ಎಲ್ಲಿಂದಲೋ ಬಂದವರು ನಾವು
ಕಾದಿಹೆವು ನಾವು ನಮ್ಮ ದಾರಿ ಸವೆಸಲು
ಗಂಟು-ಮೂಟೆ ಹೊತ್ತೇ ಹೊರೆಟಿರುವೆವು
ಜೀವನದ ಮುಂಜಾವಿನಲ್ಲಿ ನಾನು-ಅವಳು;
ಹರೆಯದ ಕರೆಗೆ;
ಹಿರಿಯಜೀವಗಳ ಒತ್ತಾಸೆಗೆ ಒಂದಾದವರು;
ಸುಖ ದುಃಖ ಜೊತೆಜೊತೆಯಾಗಿ ಅನುಭವಿಸಿದವರು
ಹೊಂಗನಸುಗಳ ಬೆನ್ನೇರಿ ಹೊರಟವರು ನಾವು
ಆಗಿದ್ದ ಚೈತನ್ಯ ದೇಹದಲ್ಲಿ ಇಬ್ಬರಿಗೂ ಈಗಿಲ್ಲ;
ಜೀವನದ ಸಂಜೆಯಲ್ಲಿ ನಾವಿಬ್ಬರು ಕಾಯುತಿಹೆವು
ಮುಂದಿನ ದಾರಿ ಅದಾವುದೋ?
ರೈಲು ನಿಂತೇ ಯಿದೆ ,ಕೈಯಲ್ಲಿ ಟಿಕೇಟಿದೆ;
ಪಯಣ ಸಾಗದೆ ನಿಂತಿದೆ;
ನಾನು-ಅವಳು ಬಿಟ್ಟರೆ ಮತ್ಯಾರು ಅಲ್ಲಿಲ್ಲ
ಎಲ್ಲಿಂದಲೋ ಬಂದವರು
ಎತ್ತಲೋ ಹೊರಟವರು
ಕಾಣದ ಸುಖವ ಅರಸುತ್ತಾ....
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment