Wednesday, November 30, 2011

ಜೀವನ ಒಂದು ಉಡುಗೊರೆ




ಇಂದು ನಿಷ್ಠುರ ಮಾತು ಹೇಳುವ ಮುನ್ನ-
ಯೋಚಿಸು ಮಾತನಾಡಲು ಅಶಕ್ತರಾದವರ ಬಗ್ಗೆ.

ಊಟದ ರುಚಿಯ ಬಗ್ಗೆ ದೂರುವ ಮುನ್ನ-
ಯೋಚಿಸು ಒಂದೊತ್ತಿನ ಊಟಕ್ಕೂ ಇಲ್ಲದವರ.

ಹೆಂಡತಿ ಅಥವಾ ಗಂಡನ ದೂರುವ ಮುನ್ನ-
ಯೋಚಿಸು ಜೊತೆ ಬೇಕೆಂದು ದೇವರಲ್ಲಿ ಮೊರೆಯಿಡುವವರ.

ಇಂದು ಜೀವನದ ಬಗ್ಗೆ ದೂರುವ ಮುನ್ನ-
ಯೋಚಿಸು ಅಕಾಲಿಕವಾಗಿ ನಮ್ಮನ್ನು ಅಗಲಿದವರ.

ಗಾಡಿಯಲ್ಲಿ ದೂರ ಹೋಗಬೇಕೆಂದು ಗೊಣಗುವ ಮುನ್ನ-
ಯೋಚಿಸು ಮತ್ತೆ ಮತ್ತೆ ಬರಿಗಾಲಲ್ಲಿ ನಡೆಯುವವರ.

ಮತ್ತೆ ನಿನಗೆ ದಣಿವಾದಾಗ ಹಾಗು ನಿನ್ನ ಕೆಲಸದ ಬಗ್ಗೆ ದೂರಿದಾಗ-
ಯೋಚಿಸು ಕೆಲಸವಿಲ್ಲದವರ,ವಿಕಲಚೇತನರ ಮತ್ತು ನಿನ್ನ ಜಾಗದಲ್ಲಿರಬೇಕಾದವರ.

ನಿಮ್ಮ ಮನಸ್ಸಿಗೆ ನೋವಾಗಿ ಭಾವನೆಗಳು ನಿಮ್ಮನ್ನು ಕಂಗೆಡಿಸಿದರೆ
ನಿಮ್ಮ ಮುಖದಲ್ಲಿ ನಗು ಹೊಮ್ಮಲಿ ಮತ್ತು ಯೋಚಿಸು
ನೀವಿನ್ನೂ ಜೀವಂತ ಮತ್ತು ಜಂಗಮ.

ಪ್ರೇರಣೆ: ಅರ್ಧ ಮನುಷ್ಯ-ಅರ್ಧ ಬೆಲೆಯ ಅಂಗಡಿ- ’ಪೆಂಗ್ ಶುಲಿನ್’ ನ ನೈಜ ಸತ್ಯಕಥೆ

Tuesday, November 22, 2011

ಕಾಯುವ ಸುಖ


ದಾರಿ ಕಾಯುತ್ತಾ ಕುಳಿತ್ತಿದ್ದೇನೆ
ದಾರಿಯ ಮಧ್ಯದಲ್ಲಿ ನಿನಗಾಗಿ
ನೀನು ಬರುವೆಯೆಂದು-ಬೇಗ ಬಾರೆಂದು
ಸುತ್ತಲೂ ತಿಳಿನೀಲಿಯಾಕಾಶ
ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು;
ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ;
ಎಲ್ಲವೂ ಮನದಲ್ಲಿ ಪುಳಕ ನೀನು ಬರುವೆಯೆಂದು
ತಂಗಾಳಿಯ ಸೌರಭ,ಸಂಜೆಯ ಸೂರ್ಯಕಿರಣಗಳು
ಕಾತರತೆಯ ಜೊತೆಗೆ ವಿರಹವನ್ನೂ ಹೆಚ್ಚಿಸಿದೆ
ಕಾತರತೆಯ ವಿರಹದಲ್ಲಿ ಬೇಯುತ್ತಾ ನಿನಗಾಗಿ ಕಾಯುತ್ತಿದ್ದೇನೆ
ಕಾತರತೆಯಲ್ಲಿಯೇ ನನ್ನ ಸುಖವನ್ನು ಕಾಣುತ್ತಿದ್ದೇನೆ
ಜೀವನ ಮೊದಲಿಗಿಂತಲೂ ಆಸಕ್ತಿದಾಯವಾಗಿದೆ-ಕಾತರತೆಯಿಂದ;
ಕಾಯುವ ಮನಸ್ಥಿತಿಯಲ್ಲಿರುವ ಸುಖ ಕಾಯುವವನಿಗೇ ಗೊತ್ತು;

Monday, November 21, 2011

ಬೌದ್ದಿಕ ದಾಸ್ಯದಿಂದ ಸ್ವಾತಂತ್ರದೆಡೆಗೆ........



