ಕಣ್ಣುಮುಚ್ಚಿ ತೆಗೆಯುವುದರೊಳಗೆ
ವರುಷಗಳೇ ಉರುಳಿಹೋಗಿದೆ
ಅಂತರಾಳದ ದುಃಖ ಬಾಯ್ತೆರೆದು
ಸಂತಸದ ಕ್ಷಣಗಳನೆ ನುಂಗಿದೆ ।।
ನಾನು ಪ್ರೀತಿಸಿದ ಗೆಳೆಯರು
ಬಂದರು, ಅಲೆಯಂತೆ ಹೋದರು
ಕಾಲಮಾತ್ರ ಮುಂದೆ ಸಾಗಿದೆ ನಿಲ್ಲದೆ
ಗಾಳಿ ಬಂಡ ಕಡೆ ನಾವು ತೆರೆಳಿದೆವು||
ಜೀವನ ಎಂದೂ ಸುಖದ ಹಾದಿಯಲ್ಲ
ಕಷ್ಟ ಪರಿಶ್ರಮಗಳೇ ತುಂಬಿವೆ ದಿನನಿತ್ಯ
ದಿನದ ಪಾತ್ರಯೊಳ ಮೌಲ್ಯವೀ ಕಾಲ
ಹಾಳುಮಾಡಿದೆವು ಅರ್ಥಮಾಡಿಕೊಳ್ಳದೆ।।
ನಮ್ಮ ಕಾಲ ಮೇಲೆ ನಾವು ನಿಂತಿದ್ದೇವೆ
ನಮ್ಮ ದಾರಿಯೂ ನಮಗೆ ತಿಳಿದಿದೆ
ರಾತ್ರಿಯ ಕತ್ತಲ್ಲಲ್ಲಿ ಜೋಗುಳದ ಕಣ್ಣೀರು
ಕತ್ತಲು ಕಳೆದು ಹೊಸದಿನ ಮೂಡಲು ತಿಳಿಮನ||
ಹತ್ತು ಹಲವು ವಸ್ತುಗಳ ಖರೀದಿಸಿದೆವು
ಯಾವುವೂ ನೀಡಲಿಲ್ಲ ಮನದಲ್ಲಿ ತೃಪ್ತಿ
ನೋವು,ಸಂಕಟ ದುಗುಡ ದಿನವೂ
ಬೆಳೆಯುತ್ತಿದೆ ನಾವೇ ಬೆಳೆಸಿದ ಬೆಳೆಯಾಗಿ||
ಎಲ್ಲಿಂದ ಬಂದವೋ ನಾ ಕಾಣೆ
ದುಗುಡವೆಲ್ಲವೂ ಮಂಗಮಾಯ ದಿನದಾಂತ್ಯದಲ್ಲಿ
ನಿಟ್ಟುಸಿರು ,ಸಮಾಧಾನ ಎಲ್ಲಾ ದಿಕ್ಕಿನಿಂದ
ನಾವು ಮಾಡಿದ ಅದಾವುದೋ ಉಪಕಾರದಿಂದ||
ಪ್ರೇರಣೆ: ಅನಾಮಿಕ
Wednesday, January 15, 2020
Subscribe to:
Post Comments (Atom)
ಅಣುವಿನಿಂದ ಅನಂತದವರೆಗೆ
ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment