Monday, October 15, 2012

ಸೋಮವಾರದ ಸಂಜೆ ಮಳೆ


ಸೋಮವಾರದ ಸಂಜೆ ಮಳೆಯೇ
ಬಂದೆ ಏಕೆ?
ಯಾರ ಕರೆಗೆ ಓಗೊಟ್ಟು ಬಂದೆ ಹೇಳು?
ಒಂದು ಕಡೆ ನಿನ್ನೊಡನೆ ಬಂದಿಹನು ಚಳಿರಾಯ;
ಮತ್ತೊಂದು ಕಡೆ ಕಣ್ಣಾಮುಚ್ಚಾಲೆ ಆಡುತಿಹನು ದೀಪರಾಯ;
ಒಂದು ಕಡೆ ಖುಷಿ ನೀ ಬಂದೆ ಎಂದು;
ಮತ್ತೋಂದೆಡೆ ದುಃಖ, ರಾಜಕಾರಣಿಗಳ ಮುಖವಾಡ ಕಳಚಲಿಲ್ಲವೆಂದು;
ಆಟ ಮುಗಿದಿದೆ
ಸೋತ ಆಟ ನಮ್ಮದು
ಗೆದ್ದವರು ಬೀಗುತ್ತಿದ್ದಾರೆ
ನಿನ್ನೆ,ಇಂದು,ನಾಳೆ......
ಗೆದ್ದವರ ಗರ್ಜನೆ
ಸೋತವರ ಕಣ್ಣೀರು
ನಾಳೆಗೆ ಏನನ್ನೋ ಬಿಟ್ಟು ತೆರಳುತ್ತಿದೆ
ಕತ್ತಲ ತೋಳತೆಕ್ಕೆಯಲ್ಲಿ ಅದ್ವೈತ ಮೊಳಗುತ್ತಿದೆ
ನಾಳೆಯ ಕನಸಿಗೆ ನಿದ್ರಾದೇವಿ ಸೆರಗಹಾಸುತ್ತಾ
ಜಾರುತ್ತಿರುವ ಇರುಳು ಎಲ್ಲರ ಬಾಯಿಮುಚ್ಚಿಸಿದೆ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...