ಕಾವೇರಿಯ ಕನವರಿಕೆ




ಏಕಾದರೂ ಈ ಮಳೆರಾಯ ಬರಲಿಲ್ಲವೋ ನಾ ಕಾಣೆ
ಪ್ರತಿ ವರ್ಷ ಬಂದೇ ಬರುತ್ತಾನೆ ಎಂದು ಎಲ್ಲರಿಗೂ ತಿಳಿದಿದೆ
ಆದರೆ ಈ ವರ್ಷ ಏನಾಗಿದೆಯೋ ತಿಳಿದಿಲ್ಲ||

ಇವ ಬರದೆ ದೊಡ್ಡ ಅವಾಂತರ ಮಾಡಿದ್ದಾನೆ
ನಾ ಹುಟ್ಟಿ ಮುಂದೆ ಸಾಗುವೆಡೆಯಲೆಲ್ಲಾ
ಈಗ ತುಂಬಿದೆ ಎಲ್ಲೆಲ್ಲೂ ಕಸಿವಿಸಿ
ಆತಂಕ ತುಂಬಿದೆ ,
ಧರಣಿ, ಬಂದ್,ಸತ್ಯಾಗ್ರಹ,ಚಳುವಳಿಗಳು
ಎಲ್ಲವೂ ಇಂದು ಬೀದಿಗೆ ಬಂದಿದೆ ನನಗಾಗಿ
ಕಾರಣ ಇಂದು ಬರಿದಾಗಿದೆ ನನ್ನ ಒಡಲು ನಿನ್ನಿಂದ ಅದಕ್ಕೆ||

ನಾನು ಈಗಲೂ ಹರಿಯುತ್ತಿದ್ದೇನೆ
ಆದರೆ ತುಂಬಿ ತುಳುಕುತ್ತಿಲ್ಲ
ಪ್ರವಾಹದ ಪರಿಸ್ಥಿತಿಯಂತೂ ಖಂಡಿತ ಇಲ್ಲ
ಇದೇ ಎಲ್ಲರ ಚಿಂತೆಗೂ ಕಾರಣ||

ತಮಿಳರಿಗೂ ,ಕನ್ನಡಿಗರಿಗೂ ಜಗಳ ನನ್ನಿಂದ
ನಾನು ತುಂಬಿ ತುಳುಕಿದರೆ ಎಲ್ಲವೂ ಶಾಂತ ,ನಿರ್ಮಲ
ಮಳೆರಾಯ ನೀನು ಮಳೆಹುಯ್ಯಲಿಲ್ಲ
ಹುಯ್ದೆ ವೈಮನಸ್ಯದ ಬೀಜ ನನ್ನ ಮೂಲಕ||

ಸಾಕು ಸಾಕು.....
ಜಯ, ಕರುಣಾನಿಧಿ,ವೈಕೋರ ಆರ್ಭಟ
ಕನ್ನಡಿಗರಲ್ಲಿ ಆತಂಕ
ರಾಜಕಾರಣಿಗಳ ಮುಖಕಳಚುವುದು
ಕನ್ನಡಿಗರ ಪಾಲಿಗೆ ಕಹಿದಿನ
ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ
ಜನರ ಕಣ್ಣೀರು ಒರೆಸುವವರು ಯಾರೂ ಇಲ್ಲ
ಮಳೆರಾಯ ಮರೆಯದೇ ಬಾ ...
ಕನ್ನಡಿಗರ ಕಣ್ಣೀರು ಒರೆಸು
ನನ್ನ ನೀ ಸಲುಹು ಬಾ....||


No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...