ಒಂದು ಸಾಮ್ರಾಜ್ಯ ಸ್ಥಾಪನೆಗೆ
ಕಾರಣರು ಮೊರು ಜನ
ಧರ್ಮಗುರು;
ಜನ/ಮೊಲ ನಿವಾಸಿಗಳು/ಎಲ್ಲಿಂದಲೋ ಬಂದವರು/ಭಕ್ಷಕರು;
ಆಡಳಿತಗಾರರು/ರಾಜಕಾರಣಿಗಳು/so called ರಕ್ಷಕರು;
ತಮ್ಮ ಮೊಗಿನ ನೇರಕ್ಕೆ ಎಲ್ಲವನ್ನೂ ಬದಲಾಯಿಸುವರು;
ಅನನ್ಯತೆಯ,ವೈವಿಧತೆಯ ಹೊಸಕುವರು;
ಅದ್ಯಾವುದೋ ಧರ್ಮಗ್ರಂಥ;
ಕೊರಳಲ್ಲಿ ಧರ್ಮಚಿನ್ಹೆ-ತೂಗುಗತ್ತಿ;
ಶುಭ್ರ ಬಿಳಿವಸ್ತ್ರ ಮುಚ್ಚಿದ ದೇಹ;
ಬಟ್ಟೆಯ ಹಿಂದೆ ಕೆರಳಿದ ಕಪ್ಪು ಹೃದಯ;
ಕಾಯುತ್ತಿದೆ ಹೊಸಕಲು;
ರುಧಿರ ಪ್ರಿಯ-ದಾಹ ಹೆಚ್ಚಾಗಿದೆ;
ಸ್ವಂತಿಕೆಯ ಲೇವಡಿ,ಅಪಹಾಸ್ಯ;
ಹೊತ್ತಿಸುವುದು ನಮ್ಮಲ್ಲಿಯೇ ಕೀಳರಿಮೆ;
ನಮ್ಮನ್ನು ನಾವು ಸಾಯಿಸಿಕೊಳ್ಳುವ ಪ್ರಕ್ರಿಯೆಗೆ ತಳ್ಳುವರು;
ನಮ್ಮತನದ ಮೇಲೆ ನಾವೇ ದೌರ್ಜನ್ಯಮಾಡಿಕೊಳ್ಳುವೆವು;
ನಮ್ಮ ಭಾಷೆ;
ನಮ್ಮ ಸಂಸ್ಕೃತಿ;
ನಮ್ಮ ಧರ್ಮ;
ನಮ್ಮ ಆಚರಣೆ;
ನಮ್ಮ ನಂಬಿಕೆ;
ಎಲ್ಲವೂ ಕಸವಾಗುವುದು;
ಒಂದು ಜನರ ಸಂಸ್ಕೃತಿಯ ನಾವೇ ಹೊಸಕುವೆವು
ಯಾರದೋ ಮಾತುಕೇಳಿ;
ನಮ್ಮದಲ್ಲದ ಭಾಷೆ;
ನಮ್ಮದಲ್ಲದ ಸಂಸ್ಕೃತಿ;
ನಮ್ಮದಲ್ಲದ ಧರ್ಮ;
ನಮ್ಮದಲ್ಲದ ಆಚರಣೆ,ನಂಬಿಕೆಗಳಿಗೆ
ನಮ್ಮನ್ನು ನಾವು ಮಾರಿಕೊಳ್ಳುವೆವು
ನಾವೇ ಪರಕೀಯರಿಗೆ ಕೊರಳಪಟ್ಟಿಕೊಡುವೆವು
ನಮ್ಮನು ನಾವೇ ಗುಲಾಮಗಿರಿಗೆ ಒಪ್ಪಿಸಿಕೊಳ್ಳುವೆವು
ನಮ್ಮ ತಾಯಿ ನಮ್ಮ ಈ ಹೀನಾಯ ಸ್ಥಿತಿ ನೋಡಿ ದುಃಖಿಸುವಳು
ನಾವು ಮಾತ್ರ ಅಭಿವೃದ್ಧಿಹೊಂದಿದೆವೆಂದು ನಲಿಯುವೆವು
ನಮ್ಮದಲ್ಲದ ನಾಡಿನಲ್ಲಿ
ನಮ್ಮ ಹಿರಿಕರ ಆತ್ಮಗಳು
ದುಃಖಿಸುತ್ತಿವೆ ನಮ್ಮ ಪರಿಸ್ಥಿತಿಯ ಕಂಡು
ನಾವು ಮಾತ್ರ ನಗುತ್ತಿದ್ದೇವೆ ನಮ್ಮದೆಲ್ಲವನ್ನೂ ಕಳೆದುಕೊಂಡು||

"ಗೂಗಿ ವಾ ಥಿ ಆಂಗೋ" ನನ್ನು ನೆನೆಯುತ್ತಾ .....

Monday, November 7, 2011

"ನಾನು ನಿನ್ನನ್ನು ಪ್ರೀತಿಸುತ್ತೇನೆ..."


ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ "ಹಾಗೆಂದರೇನು?"

ನಿನಗಾಗ ೧೫ ವರ್ಷ, ನಾನು ನಿನಗೆ ಹೇಳಿದೆ" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಿನ್ನ ಕೆನ್ನೆ ಕೆಂಪೇರಿತು. ನೀನು ನಗುತ್ತಾ ,ಕೆಳಗೆ ನೆಲವನ್ನು ನೋಡುತ್ತಿದೆ ಕಾಲಲ್ಲಿ ಕೆರೆಯುತ್ತಾ...."

ನಿನಗಾಗ ೨೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿನ್ನ ತಲೆಯನ್ನ ನನ್ನ ಹೆಗಲ ಮೇಲಿಟ್ಟೆ ಮತ್ತು ನನ್ನ ಕೈಯನ್ನು ಹಿಡಿದೆ.. ನಿನ್ನಲ್ಲಿ ಭಯ ಆವರಿಸಿತ್ತು ನಾನು ಮರೆಯಾಗುವೆನೇನೋ ಎಂದು.

ನಿನಗಾಗ ೨೫ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಬೆಳಗಿನ ತಿಂಡಿ ತಯಾರುಮಾಡಿ ನನಗೆ ಬಡಿಸುತ್ತಾ ನನ್ನ ಹಣೆಗೆ ಮುತ್ತಿಡುತ್ತಾ ಹೇಳಿದೆ" ನೀವು ಬೇಗ ಏಳಿ,ತಡವಾಗುತ್ತಿದೆ..."

ನಿನಗಾಗ ೩೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ" ನೀವು ನಿಜವಾಗಿಲೂ ನನ್ನ ಪ್ರೀತಿಸುತ್ತಿದ್ದರೆ, ದಯವಿಟ್ಟು ಆಫೀಸಿನಿಂದ ಮನೆಗೆ ಬೇಗ ಬನ್ನಿ..."

ನಿನಗಾಗ ೪೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಮನೆಯ ಊಟದ ಟೇಬಲನ್ನು ಸ್ವಚ್ಛಗೊಳಿಸುತ್ತಿದ್ದೆ ಮತ್ತು ಹೇಳಿದೆ " ಆಯಿತು ನನ್ನವರೇ!, ಈಗ ಸಮಯವಾಗಿದೆ ಮಕ್ಕಳಿಗೆ ಓದಿನಲ್ಲಿ ಸಹಾಯ ಮಾಡಲು.."

ನಿನಗಾಗ ೫೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿಟ್ಟ್ ಮಾಡುತ್ತಿದ್ದೆ ಹಾಗು ನನ್ನನು ನೋಡಿ ನಕ್ಕೆ....

ನಿನಗಾಗ ೬೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನನ್ನನ್ನು ನೋಡಿ ನಕ್ಕೆ...

ನಿನಗಾಗ ೭೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಾವು ಕುಳಿತ್ತಿದ್ದೆವು ಕುರ್ಚಿಯ ಮೇಲೆ ನಮ್ಮ ಕನ್ನಡಕಗಳನ್ನು ಧರಿಸಿ. ನಾನು ನೀನು ಬರೆದ ೫೦ ವರ್ಷ ಹಿಂದೆ ಬರೆದ ಪ್ರೇಮ ಪತ್ರವನ್ನು ಓದುತ್ತಿದ್ದೆ, ನಮ್ಮಿಬ್ಬರ ಕೈಗಳು ಜೊತೆಯಾಗಿದ್ದವು...

ನಿನಗಾಗ ೮೦ ವರ್ಷ, ನೀನು ನನಗೆ ಹೇಳಿದೆ"" ನೀನು ನಿನ್ನನ್ನು ಪ್ರೀತಿಸುತ್ತೇನೆ ಎಂದು..."
ನಾನೇನೂ ಹೇಳಲಾಗಲಿಲ್ಲ ಆದರೆ ಅಳುತ್ತಿದ್ದೆ.

ಸೂಚನೆ: Face book ನಲ್ಲಿ ಬಂದಿದ್ದನ್ನು ಕನ್ನಡೀಕರಿಸಿದ್ದೇನೆ.

ಬಾ ನನ್ನ ಕವಿತಾ

ಬಾ ನನ್ನ ಕವಿತಾ
ಎಲ್ಲೂ ಹೋಗದೇ ನನ್ನಲ್ಲೇ ನೆಲೆಗೊಳ್ಳು ನಲಿಯುತಾ
ಬಾ ನನ್ನ ಕವಿತಾ||

ಇಲ್ಲೇ ಇದ್ದವಳು,ಇಲ್ಲೇ ಇರುವವಳು
ಕಣ್ಣು ತೆರೆದರೆ ಮಾಯವಾಗುವವಳು
ನನ್ನ ಪೆದ್ದುತನಕ್ಕೆ ನಸು ನಗುವವಳು
ಬಿಡದೇ ಸತಾಯಿಸುವ ಕಳ್ಳ ಸವಿತಾ||

ಮರೆತು ಹೋದಂತೆ ನಟಿಸಿ
ಯಾವುದನ್ನೂ ಮರೆಯದೆ ಎಲ್ಲವನ್ನೂ ಎಣಿಸಿ
ಯಾವುದಕ್ಕೂ ಜಗ್ಗದೆ ಮನದ ಶಕ್ತಿಯ ಗುಣಿಸಿ
ಸದಾ ಚೈತನ್ಯವ ಕೊಡುವ ಸವಿತಾ||

ಮನವು ನೋವಿಗೆ ಕುಗ್ಗಿದಾಗ
ಯಶಸ್ಸಿಗೆ ತಲೆ ತಿರುಗಿದಾಗ
ನಮ್ಮ ತಪ್ಪುಗಳು ಚಿಂತೆಯ ತಂದಾಗ
ಮನವ ಕುಗ್ಗಿಸದೇ,ಶಕ್ತಿಯ ತುಂಬುವ ಸವಿತಾ||

ಬಾ ನನ್ನ ಕವಿತಾ
ಏರು ಪೇರಿನ ಗಾಯನಾ
ಕೊನೆ ಮೊದಲಿಲ್ಲದ ಜೀವನಾ||

Sunday, November 6, 2011

’ಹೆಂಡತಿಯೇ ಪರಮಾಪ್ತ ಗೆಳೆಯ’

ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳು
ಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||

ಮಾತು ಮಾತುಗಳು ಮಧುರಗೊಂಡಿವೆ
ನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||

ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆ
ಹಳೆಯ ಅನುಭವ ಜೀವನಕ್ಕೆ ಶಕ್ತಿ,ದಾರಿದೀಪವಾಗಿದೆ||

ಕೊಂಡಿಗಳು ಹಲವು ಕಳಚಿಕೊಂಡಿವೆ
ಗೆಳೆತನಕ್ಕೆ ನಂಜು,ಅಪಾರ್ಥದ ಪರದೆ ಸತ್ಯವ ಮರೆಮಾಚಿದೆ||

ಜೀವನದ ಗಾಡಿ ನಿಲ್ಲದೇ ಸಾಗುತಿದೆ
ಏನೇ ಬರಲಿ ನಮ್ಮ ಸಂಸಾರದ ಗಾಡಿ ನೆಮ್ಮದಿ,ಶಾಂತಿ ಕದಡದೇ ಸಾಗಿದೆ||

ಯಾರೋ ಹೇಳಿದ ಮಾತು ನೆನೆಪಾಗುತ್ತಿದೆ
’ಹೆಂಡತಿಯೇ ಪರಮಾಪ್ತ ಗೆಳೆಯ’ಎಂಬ ಮಾತು ನಿಜವೆನಿಸುತ್ತಿದೆ||

Monday, October 31, 2011

ಕತ್ತಲು-ಬೆಳಕುಗಳ ಓಡಾಟ

ಒಬ್ಬಂಟಿಯಾಗಿ ನಡೆದು ದಣಿವಾರಿಸಿಕೊಳ್ಳಲು
ಮರದ ಕೆಳಗೆ ಕುಳಿತೆ,ಸಂಜೆಯಾಕಾಶವ ದಿಟ್ಟಿಸುತ್ತಾ
ಹಕ್ಕಿಗಳ ಚಿಲಿಪಿಲಿ ಸದ್ದು,
ಜಾರುತ್ತಿರುವ ಸೂರ್ಯನ ಕಿರಣಗಳಿಗೆ ಬೇಡಿಕೆಯಿಡುತ್ತಾ
ಪ್ರಚೋದಿಸು ಪ್ರಚೋದಿಸು
ನನ್ನ ಮನದ ಭಾವಗಳ
ಮನದ ಸಂಕೀರ್ಣತೆಗಳ ಹೊಡೆದುಹಾಕಿ
ಮನದ ದುಗುಡಗಳ ಹೊಸಕಿಹಾಕಿ
ಹೊಸತನಕ್ಕೆ ಓಂಕಾರ ಹಾಕು ಬಾರೆಂದು ಪ್ರಾರ್ಥಿಸುತ್ತೇನೆ
ಕತ್ತಲು ಕವಿಯುತ್ತಿದ್ದಂತೆ
ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮಂಗಮಾಯ
ಮನದಲ್ಲಿ ಗೊಂದಲ ಇಮ್ಮಡಿಯಾಗಿದೆ
ಮನದಲ್ಲಿ ಪ್ರಾರ್ಥನೆಯ ಗುಂಗು ತಿಳಿಯಾಗುತ್ತಿದೆ
ಮನೋವಿಕಾರ ತೀವ್ರವಾಗತೊಡಗಿದೆ
ನಡೆದ ದಣಿವು ತಣ್ಣಗಾಗಿದ್ದರೂ
ಹಣೆಯ ಮೇಲೆಲ್ಲಾ ಬೆವರಿನ ತೋರಣ
ತುಂತುರು ಮಳೆಯ ಹನಿಯಂತೆ ಜಾರತೊಡಗಿತು
ಎದುರಿಸಲಾಗದೆ,ತಡೆಯಲಾಗದೆ
ಆ ಕತ್ತಲಿನ ಸಂಕೋಲೆಯ ಬಿಡಿಸಿಕೊಳ್ಳಲು
ಬೆಳಕಿನತ್ತ ಓಡುತ್ತಿದ್ದೇನೆ
ಬೆಳಕಿನತ್ತ ಓಡುತ್ತಿದ್ದೇನೆ, ನಿಲ್ಲದೆ,ನಿಲ್ಲದೆ.

ಅಸಹಾಯಕತೆ

ಒಂದು ವರ್ಷದಿಂದ ಎಡಬಿಡದೆ ಹೊಡೆದಾಡುತ್ತಿದ್ದೇನೆ
ನನ್ನ ಸ್ವಾಭಿಮಾನಕ್ಕೆ ಹೊಡೆತ ಬಿದ್ದ ದಿನದಿಂದ ಇಂದಿನವರೆಗೂ
ಸತತವಾಗಿ ಮೌನ ಕದನ ನನ್ನಲ್ಲೇ ನಡೆಯುತ್ತಿದೆ||

ಮಾಡಿದ ಓಳ್ಳೆಯ ಕೆಲಸ ಗೌರವ ತಾರದೆ
ಇದ್ದ ಸ್ವಾಭಿಮಾನವನ್ನೂ ನಾಶಮಾಡಿದೆ
ಮನದ ತುಂಬೆಲ್ಲಾ ಕತ್ತಲು ಆವರಿಸದಂತಿದೆ, ಬೆಳಕು ಕಾಣದೆ||

ಒಂಟಿಯಾಗಿ ಹಿಮದ ಕೊರೆಯುವ ನೆಲದಲ್ಲಿ
ಬೆವೆತು ನಡೆಯುತ್ತಿದ್ದೇನೆ ದಾರಿ ಕಾಣದೆ
ಮುಂದೆ ಹೋದವರು ನಗುತ್ತಿದ್ದಾರೆ ನನ್ನ ಅಸಹಾಯಕತೆಯ ಕಂಡು||

ಕಂಡ ಕಂಡವರ ಮೇಲೆ ಗೂಳಿಯಂತೆ ನುಗ್ಗಬೇಕೆನಿಸುತ್ತದೆ
ಆದರೆ ಆತ್ಮಗೌರವ ಅಡ್ಡ ಬರುತ್ತದೆ
ಎಲ್ಲರನ್ನೂ ಬಿಟ್ಟುಬಿಡಬೇಕೆನಿಸುತ್ತದೆ,ಬಿಡಲಾಗದು ತಿಳಿದಿದೆ||

ಕಾಲ ಬುದ್ದಿ ಕಲಿಸಬೇಕೆಂದು ಬಯಸುತ್ತೇನೆ
ಅದು ನನಗೂ ಹಾಗು ನನ್ನನ್ನು ಹಿಂಸಿಸುವರೆಗೂ
ನನ್ನ ಅಸಹಾಯಕತೆ ನನಗೆ ಪಾಠಕಲಿಸುತ್ತದೆ,ಅದಕ್ಕೆ ಕಾತುರನಾಗಿದ್ದೇನೆ||

Sunday, October 30, 2011

ನಿರ್ಣಯ

ಒಮ್ಮೊಮ್ಮೆ ಏನೂ ಕಾಣದಾಗುತ್ತದೆ
ತಲೆಯಲ್ಲಿ ಶೂನ್ಯತೆ ಹೊಕ್ಕು ಖಿನ್ನತೆಗೆ ದೂಡುತ್ತದೆ
ಏಕೆ? ಏನು? ಒಂದೂ ಗೊತ್ತಾಗುವುದಿಲ್ಲ
ಹೊರಬರುವುದು ಕಷ್ಟವಾದರೂ
ಹೊರಬರಲೇ ಬೇಕಲ್ಲ!
ಬಿಡಿಸಿಕೊಳ್ಳಲಾಗದ ಈ ಯಾಂತ್ರಿಕತೆ
ಪ್ರತಿಯೊಂದರಲ್ಲೂ ಬೇಸರ ತರಿಸುತ್ತಿದೆ
ಹೊಸತನ ಬಯಸುತ್ತಿದ್ದೇನೆ
ಕಣ್ಣಿದ್ದೂ ಕುರುಡನಾಗಿದ್ದೇನೆ
ಮುಂದಿನ ದಾರಿ ಮಾತ್ರ ಕಾಣದಾಗಿದೆ
ದೀಪಾವಳಿ ಮುಗಿದಿದೆ
ಮನದಲ್ಲಿ ಮಾತ್ರ ಅರಿವಿನ ದೀಪ ಮೊಡಲಿಲ್ಲ
ಮನಕ್ಕೆ ಸಂತೋಷ ಎಲ್ಲಿಂದ ತರಲಿ
ಪೆಟ್ರೋಲ್,ಅನಿಲಗಳ ನಿತ್ಯಬಳಸುವ ದಿನಸಿಗಳ ಬೆಲೆಗಳು ಗಗನಕ್ಕೇರಿವೆ
ಶಾಸಕ,ಸಂಸದರ ಹಗರಣಗಳು ಅಸಹ್ಯಮೊಡಿಸುತ್ತಿದೆ
ರಾಜಕೀಯ ಬೇಸರಿಕೆ ಮೊಡಿಸುತ್ತಿದೆ
ಸಾಹಿತಿಗಳ ಗುಂಪುಗಾರಿಕೆ ಉಸಿರುಗಟ್ಟಿಸುತ್ತಿದೆ
ಆಫೀಸಿನಲ್ಲೋ ಚಮಚ,ಬಕೆಟುಗಳದ್ದೇ ಸದ್ದು
ಮೇಲಕ್ಕೇರಲಾಗದೆ,
ಕೆಳಗಿಯಲಾಗದೆ,
ಅತಂತ್ರ ಸ್ಥಿತಿಯಲ್ಲಿ ಬಳಲುತ್ತಿದ್ದೇನೆ
ಸಂತೋಷ,ಅಣ್ಣಾ ಮಾತ್ರ ಆಶಾಕಿರಣವಾಗಿದ್ದಾರೆ
ಮುಂದೆ ಹೋಗಲೇಬೇಕು
ಕಣ್ಣುಮುಚ್ಚಾದರೂ ಸರಿ ಕಾಲದೂಡುತ್ತೇನೆ
ಆ ಸರಿಯಾದ ಕಾಲಕ್ಕೆ, ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತೇನೆ

Friday, October 28, 2011

ಪಟಾಕಿಯ ಸದ್ದಡಗಿದ ಮೇಲೆ.....


ದೀಪಾವಳೀ ಎಂದೊಡನೆ ಎಲ್ಲೆಲ್ಲೂ ಬೆಳಕು
ಪಟಾಕಿಯ ಸದ್ದು, ಪಟಾಕಿಯ ಸುಟ್ಟ ಹೊಗೆ ಕೊಳಕು
ನರಕ ಚತುರ್ದಶಿ, ಅಮಾವಾಸ್ಯೆ,ಬಲಿಪಾಡ್ಯಮಿ ಮೊರು ದಿವಸ
ಶಿವಕಾಶಿಯ ಕೊಳೆತ ಕಾಗದವೆಲ್ಲಾ ಬೆಂಕಿಗಾಹುತಿಯ ದಿವಸ||

ದೀಪಾವಳಿ ಮನದ ಕೊಳಕನ್ನು ದೂರಮಾಡುವ ದಿವಸ
ಎಷ್ಟು ಜನ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೋ ತಿಳಿಯೆ
ಮನದ ಕತ್ತಲೆ ಪಟಾಕಿಯ ಶಬ್ಡಕ್ಕೆ ಮನದಲ್ಲೇ ಅಡಗಿ ಕುಳಿತಿತು ಹೊರಗೆ ಬರದೆ
ಶಬ್ಡ ಮಾಲಿನ್ಯ,ವಾಯುಮಾಲಿನ್ಯ,ಅಪಘಾತಗಳಲ್ಲಿ ಕಳೆದು ಹೋಯಿತು ದೀಪಾವಳಿ||

ವ್ಯಾಪಾರಿಗಳಿಗೆಲ್ಲಾ ಸುಗ್ಗಿಯ ದಿವಸ
ಕಸವ ಮಾರಿ ಗಳಿಸುವರು ಜೋಬಿನ ತುಂಬಾ ದುಡ್ಡು
ಪಟಾಕಿಯ ಸಿಡಿಸಿ ಪರಿಸರಕ್ಕೆ ಕೊಡುವೆವು ಮಾಲಿನ್ಯದ ಗುದ್ದು
ಪರಿಸರ ಪ್ರೇಮಿಯಾಗಿರದ ಪಟಾಕಿ ಬೇಕೆ? ನಮಗೆ ಚಿಂತಿಸಬೇಕು ಇಂದು||

ರಾತ್ರಿಯಿಡೀ ಶಬ್ದ, ಬೆಳಕು, ಮಾಲಿನ್ಯದ ಹೊಗೆ
ಮನೆಯಿಂದ ಹೊರ ಬರಲೇಯಿಲ್ಲ ನಾನು
ಬೆಳಿಗ್ಗೆ ಹೊರಟೆ ಆಫೀಸಿಗೆ ದಾರಿಯ ತುಂಬೆಲ್ಲಾ ಕಾಗದದ ರಾಶಿ ರಾಶಿ
BBMP ಕರ್ಮಚಾರಿಗಳ ಕೈಯಲ್ಲಿ ಕಸದ ಪೊರಕೆ
ಮುಖದಲ್ಲಿ ಕೋಪ,ಬಾಯಲ್ಲಿ ಬೈಗುಳ ಗೊಣಗಾಟ||

ಏಕೆ ಬರುವುದೋ ಈ ದೀಪಾವಳಿ
ಸಾಕು ಸಾಕು ಈ ಶಿವಕಾಶಿಯ ಕೊಳೆತ ಕಾಗದದ ಕಸದ ರಾಶಿ ರಾಶಿ
ಇನ್ನು ಮೇಲಾದರೂ ತಿಳಿಯೋಣ ಹಬ್ಬದ ಆದರ್ಶವ
ಬರೀ ಹಚ್ಚೋಣ ದೀಪ ಮನ ಮನದಲ್ಲಿ ,ಮನೆಯ ಅಂಗಳದಲ್ಲಿ||

