Thursday, December 5, 2019

ಚೆನ್ನಕೇಶವ

ಶೈವರು ಶಿವನೆನ್ನುವರು
ವೇದಾಂತಿಗಳು ಪರಬ್ರಹ್ಮನೆನ್ನುವರು
ಬೌದ್ಧರು ಬುದ್ಧನೆನ್ನುವರು
ನೈಯಾಯಿಕರು ಕರ್ತನೆನ್ನುವರು
ಜೈನರು ಜಿನನೆನ್ನುವರು
ಕಾಯಕ ಮಾಡುವವರಿಗದೆ ದೈವವೋ
ಮನಕೊಪ್ಪಿದ ಕೆಲಸವ ಆನಂದಿಸುವವನೇ ದೇವನು
ಆನಂದದಲಿ ಆನಂದನವನು
ಅನಂತದಲಿ ಅನಂತನವನು
ಎಲ್ಲರಿಗೂ ಒಬ್ಬನೇ ಅವನು
ಒಬ್ಬನಾದರೂ ನಾಮ ಮಾತ್ರ ಹಲವು
ಅವನೇ ಚೆನ್ನಿಗರಾ ಚೆನ್ನ ಬೇಲೂರಿನ ಚೆನ್ನಕೇಶವ ।।

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...