ದೂರ ದೂರ ನಡೆದು ಬಂದು ವರುಷಗಳಾದವು
ಹಿಂತಿರುಗಿ ನೋಡಲು ಸವೆಸಿಹ ದಾರಿ ಅನನ್ಯವೇ!
ತೂಗು ಹಾಕಿದರೆ ಗಳಿಕೆಗಿಂತ ಕಳೆದುಕೊಂಡುದುದೇ ಹೆಚ್ಚು
ನಡೆದ ದಾರಿ ಸುಗಮವೇನು?ಪಟ್ಟ ಕಷ್ಟ ನಷ್ಟಗಳೆಷ್ಟು?
ನನ್ನವರೆಂದುಕೊಂಡವರೆಲ್ಲ ಬಹದೂರ ನಡೆದಿಹರು
ನಾನು ನಿಂತಲ್ಲಿಯೇ ನಿಂತ ಅನುಭವ,ಅಪಮಾನ
ನಿಷ್ಠೆಯಿಂ ಕೆಲಸಮಾಡುವವರಿಗಿದು ಕಾಲವಲ್ಲ
ಕುಹಕ ಕಪಟನಾಟಕ ಮಾಡುವವರಿಗಿದು ಸಕಾಲ
ನಮ್ಮಂತಹವರು ನಿಷ್ಠೆಯಿಂ ಮಾಡುವುದ ಇಷ್ಟಪಟ್ಟವರಿಲ್ಲ
ಎಲ್ಲವಂ ಬಲ್ಲಾತ ಕುಹಕ ನಗೆಬೀರಿ ಗೊತ್ತಿಲ್ಲದವನಂತೆ ನಿದ್ರಿಸಿಹನು
ಸಹನೆ,ತಾಳ್ಮೆ ನನಗಿಹುದೇನೆಂದು ಪರೀಕ್ಷಿಸುತಿಹನು
ಅಂಜದೆ,ಅಳುಕದೆ ಆವಫಲಕ್ಕೂ ಆಸೆಪಡದೆ ಮಾಡು ಕೆಲಸವಮ್
ನಿನ್ನ ಕರ್ತವ್ಯವ ಮಾಡು ಪಾಲಿಗೆ ಬಂದದ್ದು ಪಂಚಾಮೃತ
ಧ್ಯಾನಿಸು ಸಮಾಧಾನದಿಂ ನಡೆಯದುವೆ ಏಳಿಗೆಗೆ ದಾರಿ
ಮುಂದೆ ಕಾದಿಹುದು ಕಾಣದ ಭಾಗ್ಯದ ಹಾದಿ
ಮುಂದೆ ನಡೆ ಸಮಾಧಾನದಿ ಬೇಡ ಅವಿವೇಕ
ನಡೆ ಮುಂದೆ ನಡೆಮುಂದೆ ಕಾಲವಂ ನಂಬು
ನಿನ್ನ ಕೈಬಿಡದು ನಿಷ್ಠೆಯಿಂ ಮೌನದಿ ಸಾಧಿಸು ।।
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment