ಕಣ್ಣುಮುಚ್ಚಿ ತೆಗೆಯುವುದರೊಳಗೆ
ವರುಷಗಳೇ ಉರುಳಿಹೋಗಿದೆ
ಅಂತರಾಳದ ದುಃಖ ಬಾಯ್ತೆರೆದು
ಸಂತಸದ ಕ್ಷಣಗಳನೆ ನುಂಗಿದೆ ।।
ನಾನು ಪ್ರೀತಿಸಿದ ಗೆಳೆಯರು
ಬಂದರು, ಅಲೆಯಂತೆ ಹೋದರು
ಕಾಲಮಾತ್ರ ಮುಂದೆ ಸಾಗಿದೆ ನಿಲ್ಲದೆ
ಗಾಳಿ ಬಂಡ ಕಡೆ ನಾವು ತೆರೆಳಿದೆವು||
ಜೀವನ ಎಂದೂ ಸುಖದ ಹಾದಿಯಲ್ಲ
ಕಷ್ಟ ಪರಿಶ್ರಮಗಳೇ ತುಂಬಿವೆ ದಿನನಿತ್ಯ
ದಿನದ ಪಾತ್ರಯೊಳ ಮೌಲ್ಯವೀ ಕಾಲ
ಹಾಳುಮಾಡಿದೆವು ಅರ್ಥಮಾಡಿಕೊಳ್ಳದೆ।।
ನಮ್ಮ ಕಾಲ ಮೇಲೆ ನಾವು ನಿಂತಿದ್ದೇವೆ
ನಮ್ಮ ದಾರಿಯೂ ನಮಗೆ ತಿಳಿದಿದೆ
ರಾತ್ರಿಯ ಕತ್ತಲ್ಲಲ್ಲಿ ಜೋಗುಳದ ಕಣ್ಣೀರು
ಕತ್ತಲು ಕಳೆದು ಹೊಸದಿನ ಮೂಡಲು ತಿಳಿಮನ||
ಹತ್ತು ಹಲವು ವಸ್ತುಗಳ ಖರೀದಿಸಿದೆವು
ಯಾವುವೂ ನೀಡಲಿಲ್ಲ ಮನದಲ್ಲಿ ತೃಪ್ತಿ
ನೋವು,ಸಂಕಟ ದುಗುಡ ದಿನವೂ
ಬೆಳೆಯುತ್ತಿದೆ ನಾವೇ ಬೆಳೆಸಿದ ಬೆಳೆಯಾಗಿ||
ಎಲ್ಲಿಂದ ಬಂದವೋ ನಾ ಕಾಣೆ
ದುಗುಡವೆಲ್ಲವೂ ಮಂಗಮಾಯ ದಿನದಾಂತ್ಯದಲ್ಲಿ
ನಿಟ್ಟುಸಿರು ,ಸಮಾಧಾನ ಎಲ್ಲಾ ದಿಕ್ಕಿನಿಂದ
ನಾವು ಮಾಡಿದ ಅದಾವುದೋ ಉಪಕಾರದಿಂದ||
ಪ್ರೇರಣೆ: ಅನಾಮಿಕ
Wednesday, January 15, 2020
ಜೀವನ ಆನಂದ
ನನ್ನ ಜೀವನ ದಾರಿಕಾಣದೆ
ಒಮ್ಮೊಮ್ಮೆ ಬೇಸರ ಮೂಡಿಸುತ್ತದೆ
ಇರಲಾರದೆ ಮನ ಚಡಪಡಿಸುತ್ತಿದೆ
ದೂರದಿಂದ ನೋಡುವವರಿಗೆ ಅದೇ ಅಚ್ಚರಿ
ನನ್ನ ಜೀವನದ ಕನಸು ಅವರಿಗೆ .....
ಹಳ್ಳಿಯ ಕಾಲುದಾರಿಯಲ್ಲಿ ಸಾಗುವ ಮಗುವಿಗೆ
ಆಕಾಶದಲ್ಲಿ ಹಾರುವ ವಿಮಾನದಲ್ಲಿ ತೇಲುವ ಕನಸು
ಸ್ವಚ್ಚಂದವಾಗಿ ಓಡಾಡುವ ಹಳ್ಳಿಯ ಮಗುವ
ಕಾಣುವ ವಿಮಾನದ ಚಾಲಕನಿಗೆ
ಹಳ್ಳಿಯ ಮಗುವಾಗುವ ಕನಸು ಅವನಿಗೆ....
ಅದೇ ಜೀವನ, ನಮ್ಮದು ಅದ ಅನುಭವಿಸಬೇಕು
ಸಂಪ್ಪತ್ತೇ ಜೀವನದ ಸುಖವಾದಲ್ಲಿ
ಶ್ರೀಮಂತರೆಲ್ಲಾ ರಸ್ತೆಗಳಲ್ಲಿ ಕುಣಿದಾಡುತ್ತಿದ್ದರು
ಆದರೆ ಬಡವರ ಮಕ್ಕಳು ರಸ್ತೆಗಳಲ್ಲಿ ಕುಣಿವರು....
ಅಧಿಕಾರವೇ ರಕ್ಷಣೆಯ ಪರ್ಯಾಯವಾಗಿದ್ದರೆ
ಅಧಿಕಾರಿಗಳು,ರಾಜಕಾರಣಿಗಳಾರೂ
ಪೋಲೀಸರ ರಕ್ಷಣೆ ಪಡೆಯುತ್ತಿರಲಿಲ್ಲ...
ಸಾಮಾನ್ಯರೇ ಹೆಚ್ಚು ಸುರಕ್ಷಿತರು ಹಾಗು ಪರಮ ಸುಖಿಗಳು ....
ಸೌಂದರ್ಯ ಹಾಗು ಪ್ರಖ್ಯಾತಿ ಒಳ್ಳೆಯ
ಸಂಬಂಧಗಳನ್ನು ಬಲಪಡಿಸುವಂತಿದ್ದರೆ
ಪ್ರಖ್ಯಾತರು,ತಾರೆಗಳೆಲ್ಲರದ್ದೂ ಒಳ್ಳೆಯ ದಾಂಪತ್ಯವೆನಿಸುತ್ತಿತ್ತು...
ಸರಳವಾಗಿ ಬಾಳು,
ನಮ್ರನಾಗಿ ಒಂಟಿಯಾಗಿ ಹೆಜ್ಜೆ ಹಾಕು,
ಪ್ರೀತಿ ಮೌಲ್ಯಯುತವಾಗಿರಲಿ
ಎಲ್ಲವು ಒಳ್ಳೆಯದೇ ಆಗುವುದು
ನಮ್ಮ ಹಾದಿ ಒಳ್ಳೆಯ ದಾರಿಯೇ ಆಗುವುದು ....
ಪ್ರೇರಣೆ: ಅನಾಮಿಕ
ಒಮ್ಮೊಮ್ಮೆ ಬೇಸರ ಮೂಡಿಸುತ್ತದೆ
ಇರಲಾರದೆ ಮನ ಚಡಪಡಿಸುತ್ತಿದೆ
ದೂರದಿಂದ ನೋಡುವವರಿಗೆ ಅದೇ ಅಚ್ಚರಿ
ನನ್ನ ಜೀವನದ ಕನಸು ಅವರಿಗೆ .....
ಹಳ್ಳಿಯ ಕಾಲುದಾರಿಯಲ್ಲಿ ಸಾಗುವ ಮಗುವಿಗೆ
ಆಕಾಶದಲ್ಲಿ ಹಾರುವ ವಿಮಾನದಲ್ಲಿ ತೇಲುವ ಕನಸು
ಸ್ವಚ್ಚಂದವಾಗಿ ಓಡಾಡುವ ಹಳ್ಳಿಯ ಮಗುವ
ಕಾಣುವ ವಿಮಾನದ ಚಾಲಕನಿಗೆ
ಹಳ್ಳಿಯ ಮಗುವಾಗುವ ಕನಸು ಅವನಿಗೆ....
ಅದೇ ಜೀವನ, ನಮ್ಮದು ಅದ ಅನುಭವಿಸಬೇಕು
ಸಂಪ್ಪತ್ತೇ ಜೀವನದ ಸುಖವಾದಲ್ಲಿ
ಶ್ರೀಮಂತರೆಲ್ಲಾ ರಸ್ತೆಗಳಲ್ಲಿ ಕುಣಿದಾಡುತ್ತಿದ್ದರು
ಆದರೆ ಬಡವರ ಮಕ್ಕಳು ರಸ್ತೆಗಳಲ್ಲಿ ಕುಣಿವರು....
ಅಧಿಕಾರವೇ ರಕ್ಷಣೆಯ ಪರ್ಯಾಯವಾಗಿದ್ದರೆ
ಅಧಿಕಾರಿಗಳು,ರಾಜಕಾರಣಿಗಳಾರೂ
ಪೋಲೀಸರ ರಕ್ಷಣೆ ಪಡೆಯುತ್ತಿರಲಿಲ್ಲ...
ಸಾಮಾನ್ಯರೇ ಹೆಚ್ಚು ಸುರಕ್ಷಿತರು ಹಾಗು ಪರಮ ಸುಖಿಗಳು ....
ಸೌಂದರ್ಯ ಹಾಗು ಪ್ರಖ್ಯಾತಿ ಒಳ್ಳೆಯ
ಸಂಬಂಧಗಳನ್ನು ಬಲಪಡಿಸುವಂತಿದ್ದರೆ
ಪ್ರಖ್ಯಾತರು,ತಾರೆಗಳೆಲ್ಲರದ್ದೂ ಒಳ್ಳೆಯ ದಾಂಪತ್ಯವೆನಿಸುತ್ತಿತ್ತು...
ಸರಳವಾಗಿ ಬಾಳು,
ನಮ್ರನಾಗಿ ಒಂಟಿಯಾಗಿ ಹೆಜ್ಜೆ ಹಾಕು,
ಪ್ರೀತಿ ಮೌಲ್ಯಯುತವಾಗಿರಲಿ
ಎಲ್ಲವು ಒಳ್ಳೆಯದೇ ಆಗುವುದು
ನಮ್ಮ ಹಾದಿ ಒಳ್ಳೆಯ ದಾರಿಯೇ ಆಗುವುದು ....
ಪ್ರೇರಣೆ: ಅನಾಮಿಕ
Tuesday, December 31, 2019
ಹೊಸ ದಿನದರ್ಶಿಕೆ
ಬಂದದ್ದೆಲ್ಲಾ ಬರಲಿ ಜೀವನ ಪ್ರೀತಿ ಉಳಿಯಲಿ
ಹಳೆ ದಿನದರ್ಶಿಕೆ ನಿನಗೆ ವಂದನೆಗಳು
ಪ್ರತಿದಿನದ ಉರುಳುವಿಕೆಯಲ್ಲಿ ನಿನ್ನ ಪಾತ್ರವೂ ಇದೆ
ಸದಾ ನಗುತ್ತಲೇ ತಾರೀಖುಗಳ ತೋರಿದವ ನೀನು
ನಮ್ಮ ಮನೋವಿಕಾರಗಳಿಗೆ ಸಾಕ್ಷಿ ನೀನೇ ....
ನಮ್ಮ ಕೋಪಗಳಿಗೆ ಮೊದಲು ಬಲಿಯಾದವ ನೀನು
ದುಃಖವೆನಗೆ ಇಂದೋ ಇಲ್ಲ ನಾಳೆಯೋ ನಿನ್ನ ಬದಲಿಸಬೇಕಿದೆ
ಒಮ್ಮೆ ನಕ್ಕು ಬಿಡು, ನಮ್ಮ ಹುಚ್ಚಾಟಗಳಿಗೆ
ನಿನ್ನ ಗೆಳೆಯನ ಆಹ್ವಾನಿಸುವ ಸುಸಮಯವಿದು
ಹೊಸ ವರುಷದ ದಿನದರ್ಶಿಕೆ ನಿನಗೆ ಸ್ವಾಗತ
ಹಳೆ ದಿನದರ್ಶಿಕೆ ನಿನಗೆ ವಂದನೆಗಳು
ಪ್ರತಿದಿನದ ಉರುಳುವಿಕೆಯಲ್ಲಿ ನಿನ್ನ ಪಾತ್ರವೂ ಇದೆ
ಸದಾ ನಗುತ್ತಲೇ ತಾರೀಖುಗಳ ತೋರಿದವ ನೀನು
ನಮ್ಮ ಮನೋವಿಕಾರಗಳಿಗೆ ಸಾಕ್ಷಿ ನೀನೇ ....
ನಮ್ಮ ಕೋಪಗಳಿಗೆ ಮೊದಲು ಬಲಿಯಾದವ ನೀನು
ದುಃಖವೆನಗೆ ಇಂದೋ ಇಲ್ಲ ನಾಳೆಯೋ ನಿನ್ನ ಬದಲಿಸಬೇಕಿದೆ
ಒಮ್ಮೆ ನಕ್ಕು ಬಿಡು, ನಮ್ಮ ಹುಚ್ಚಾಟಗಳಿಗೆ
ನಿನ್ನ ಗೆಳೆಯನ ಆಹ್ವಾನಿಸುವ ಸುಸಮಯವಿದು
ಹೊಸ ವರುಷದ ದಿನದರ್ಶಿಕೆ ನಿನಗೆ ಸ್ವಾಗತ
ಹೊಸ ಆಕಾಂಕ್ಷೆ
ಸರದಿಯಂತೆ ದಿನ, ಮಾಸ,ತಿಂಗಳುಗಳು ಜಾರಿದವು
ವರುಷದ ಕೊನೆಯ ದಿನಕ್ಕೆ ಬಂದು ನಿಂತಿಹೆವು
ನೋವೋ ನಲಿವೋ ವಿಷಾದದ ನಗೆ ಬೀರುತ್ತಾ
ಹೊಸ ವರುಷವ ಸ್ವಾಗತಿಸಲು ಸಿದ್ಧವಾಗಿಹೆವು||
ಹೊಸ ಹೊಸ ಆಕಾಂಕ್ಷೆಗಳೊಂದಿಗೆ
ಹೊಸ ಹೊಸ ಸಂಕಲ್ಪದೊಂದಿಗೆ ಕಾಯುತಿಹೆವು
ಹಳೇ ದೇಹ, ಹಳೇ ಮನಸ್ಸು ,ಹೊಸಹುರುಪು
ಭಯ,ಕುತೂಹಲ,ನೋವುಗಳು ಧೈರ್ಯ ತುಂಬಿಹವು||
ವರುಷದ ಕೊನೆಯ ದಿನಕ್ಕೆ ಬಂದು ನಿಂತಿಹೆವು
ನೋವೋ ನಲಿವೋ ವಿಷಾದದ ನಗೆ ಬೀರುತ್ತಾ
ಹೊಸ ವರುಷವ ಸ್ವಾಗತಿಸಲು ಸಿದ್ಧವಾಗಿಹೆವು||
ಹೊಸ ಹೊಸ ಆಕಾಂಕ್ಷೆಗಳೊಂದಿಗೆ
ಹೊಸ ಹೊಸ ಸಂಕಲ್ಪದೊಂದಿಗೆ ಕಾಯುತಿಹೆವು
ಹಳೇ ದೇಹ, ಹಳೇ ಮನಸ್ಸು ,ಹೊಸಹುರುಪು
ಭಯ,ಕುತೂಹಲ,ನೋವುಗಳು ಧೈರ್ಯ ತುಂಬಿಹವು||
Tuesday, December 24, 2019
ಗೆಳತೀ .....
ಹಾಗೆ ನೋಡಬೇಡ ಗೆಳತೀ
ಎದೆಯಲ್ಲಿ ಹೃದಯ ಬಡಿತ ಹೆಚ್ಚಾಗುವುದು
ನಿನ್ನ ತುಟಿಯಂಚಿನ ನಗುವು ಈ ಬಡಪಾಯಿಯ ಹೃದಯವ ಇರಿಯುವುದು
ಹೇಳು ಎಷ್ಟುಬಾರಿ ಕೊಲ್ಲುವೇ !
ಈ ಮನಸು,ಹೃದಯ ನಿನ್ನ ಕಣ್ಣಸನ್ನೆಗೆ ವಶವಾಗಿದೆ
ಹೃದಯ ಬಯಸಿದೆ ನಿನ್ನ ಸನಿಹ
ನಿನ್ನ ಮಾತುಗಳ ಕೇಳಬೇಕೆನಿಸಿದೆ ಈ ನನ್ನ ಕಿವಿಗಳಿಗೆ
ಹತ್ತಿರ ಬಂದು ಮಾತನಾಡು
ಸುಮ್ಮನೆ ವಾರೆನೋಟ ಬೀರಿ ನಕ್ಕು ಕೊಲ್ಲಬೇಡ
ನಿನ್ನ ನಗುವು, ಕಿಲಕಿಲ ಮಾತು
ನನ್ನನ್ನೆಲ್ಲಿಗೂ ಸೆಳೆದಿದೆ,ನಿನ್ನ ರೂಪ ಸತಾಯಿಸಿದೆ
ಕಣ್ಣ ತೆರೆದರೂ ನೀನೇ ...
ಕಣ್ಣ ಮುಚ್ಚಿದರೂ ನೀನೇ ,ಬೇಡ ಗೆಳತೀ ಹಿಂಸಿಸಬೇಡ
ದೂರ ಹೋಗಬೇಡ,ತಲ್ಲಣ ಮನದಲ್ಲಿ
ಬಂದುಬಿಡು ಸಪ್ತಪದಿ ತುಳಿದು ಬಾಳ ಪಯಣದಲ್ಲಿ ಒಂದಾಗೋಣ ।।
ಎದೆಯಲ್ಲಿ ಹೃದಯ ಬಡಿತ ಹೆಚ್ಚಾಗುವುದು
ನಿನ್ನ ತುಟಿಯಂಚಿನ ನಗುವು ಈ ಬಡಪಾಯಿಯ ಹೃದಯವ ಇರಿಯುವುದು
ಹೇಳು ಎಷ್ಟುಬಾರಿ ಕೊಲ್ಲುವೇ !
ಈ ಮನಸು,ಹೃದಯ ನಿನ್ನ ಕಣ್ಣಸನ್ನೆಗೆ ವಶವಾಗಿದೆ
ಹೃದಯ ಬಯಸಿದೆ ನಿನ್ನ ಸನಿಹ
ನಿನ್ನ ಮಾತುಗಳ ಕೇಳಬೇಕೆನಿಸಿದೆ ಈ ನನ್ನ ಕಿವಿಗಳಿಗೆ
ಹತ್ತಿರ ಬಂದು ಮಾತನಾಡು
ಸುಮ್ಮನೆ ವಾರೆನೋಟ ಬೀರಿ ನಕ್ಕು ಕೊಲ್ಲಬೇಡ
ನಿನ್ನ ನಗುವು, ಕಿಲಕಿಲ ಮಾತು
ನನ್ನನ್ನೆಲ್ಲಿಗೂ ಸೆಳೆದಿದೆ,ನಿನ್ನ ರೂಪ ಸತಾಯಿಸಿದೆ
ಕಣ್ಣ ತೆರೆದರೂ ನೀನೇ ...
ಕಣ್ಣ ಮುಚ್ಚಿದರೂ ನೀನೇ ,ಬೇಡ ಗೆಳತೀ ಹಿಂಸಿಸಬೇಡ
ದೂರ ಹೋಗಬೇಡ,ತಲ್ಲಣ ಮನದಲ್ಲಿ
ಬಂದುಬಿಡು ಸಪ್ತಪದಿ ತುಳಿದು ಬಾಳ ಪಯಣದಲ್ಲಿ ಒಂದಾಗೋಣ ।।
Thursday, December 19, 2019
ಬೆಳಕ ತವಕ
ಒಳಗೆ ನನ್ನೊಳಗೆ ಇಳಿಯುತಿಹೆನು
ಕತ್ತಲ ಪಾತಾಳದೊಳಗಡೆ ಬೆಳಕನರಸಿ
ಕತ್ತಲೆಂದಮೇಲೆ ಬೀಳುಗಳೇ ಹೆಚ್ಚು
ನಿಯಂತ್ರಣವಿಲ್ಲದ ಬೀಳುಗಳಿಗೆಲ್ಲೆ ಎಲ್ಲಿದೆ ?
ಮನದೊಳಗೆ ತವಕವೊಂದೇ ಬೆಳಕು,ಬೆಳಕು
ಜರ್ಜರಿತವಾಗಿಹ ಮನ ಸಾವಧಾನದಿ ಶಾಂತಿ ಶಾಂತಿ ಎಂದುಸುರಿದೆ ;
ಸೋಲುಗಳ ಸರಮಾಲೆಯನ್ನೇ ಹೊದ್ದವನು
ಸೋಲೆಂದರೆ ಮನದಲಿ ಭಯವುಳಿದಿಲ್ಲೆನಗೆ
ಸೋಲೆಮೆಟ್ಟಿಲಾಗಿಸಿ ಎದ್ದು ನಡೆವ ಶಕ್ತಿ-ಯುಕ್ತಿಯಿಹುದು
ಸತತ ಪ್ರಯತ್ನದ ಫಲವದು ನೋವನುಂಗಿ
ಇಂದೋ -ನಾಳೆಯೋ ಗುರಿ ತಲುಪುವೆ ಆ ಬೆಳಕಕಾಣುವ ತವಕವಿದೆ ಮನದಲ್ಲಿ;
ಕತ್ತಲ ಪಾತಾಳದೊಳಗಡೆ ಬೆಳಕನರಸಿ
ಕತ್ತಲೆಂದಮೇಲೆ ಬೀಳುಗಳೇ ಹೆಚ್ಚು
ನಿಯಂತ್ರಣವಿಲ್ಲದ ಬೀಳುಗಳಿಗೆಲ್ಲೆ ಎಲ್ಲಿದೆ ?
ಮನದೊಳಗೆ ತವಕವೊಂದೇ ಬೆಳಕು,ಬೆಳಕು
ಜರ್ಜರಿತವಾಗಿಹ ಮನ ಸಾವಧಾನದಿ ಶಾಂತಿ ಶಾಂತಿ ಎಂದುಸುರಿದೆ ;
ಸೋಲುಗಳ ಸರಮಾಲೆಯನ್ನೇ ಹೊದ್ದವನು
ಸೋಲೆಂದರೆ ಮನದಲಿ ಭಯವುಳಿದಿಲ್ಲೆನಗೆ
ಸೋಲೆಮೆಟ್ಟಿಲಾಗಿಸಿ ಎದ್ದು ನಡೆವ ಶಕ್ತಿ-ಯುಕ್ತಿಯಿಹುದು
ಸತತ ಪ್ರಯತ್ನದ ಫಲವದು ನೋವನುಂಗಿ
ಇಂದೋ -ನಾಳೆಯೋ ಗುರಿ ತಲುಪುವೆ ಆ ಬೆಳಕಕಾಣುವ ತವಕವಿದೆ ಮನದಲ್ಲಿ;
ಕಾಣದ ಸುಖವ ಅರಸುತ್ತಾ....
ಎಲ್ಲಿಂದಲೋ ಬಂದವರು ನಾವು
ಕಾದಿಹೆವು ನಾವು ನಮ್ಮ ದಾರಿ ಸವೆಸಲು
ಗಂಟು-ಮೂಟೆ ಹೊತ್ತೇ ಹೊರೆಟಿರುವೆವು
ಜೀವನದ ಮುಂಜಾವಿನಲ್ಲಿ ನಾನು-ಅವಳು;
ಹರೆಯದ ಕರೆಗೆ;
ಹಿರಿಯಜೀವಗಳ ಒತ್ತಾಸೆಗೆ ಒಂದಾದವರು;
ಸುಖ ದುಃಖ ಜೊತೆಜೊತೆಯಾಗಿ ಅನುಭವಿಸಿದವರು
ಹೊಂಗನಸುಗಳ ಬೆನ್ನೇರಿ ಹೊರಟವರು ನಾವು
ಆಗಿದ್ದ ಚೈತನ್ಯ ದೇಹದಲ್ಲಿ ಇಬ್ಬರಿಗೂ ಈಗಿಲ್ಲ;
ಜೀವನದ ಸಂಜೆಯಲ್ಲಿ ನಾವಿಬ್ಬರು ಕಾಯುತಿಹೆವು
ಮುಂದಿನ ದಾರಿ ಅದಾವುದೋ?
ರೈಲು ನಿಂತೇ ಯಿದೆ ,ಕೈಯಲ್ಲಿ ಟಿಕೇಟಿದೆ;
ಪಯಣ ಸಾಗದೆ ನಿಂತಿದೆ;
ನಾನು-ಅವಳು ಬಿಟ್ಟರೆ ಮತ್ಯಾರು ಅಲ್ಲಿಲ್ಲ
ಎಲ್ಲಿಂದಲೋ ಬಂದವರು
ಎತ್ತಲೋ ಹೊರಟವರು
ಕಾಣದ ಸುಖವ ಅರಸುತ್ತಾ....
ಕಾದಿಹೆವು ನಾವು ನಮ್ಮ ದಾರಿ ಸವೆಸಲು
ಗಂಟು-ಮೂಟೆ ಹೊತ್ತೇ ಹೊರೆಟಿರುವೆವು
ಜೀವನದ ಮುಂಜಾವಿನಲ್ಲಿ ನಾನು-ಅವಳು;
ಹರೆಯದ ಕರೆಗೆ;
ಹಿರಿಯಜೀವಗಳ ಒತ್ತಾಸೆಗೆ ಒಂದಾದವರು;
ಸುಖ ದುಃಖ ಜೊತೆಜೊತೆಯಾಗಿ ಅನುಭವಿಸಿದವರು
ಹೊಂಗನಸುಗಳ ಬೆನ್ನೇರಿ ಹೊರಟವರು ನಾವು
ಆಗಿದ್ದ ಚೈತನ್ಯ ದೇಹದಲ್ಲಿ ಇಬ್ಬರಿಗೂ ಈಗಿಲ್ಲ;
ಜೀವನದ ಸಂಜೆಯಲ್ಲಿ ನಾವಿಬ್ಬರು ಕಾಯುತಿಹೆವು
ಮುಂದಿನ ದಾರಿ ಅದಾವುದೋ?
ರೈಲು ನಿಂತೇ ಯಿದೆ ,ಕೈಯಲ್ಲಿ ಟಿಕೇಟಿದೆ;
ಪಯಣ ಸಾಗದೆ ನಿಂತಿದೆ;
ನಾನು-ಅವಳು ಬಿಟ್ಟರೆ ಮತ್ಯಾರು ಅಲ್ಲಿಲ್ಲ
ಎಲ್ಲಿಂದಲೋ ಬಂದವರು
ಎತ್ತಲೋ ಹೊರಟವರು
ಕಾಣದ ಸುಖವ ಅರಸುತ್ತಾ....
Thursday, December 12, 2019
ನಡೆಮುಂದೆ
ದೂರ ದೂರ ನಡೆದು ಬಂದು ವರುಷಗಳಾದವು
ಹಿಂತಿರುಗಿ ನೋಡಲು ಸವೆಸಿಹ ದಾರಿ ಅನನ್ಯವೇ!
ತೂಗು ಹಾಕಿದರೆ ಗಳಿಕೆಗಿಂತ ಕಳೆದುಕೊಂಡುದುದೇ ಹೆಚ್ಚು
ನಡೆದ ದಾರಿ ಸುಗಮವೇನು?ಪಟ್ಟ ಕಷ್ಟ ನಷ್ಟಗಳೆಷ್ಟು?
ನನ್ನವರೆಂದುಕೊಂಡವರೆಲ್ಲ ಬಹದೂರ ನಡೆದಿಹರು
ನಾನು ನಿಂತಲ್ಲಿಯೇ ನಿಂತ ಅನುಭವ,ಅಪಮಾನ
ನಿಷ್ಠೆಯಿಂ ಕೆಲಸಮಾಡುವವರಿಗಿದು ಕಾಲವಲ್ಲ
ಕುಹಕ ಕಪಟನಾಟಕ ಮಾಡುವವರಿಗಿದು ಸಕಾಲ
ನಮ್ಮಂತಹವರು ನಿಷ್ಠೆಯಿಂ ಮಾಡುವುದ ಇಷ್ಟಪಟ್ಟವರಿಲ್ಲ
ಎಲ್ಲವಂ ಬಲ್ಲಾತ ಕುಹಕ ನಗೆಬೀರಿ ಗೊತ್ತಿಲ್ಲದವನಂತೆ ನಿದ್ರಿಸಿಹನು
ಸಹನೆ,ತಾಳ್ಮೆ ನನಗಿಹುದೇನೆಂದು ಪರೀಕ್ಷಿಸುತಿಹನು
ಅಂಜದೆ,ಅಳುಕದೆ ಆವಫಲಕ್ಕೂ ಆಸೆಪಡದೆ ಮಾಡು ಕೆಲಸವಮ್
ನಿನ್ನ ಕರ್ತವ್ಯವ ಮಾಡು ಪಾಲಿಗೆ ಬಂದದ್ದು ಪಂಚಾಮೃತ
ಧ್ಯಾನಿಸು ಸಮಾಧಾನದಿಂ ನಡೆಯದುವೆ ಏಳಿಗೆಗೆ ದಾರಿ
ಮುಂದೆ ಕಾದಿಹುದು ಕಾಣದ ಭಾಗ್ಯದ ಹಾದಿ
ಮುಂದೆ ನಡೆ ಸಮಾಧಾನದಿ ಬೇಡ ಅವಿವೇಕ
ನಡೆ ಮುಂದೆ ನಡೆಮುಂದೆ ಕಾಲವಂ ನಂಬು
ನಿನ್ನ ಕೈಬಿಡದು ನಿಷ್ಠೆಯಿಂ ಮೌನದಿ ಸಾಧಿಸು ।।
ಹಿಂತಿರುಗಿ ನೋಡಲು ಸವೆಸಿಹ ದಾರಿ ಅನನ್ಯವೇ!
ತೂಗು ಹಾಕಿದರೆ ಗಳಿಕೆಗಿಂತ ಕಳೆದುಕೊಂಡುದುದೇ ಹೆಚ್ಚು
ನಡೆದ ದಾರಿ ಸುಗಮವೇನು?ಪಟ್ಟ ಕಷ್ಟ ನಷ್ಟಗಳೆಷ್ಟು?
ನನ್ನವರೆಂದುಕೊಂಡವರೆಲ್ಲ ಬಹದೂರ ನಡೆದಿಹರು
ನಾನು ನಿಂತಲ್ಲಿಯೇ ನಿಂತ ಅನುಭವ,ಅಪಮಾನ
ನಿಷ್ಠೆಯಿಂ ಕೆಲಸಮಾಡುವವರಿಗಿದು ಕಾಲವಲ್ಲ
ಕುಹಕ ಕಪಟನಾಟಕ ಮಾಡುವವರಿಗಿದು ಸಕಾಲ
ನಮ್ಮಂತಹವರು ನಿಷ್ಠೆಯಿಂ ಮಾಡುವುದ ಇಷ್ಟಪಟ್ಟವರಿಲ್ಲ
ಎಲ್ಲವಂ ಬಲ್ಲಾತ ಕುಹಕ ನಗೆಬೀರಿ ಗೊತ್ತಿಲ್ಲದವನಂತೆ ನಿದ್ರಿಸಿಹನು
ಸಹನೆ,ತಾಳ್ಮೆ ನನಗಿಹುದೇನೆಂದು ಪರೀಕ್ಷಿಸುತಿಹನು
ಅಂಜದೆ,ಅಳುಕದೆ ಆವಫಲಕ್ಕೂ ಆಸೆಪಡದೆ ಮಾಡು ಕೆಲಸವಮ್
ನಿನ್ನ ಕರ್ತವ್ಯವ ಮಾಡು ಪಾಲಿಗೆ ಬಂದದ್ದು ಪಂಚಾಮೃತ
ಧ್ಯಾನಿಸು ಸಮಾಧಾನದಿಂ ನಡೆಯದುವೆ ಏಳಿಗೆಗೆ ದಾರಿ
ಮುಂದೆ ಕಾದಿಹುದು ಕಾಣದ ಭಾಗ್ಯದ ಹಾದಿ
ಮುಂದೆ ನಡೆ ಸಮಾಧಾನದಿ ಬೇಡ ಅವಿವೇಕ
ನಡೆ ಮುಂದೆ ನಡೆಮುಂದೆ ಕಾಲವಂ ನಂಬು
ನಿನ್ನ ಕೈಬಿಡದು ನಿಷ್ಠೆಯಿಂ ಮೌನದಿ ಸಾಧಿಸು ।।
Thursday, December 5, 2019
ಚೆನ್ನಕೇಶವ
ಶೈವರು ಶಿವನೆನ್ನುವರು
ವೇದಾಂತಿಗಳು ಪರಬ್ರಹ್ಮನೆನ್ನುವರು
ಬೌದ್ಧರು ಬುದ್ಧನೆನ್ನುವರು
ನೈಯಾಯಿಕರು ಕರ್ತನೆನ್ನುವರು
ಜೈನರು ಜಿನನೆನ್ನುವರು
ಕಾಯಕ ಮಾಡುವವರಿಗದೆ ದೈವವೋ
ಮನಕೊಪ್ಪಿದ ಕೆಲಸವ ಆನಂದಿಸುವವನೇ ದೇವನು
ಆನಂದದಲಿ ಆನಂದನವನು
ಅನಂತದಲಿ ಅನಂತನವನು
ಎಲ್ಲರಿಗೂ ಒಬ್ಬನೇ ಅವನು
ಒಬ್ಬನಾದರೂ ನಾಮ ಮಾತ್ರ ಹಲವು
ಅವನೇ ಚೆನ್ನಿಗರಾ ಚೆನ್ನ ಬೇಲೂರಿನ ಚೆನ್ನಕೇಶವ ।।
ವೇದಾಂತಿಗಳು ಪರಬ್ರಹ್ಮನೆನ್ನುವರು
ಬೌದ್ಧರು ಬುದ್ಧನೆನ್ನುವರು
ನೈಯಾಯಿಕರು ಕರ್ತನೆನ್ನುವರು
ಜೈನರು ಜಿನನೆನ್ನುವರು
ಕಾಯಕ ಮಾಡುವವರಿಗದೆ ದೈವವೋ
ಮನಕೊಪ್ಪಿದ ಕೆಲಸವ ಆನಂದಿಸುವವನೇ ದೇವನು
ಆನಂದದಲಿ ಆನಂದನವನು
ಅನಂತದಲಿ ಅನಂತನವನು
ಎಲ್ಲರಿಗೂ ಒಬ್ಬನೇ ಅವನು
ಒಬ್ಬನಾದರೂ ನಾಮ ಮಾತ್ರ ಹಲವು
ಅವನೇ ಚೆನ್ನಿಗರಾ ಚೆನ್ನ ಬೇಲೂರಿನ ಚೆನ್ನಕೇಶವ ।।
Monday, December 2, 2019
ಬೆಳಕು ಹೊರಳುತಿದೆ ಬಾ...
ಸುತ್ತಲೂ ಹಬ್ಬಿಹುದು ಹಸಿರ ಸಿರಿ
ಕತ್ತಲು ಆವರಿಸುತ್ತಿದೆ ಬೆಳಕನುಂಗಿ
ಹೊಳೆಯಲ್ಲಿ ತೇಲಿಬರುತಿದೆ ಅನವರತ ಸಂಗೀತದ ಸುಧೆ
ಕೊಡದಲಿ ತುಂಬಿಹುದು ತಂಪನೆಯ ನೀರು
ಗೆಳತಿಯೋ ಕಳೆದುಹೋಗಿಹಳು ತನ್ನಿನಿಯನ ಧ್ಯಾನದಲ್ಲಿ
ಅವಳ ಮುಖವೋ ಹೊಳೆಯಿತಿಹುದು ಹುಣ್ಣಿಮೆಯ ಚಂದ್ರನಂತೆ
ಕಾದು ಕಾದು ನಾವಂತೂ ಸೋತು ಸೊರಗಿದೆವು
ಪ್ರಿಯೇ ! ಮರಳುವ ಬಾ... ಬೆಳಕು ಹೊರಳುತಿದೆ ಬಾ...
ನಾಡು ಕೈಬೀಸಿ ಕರೆಯುತಿದೆ ಮಂಗಳಮುಖಿ ಬಾರೆಂದು ।।
ಕತ್ತಲು ಆವರಿಸುತ್ತಿದೆ ಬೆಳಕನುಂಗಿ
ಹೊಳೆಯಲ್ಲಿ ತೇಲಿಬರುತಿದೆ ಅನವರತ ಸಂಗೀತದ ಸುಧೆ
ಕೊಡದಲಿ ತುಂಬಿಹುದು ತಂಪನೆಯ ನೀರು
ಗೆಳತಿಯೋ ಕಳೆದುಹೋಗಿಹಳು ತನ್ನಿನಿಯನ ಧ್ಯಾನದಲ್ಲಿ
ಅವಳ ಮುಖವೋ ಹೊಳೆಯಿತಿಹುದು ಹುಣ್ಣಿಮೆಯ ಚಂದ್ರನಂತೆ
ಕಾದು ಕಾದು ನಾವಂತೂ ಸೋತು ಸೊರಗಿದೆವು
ಪ್ರಿಯೇ ! ಮರಳುವ ಬಾ... ಬೆಳಕು ಹೊರಳುತಿದೆ ಬಾ...
ನಾಡು ಕೈಬೀಸಿ ಕರೆಯುತಿದೆ ಮಂಗಳಮುಖಿ ಬಾರೆಂದು ।।
Friday, November 29, 2019
ತಣಿಸು ಬಾ
ಕಣ್ಣ ಮುಚ್ಚಿದರೂ ಅವನದೇ ಚಿಂತೆ
ಕಣ್ಣತೆರೆದೆನೆಂದರೆ ಅವನಿಲ್ಲದ ನೆವ
ನಿದಿರೆಯ ಆಹ್ವಾನಿಸಿ ಅವನ ಕನಸ ಕಾಣ್ವಹಂಬಲ
ನಿದಿರೆಯನ್ನೂ ದೋಚಿದ ಕಳ್ಳನವನು
ನಿದಿರೆಯಲ್ಲೂ ಅವನ ಸೇರುವ ಹಂಬಲ ವ್ಯರ್ಥ
ಸೊರಗಿದೆ ಈ ತನುವು ಬಳಲಿದೆ ಈ ಮನ
ಚೈತನ್ಯವಾಗಿ ನೀ ಬಳಿ ಬರುವೆಯೆಂದು ಕಾದಿಹೆ
ನಿನ್ನ ತೋರುವ ದಿನವದಾವುದೋ ನಾ ಕಾಣೆ?
ಹಂಬಲದಿಂದೊಂದು ದಿನ ನಿನ್ನ ನೋಡುವ ಭರವಸೆ
ನಿದಿರೆ ನೀ ಬಾರದೆ ನಾ ಹೇಗೆ ಕಾಣಲಿ ಅವನ ಕನಸ ?
ಒಮ್ಮೆ ಬಂದು ಹೋಗು ಬಾ ಈ ವಿರಹವ ತಣಿಸು ಬಾ ।।
ಕಣ್ಣತೆರೆದೆನೆಂದರೆ ಅವನಿಲ್ಲದ ನೆವ
ನಿದಿರೆಯ ಆಹ್ವಾನಿಸಿ ಅವನ ಕನಸ ಕಾಣ್ವಹಂಬಲ
ನಿದಿರೆಯನ್ನೂ ದೋಚಿದ ಕಳ್ಳನವನು
ನಿದಿರೆಯಲ್ಲೂ ಅವನ ಸೇರುವ ಹಂಬಲ ವ್ಯರ್ಥ
ಸೊರಗಿದೆ ಈ ತನುವು ಬಳಲಿದೆ ಈ ಮನ
ಚೈತನ್ಯವಾಗಿ ನೀ ಬಳಿ ಬರುವೆಯೆಂದು ಕಾದಿಹೆ
ನಿನ್ನ ತೋರುವ ದಿನವದಾವುದೋ ನಾ ಕಾಣೆ?
ಹಂಬಲದಿಂದೊಂದು ದಿನ ನಿನ್ನ ನೋಡುವ ಭರವಸೆ
ನಿದಿರೆ ನೀ ಬಾರದೆ ನಾ ಹೇಗೆ ಕಾಣಲಿ ಅವನ ಕನಸ ?
ಒಮ್ಮೆ ಬಂದು ಹೋಗು ಬಾ ಈ ವಿರಹವ ತಣಿಸು ಬಾ ।।
Subscribe to:
Posts (Atom)
ರಾತ್ರಿ ಊಟ: ಧ್ಯಾನ
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
-
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...