Saturday, October 6, 2012

ಕಾವೇರಿ




ತಾಯೇ ನಿನಗೆ ಯಾರಾದರೂ ಶಾಪವಿತ್ತಿದ್ದಾರೆಯೇ?
ಜನರ ಜನರ ನಡುವೆ ಏರಿದೆ ನಿನಗಾಗಿ ಕಾವು

ನೀನು ತುಂಬಿ ಹರಿದರೆ
ಎಲ್ಲರಿಗೂ ಸಂತೋಷ,ಸಮಾಧಾನ
ಎಲ್ಲರ ಮುಖಗಳಲ್ಲಿ ನಗು,ಸುಖ ಎಲ್ಲೆಡೆಯಲ್ಲೂ

ರಾಗ-ಧ್ವೇಷಗಳು ನಿನ್ನಲ್ಲಿ ಇಲ್ಲ
ಆದರೆ ನಿನ್ನ ಬಳಸುವ ನಮಗೆ ಏಕಿದೆ ತಿಳಿಯೆವು
ನಿನ್ನ ಮೇಲಿನ ಪ್ರೀತಿಯಿಂದಲೋ ನಾವರಿಯೆವು

ಕನ್ನಡ ಜನರ ಜೀವ ನೀನು;
ನಮ್ಮ ಭಾವನೆ ನೀನು;
ನಮ್ಮ ತಾಯಿ ನೀನು;
ನಿನ್ನ ಪ್ರೀತಿಯ ಹಂಚಿಕೊಂಡಿದ್ದೇವೆ ತಮಿಳು ಜನರೊಡನೆ ನಿಸ್ವಾರ್ಥವಾಗಿ
ಆದರೆ ಅವರಿಗೆ ನಿನ್ನ ಮೇಲೆ ಅತಿಯಾಸೆ, ನಮ್ಮ ಮೇಲೆ ಧ್ವೇಷ
ನಿನ್ನನ್ನು ನಮ್ಮಿಂದ ಕಿತ್ತುಕೊಳ್ಳುವ ಯತ್ನ ಇಂದು ನಿನ್ನೆಯದಲ್ಲ

ನಾವು ನೀರಿಲ್ಲದೆ ಸೊರಗುತ್ತಿದ್ದೇವೆ
ಸರಿಯಾಗಿ ಮಳೆಯಿಲ್ಲದೆ
ಆದರೂ ಅವರಿಗೆ ನಾವು ನಿನ್ನನ್ನು ಬಿಟ್ಟುಕೊಡಬೇಕು
ಮಾನವೀಯತೆ ಇಲ್ಲದ ಅವರ ವರ್ತನೆ ಸರಿಯೇ?

ನಮ್ಮ ರಾಜಕೀಯ ನಾಯಕರೂ ಸರಿಯಾಗೇ ಇದ್ದಾರೆ
ಜನರ ಭಾವನೆಗಳೊಡನೆ ಚಲ್ಲಾಟವಾಡುತ್ತಾರೆ
ಅವರವರ ಸ್ವಾರ್ಥಕೆ ಬೆಲೆಕೊಟ್ಟು
ನಿನ್ನನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡರು
ಮೊಸಳೆ ಕಣ್ಣೀರು ಮಾತ್ರ ಸುರಿಸುತ್ತಾರೆ
ಬುಗಿಲೆದ್ದಾಗ ಆಕ್ರೋಶ;
ಒಗ್ಗಟ್ಟಿಲ್ಲದೆ ನಾವು ನಿನ್ನನ್ನು ಕಳೆದುಕೊಳ್ಳುತ್ತಿದ್ದೇವೆ
ನಮ್ಮಲ್ಲಿ ಆತ್ಮಸ್ತೈರ್ಯ ತುಂಬು ತಾಯೆ...
ಆದರೂ ನಮಗೆ ಸಂಶಯ ನಿನಗಾರಾದರೂ ಶಾಪವಿತ್ತಿದ್ದಾರೆಯೇ
ನಿನ್ನ ಮಕ್ಕಳೆ ಬಡಿದಾಡಿ ಸಾಯಲಿ ಎಂದು....
ಬಾ ತಾಯಿ ಬಾ ಶಾಂತಿಯ ಮೇಳೈಸಿ ಬಾ.

No comments:

Post a Comment

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...