Sunday, October 14, 2012

ಹೊಸತನಕ್ಕೆ.......


ಮನಸ್ಸಿನಿಂದ ಎಲ್ಲವನ್ನೂ ಕಿತ್ತುಹಾಕಿದ್ದೇನೆ
ಅನೇಕ ಯೋಚನೆಗಳನ್ನು, ನೋವುಗಳನ್ನು,ತೆವಲುಗಳನ್ನು
ಕಷ್ಟ-ನಷ್ಟಗಳನ್ನು,ಆಕ್ರೋಶವನ್ನು......
ಮನದ ತುಂಬೆಲ್ಲಾ ಹರಡಿ
ಕೊಳೆತು ನಾರುತಿತ್ತು
ಎಷ್ಟು ದಿನ  ಗಬ್ಬುನಾತ ತಡೆದುಕೊಳ್ಳಲಿ
ಕೊನೆ ಎಂಬುದು ಎಲ್ಲಕ್ಕೂ ಇರುತ್ತದಲ್ಲವೇ?
ಇಂದು ನಿರಾಳವೆನಿಸುತ್ತಿದೆ
ನಾನು ಯಾರಿಗೂ ಹೆದರಬೇಕಾಗಿಲ್ಲ;
ಯಾರಿಗೂ ಜೀ ಹುಜೂರ್ ಎಂದು ಸಲಾಮು ಹೊಡೆಯಬೇಕಾಗಿಲ್ಲ;
ಇಂದೇ ನನಗೆ ಸ್ವಾತಂತ್ರ ಸಿಕ್ಕಿತೇನೋ ಎಂಬಷ್ಟು ಹರ್ಷವಿದೆ ಮನದಲ್ಲಿ
ಆದರೂ ಇಷ್ಟು ದಿನ ಯಾರಿಗಾಗಿ ಹೆದರಿದೆ,ಬೆದರಿದೆ
ಒಂದೂ ಗೊತ್ತಿಲ್ಲ ಹುಚ್ಚು ಮನಸ್ಸು
ಬೆದರಿ ಮುದುರಿತ್ತು;
ಎಲ್ಲಾ ಬೇಡಿಗಳನ್ನೂ ಕಳಚಿದ್ದೇನೆ;
ಮುಕ್ತಗೊಳಿಸಿದ್ದೇನೆ
ಹೊಸ ದಿನಕ್ಕೆ;
ಹೊಸ ಬೆಳಕಿಗೆ
ಹೊಸತನಕ್ಕೆ.......

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...