Wednesday, October 31, 2012

ಒಳಗಿನ ಬೇಗುದಿ


ಬೆಂದು ಹೋಗಿದ್ದೇನೆ ಒಳಗಿನ ಅಸಮಾಧಾನದ ಬಿಸಿಯ ಹೊಗೆಯಿಂದ
ಬೇರೆ ದಾರಿ ಕಾಣದೆ ಒಳಒಳಗೇ ನರಳುತ್ತಿದ್ದೇನೆ,ಬೇಯುತ್ತಿದ್ದೇನೆ ತಾಳ್ಮೆಯ ದಹಿಸಿ ದಹಿಸಿ
ಎಷ್ಟು ದಿನ ಬೇಯಬೇಕೋ? ಅರಿಯೇ, ಮುಂದೆ ದಾರಿಯೇನೋ? ಅದನ್ನೂ ನಾನರಿಯೇ!
ಎಲ್ಲವೂ ನಿನ್ನ ಪದಕಮಲಗಳಲ್ಲಿ ಅರ್ಪಿಸಿದ್ದೇನೆ ದೇವ, ಕರುಣೆಯ ತೋರುವಿಯೆಂದು.
ದೇವಾ, ತಾಳ್ಮೆಯ ಕೈಹಿಡಿದಿದ್ದೇನೆ ದಾಟಿಸುವೆಯೋ?,ಮುಳುಗಿಸುವೆಯೋ?
ಎಲ್ಲವೂ ನಿನ್ನ ತಾಳ್ಮೆಯ ಮೇಲೇ ನಿಂತಿದೆ ದೇವ,ನಾನು ನಿನಗೆ ಶರಣಾಗಿದ್ದೇನೆ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...