Wednesday, October 31, 2012

ನೀಲಂ


ಬೆಳಗಲೇ ಬೇಕು ಕತ್ತಲಾದ ನಂತರ
ಅದೇ ಅಲ್ಲವೇ ದಿನಚರಿ
ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿತ್ತು ನಿನ್ನೆ
      ಬೆಳಕು ಬರಲೇ ಇಲ್ಲ
ಏಕೆಂದರೆ ಎಲ್ಲೆಡೆಯಲ್ಲೂ ವ್ಯಾಪಿಸಿದ್ದಳು ನೀಲಂ
ಮಂಕು ಕವಿದಿದ್ದ ಆಕಾಶರಾಜ
ಸೂರ್ಯತೇಜ ಎಂದಿನಂತೆ ಬರಲಿಲ್ಲವೆಂದು
ಆಗಸದಲ್ಲಿ ಎಲ್ಲೆಲ್ಲೂ ಶೋಕಾಚರಣೆ
ಬೆಳಗಿನಿಂದಲೇ ಶುರುವಿಟ್ಟಿದ್ದ ಕಣ್ಣೀರು ಹರಿಸಲು
ಮೂರು ದಿನ ಸ್ವಾಂತನಗೊಳಿಸುವಳಂತೆ ನೀಲಂ.




ಸೂಚನೆ: ’ನೀಲಂ’ ಚಂಡಮಾರುತದ ಹೆಸರು
ದಿನಾಂಕ: ೩೧,೧೦,೨೦೧೨ ರಿಂದ ೨.೧೧.೨೦೧೨ ರವರೆಗೂ ಬೆಂಗಳೂರಿನಲ್ಲಿ ಮಳೆಯ ಜೊತೆಗೆ ಚಳಿಯನ್ನೂ ತರುತ್ತೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ. ಅದರಂತೆ ೩೧ ಹಾಗು ೧ ನೇ ನವೆಂಬರ್ ೨೦೧೨ ರಂದು ಮಳೆಯದೇ  ರಾಜ್ಯಭಾರ.

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...