Sunday, October 21, 2012

ಬಾರದ ಗೆಳೆಯ


ದಿನವೆಲ್ಲಾ ಕಾದರೂ
ಬಾರಲಿಲ್ಲವಲ್ಲಾ ಇವ
ಮರೆತನೇನೋ? ಆದರೂ
ಅರ್ಥಮಾಡಿಕೊಳ್ಳಲಿಲ್ಲವಲ್ಲಾ ಮನದ ಭಾವ||

ಮುಂಜಾನೆ ಬೇಗ ಎದ್ದು
ದಿನವಹಿ ಕೆಲಸಗಳನೆಲ್ಲಾ ಮುಗಿಸಿ
ಕಾಯುತ್ತಾ ಕುಳಿತ್ತಿದ್ದೆ,ಎಚ್ಚರಿಕೆಯಿಂದ ಎದ್ದು
ಕ್ಷಣಗಳು,ಗಂಟೆಗಳೂ ಜಾರಿಹೋದವೋ ನನ್ನ ಸಹಿಸಿ||

ಆದರೂ ಬೇಸರಿಸಲಿಲ್ಲ ಕಾಯಿಸಿ ಬಾರದಿದ್ದಕ್ಕೆ
ಹೊಸತೊಂದು ಚಿಂತನೆ ಮನದ ಅಂಗಳವ ತಲುಪಿತು
ನೀ ಬಂದಿದ್ದರೆ ಅವುಗಳಿಗೆಲ್ಲಾ ಕತ್ತರಿಬೀಳುತ್ತಿತ್ತು,ಧನ್ಯವಾದ ಅದಕ್ಕೆ
ನೂರೆಂಟು ಯೋಚನೆಗಳು,ಪುಸ್ತಕ,ಪಠ್ಯ,ಕವಿತೆ ಮನವ ಕಾಪಿಟ್ಟಿತು||

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...