Wednesday, October 31, 2012

ಕನ್ನಡ ಶೋಕಾಚರಣೆ


ಕನ್ನಡ ರಾಜ್ಯೋತ್ಸವ ದಿನ ಮುಂದಿದೆ
ನೀಲಂ ಎಲ್ಲೆಡೆಯಲ್ಲೂ ಆವರಿಸಿದ್ದಾಳೆ
ಮೂರು ದಿನದ ಶೋಕಾಚರಣೆಯಂತೆ
ಕಣ್ಣೀರು ಸುರಿಸುತ್ತಲೇ ಇರುತ್ತಾಳಂತೆ

ಕನ್ನಡದ ಧ್ವಜಕ್ಕೆ ಅಧೀಕೃತ ಮಾನ್ಯತೆಯಿಲ್ಲ
ರಾಜ್ಯ ಉಚ್ಛನ್ಯಾಯಲದ ತೀರ್ಪಿದು
ಧ್ವಜವನ್ನು ಹಾರಿಸುವ ಹಾಗಿಲ್ಲ
ಧ್ವಜ ಹಾರಿಸಲು ಕಟ್ಟು-ಪಾಡುಗಳಿಲ್ಲ
ಸರ್ಕಾರಕ್ಕೆ ಧ್ವಜ ನಮ್ಮದು,ಕನ್ನಡಿಗರ ಆಸ್ತಿ
ಎಂದು ಸಮರ್ಥಿಸಿಕೊಳ್ಳುವ ನೈತಿಕತೆಯಿಲ್ಲ
ಸಾಹಿತಿಗಳು,ಕನ್ನಡ ಸಂಘ ಸಂಸ್ಥೆಗಳು,ಲ(ಬು)ದ್ದಿ ಜೀವಿಗಳೂ
ಮೌನಕ್ಕೆ ಶರಣಾಗಿ ಕನ್ನಡ ನಾಡು,ನುಡಿ,ಸಂಸ್ಕೃತಿಗೆ ದ್ರೋಹಬಗೆದಿದ್ದಾರೆ
ಕನ್ನಡ ನುಡಿ ನಲುಗುತ್ತಿದೆ,ಸೊರಗುತ್ತಿದೆ ಕನ್ನಡನಾಡಲ್ಲೇ....
ಅದಕ್ಕೆ ಎಲ್ಲೆಡೆಯಲ್ಲೂ ಶೋಕಾಚರಣೆ,ಕಣ್ಣೀರ ಆರಾಧನೆ ’ನೀಲಂ’ನಿಂದ.

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...