಂಗಳ ವೈಭವವೇ ಶಾಂತಿ,ಜ್ಞಾನದ ಸಂಕೇತವು।
ಹಗಲು-ರಾತ್ರಿ ಸಮತೋಲನದಲ್ಲಿರೆ ಶ್ರೇಯಸ್ಸು ಜೀವಿಗಳಿಗೆ
ಅರಿವು-ಆಚಾರಗಳು ನಡೆ-ನುಡಿಯಲ್ಲಿ ಬೆರೆತಿರಲದುವುವೆ ಪ್ರಗತಿಯು||

ಸತ್ಯ-ಧರ್ಮ ಗಳು ಮೇಲೈಸೆ ಜಯದ ಹಾದಿ ಸುಗಮವು
ದಿನನಿತ್ಯದಲಿ ಆದರ್ಶಗಳು ಅಡಕವಾಗಿರಡುವೆ ಸಾರ್ಥಕ್ಯವು।
ಸುಖವನ್ನೊಂದೇ ಬೆನ್ನತಿಹ ನಾವು ಕಂಡೆವು ಬರೀ ನೋವುಗಳೇ
ಸುಖ-ದುಃಖ ಸಮರಸ ತತ್ವಗಳ ಮರೆತಾಗಿದೆ ಬಾಳು ಬರೀ ಬರಡು||

ನಮ್ಮ-ನಮ್ಮ ನಡುವಿನ ಮುಕ್ತ ಮನಗಳ ಮುಚ್ಚಿಹೆವು
ಸ್ವಾರ್ಥತನದಲಿ ಅಹಂಮಿಕೆಯ ಆಡಂಬರ ಹೆಚ್ಚಾದವು|
ನಮ್ಮ-ನಾವು ಅರಿಯದೇ ಹೇಗೆ ತಾನೇ ನಮ್ಮ ಉದ್ಧಾರವಾಗುವುದು
ನಿಲ್ಲದ ಕಾಲಕೆ ಸಮನಾಗಿ ನಾವು ಬದಲಾಗಬೇಕು ಮನವ ತೆರೆದು||

ನಾನು ನಾನೆಂಬ ಅಹಂಭಾವದಿಂದಲೇ ಕುರುಡು
ಅರ್ಥವಿಲ್ಲದ ಮಾತಿಗಳಿಗಿಂತ ಮೌನವ ತಬ್ಬುವುದೇ ಲೇಸು|
ಉರಿಯುವ ದೀಪ ತಾನುರಿದು ಪರರ ಬಾಳ ಬೆಳಗುವ ತೆರದಿ
ಉರಿಯದ ದೀಪ ಬೇರೊಂದು ದೀಪವ ಬೆಳಗಬಲ್ಲುದೇ -ಬರಿ ವ್ಯರ್ಥ ಪ್ರಲಾಪ||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...