Wednesday, October 31, 2012

ಒಳಗಿನ ಬೇಗುದಿ


ಬೆಂದು ಹೋಗಿದ್ದೇನೆ ಒಳಗಿನ ಅಸಮಾಧಾನದ ಬಿಸಿಯ ಹೊಗೆಯಿಂದ
ಬೇರೆ ದಾರಿ ಕಾಣದೆ ಒಳಒಳಗೇ ನರಳುತ್ತಿದ್ದೇನೆ,ಬೇಯುತ್ತಿದ್ದೇನೆ ತಾಳ್ಮೆಯ ದಹಿಸಿ ದಹಿಸಿ
ಎಷ್ಟು ದಿನ ಬೇಯಬೇಕೋ? ಅರಿಯೇ, ಮುಂದೆ ದಾರಿಯೇನೋ? ಅದನ್ನೂ ನಾನರಿಯೇ!
ಎಲ್ಲವೂ ನಿನ್ನ ಪದಕಮಲಗಳಲ್ಲಿ ಅರ್ಪಿಸಿದ್ದೇನೆ ದೇವ, ಕರುಣೆಯ ತೋರುವಿಯೆಂದು.
ದೇವಾ, ತಾಳ್ಮೆಯ ಕೈಹಿಡಿದಿದ್ದೇನೆ ದಾಟಿಸುವೆಯೋ?,ಮುಳುಗಿಸುವೆಯೋ?
ಎಲ್ಲವೂ ನಿನ್ನ ತಾಳ್ಮೆಯ ಮೇಲೇ ನಿಂತಿದೆ ದೇವ,ನಾನು ನಿನಗೆ ಶರಣಾಗಿದ್ದೇನೆ.

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...