Sunday, October 23, 2011

ರಸ್ತೆ ಸೂಚನಾ ಫಲಕ



ನಾನು ದಾರಿ ಸೂಚಕ,ರಸ್ತೆ ಸೂಚನಾ ಫಲಕ
ನನ್ನ ಕೆಲಸ ದಾರಿ ಹೋಕರಿಗೆ,ಪಥಿಕರಿಗೆ
ಅಲೆಮಾರಿಗಳಿಗೆ,ವಿಳಾಸ ಹುಡುಕುವವರಿಗೆ
ಸಹಾಯ ಮಾಡುವ ನಿರ್ಜೀವ ರಸ್ತೆ ಸೂಚಕ;
BBMPಯವರು ನನ್ನನ್ನಿಲ್ಲಿ ನಿಲ್ಲಿಸಿಹರು
ಬಣ್ಣ ಬಣ್ಣಗಳಿಂದ ಸಿಂಗರಿಸಿದರು
ರಸ್ತೆಯ ಬಲ ಭಾಗವೋ? ಎಡ ಭಾಗವೋ?
ಎಲ್ಲೋ ಒಂದು ಕಡೆ ನಿಲ್ಲಿಸಿ,
ಅದಕ್ಕೊಂದು ಹೆಸರ ನೀಡಿ
ನನ್ನ ಸೇವೆಗೆ ನಿಲ್ಲಿಸಿಹರು;
ಹಗಲು,ರಾತ್ರಿ,ಧೂಳು,ಮಳೆ
ಯಾವುದಕ್ಕೋ ಜಗ್ಗದೆ,
ಸದಾ ಜನರ ಸೇವೆಯಲ್ಲಿ ನಿಂತವನು ನಾನು
ಒಂದೊಂದು ರಸ್ತೆಯಲ್ಲಿ ಒಂದೊಂದು ಹೊಸ ಹೊಸ ಹೆಸರು ನನಗೆ
MG ರಸ್ತೆ,ಡಾ|| ರಾಜ್ ಕುಮಾರ್ ರಸ್ತೆ,ಡಾ|| ಮುತ್ತುರಾಜ್ ರಸ್ತೆ,
ಅತ್ತಿಮಬ್ಬೆ ರಸ್ತೆ, Bull temple ರಸ್ತೆ..........
ಹೆಸರೇನೋ ಗಣ್ಯರದ್ದೇ!......
ಆದರೆ ನಾನು ಮಾತ್ರ ನಗಣ್ಯ
ನನಗೋ ಹಿಗ್ಗು
ಅದರಿಂದ ಸ್ವಲ್ಪ ಅಹಂ
ಆ ಅಹಂ ನನ್ನ ಸೌಂದರ್ಯಕ್ಕೆ ದಕ್ಕೆ ತಂದಿದೆ
ಏನು ಹೇಳಲಿ? ಯಾರಿಗೆ ಹೇಳಲಿ? ನನ್ನ ಸಮಸ್ಯೆಯನ್ನ
ನನ್ನ ಸೌಂದರ್ಯ ಹಾಳಾಗಿದೆ;
ಹೊಸ ಬಣ್ಣ ಕಂಡು ವರ್ಷಗಳಾಗಿವೆ;
ಕಾಲು ಮುರಿದಿದೆ;
ಕೆಲವೊಮ್ಮೆ ಕನ್ನಡದ ಕೊಲೆಯೊ ನನ್ನ ಮೇಲೆಯೇ ಆಗುತ್ತದೆ
ತಪ್ಪು ತಪ್ಪಾದ ಕನ್ನಡದ ಪದಗಳನ್ನ ನನ್ನ ಮೇಲೆ ಬರೆದು;
ಈ ಸಣ್ಣ ಸಣ್ಣ ಜಾಹೀರಾತುದಾರರು ತಮ್ಮ ವ್ಯಾಪಾರದ ಜಾಹೀರಾತು
ಚೀಟಿಗಳನ್ನು ನನ್ನ ಮೇಲೇ ಅಂಟಿಸುವರು;
ಎಷ್ಟು ಅಂಟಿಸಿದ್ದಾರೆ ಎಂದರೆ
ನನ್ನ ಮೊಲ ಹೆಸರು ಮರೆಯಾಗಿದೆ;
ನನ್ನಿಂದ ಜನತೆಗೆ ತೊಂದರೆಯಾಗುತ್ತಿದೆ;
ರಸ್ತೆ ಹುಡುಕುವವರಿಗೆ ದಾರಿ ತೋರಲಾಗದೆ ಬಳಲುತ್ತಿದ್ದೇನೆ;
ಅಸಹಾಯಕ ಸ್ಥಿತಿಗೆ ನನ್ನನ್ನು ಈ ಜಾಹೀರಾತುದಾರರು ತಳ್ಳಿದ್ದಾರೆ;
ಮಾಹಿತಿ ಪಸರಿಸುವ ನನ್ನ ಕಾಯಕಕ್ಕೆ ಧಕ್ಕೆಯಾಗಿದೆ;
ನನ್ನ ನಿಲ್ಲಿಸಿದ BBMPಯವರಿಗೂ ನನ್ನ ಬಗ್ಗೆ ಗಮನವಿಲ್ಲ;
ನನ್ನ ಸ್ವಚ್ಛತೆಯ ಬಗ್ಗೆ ತಿರಸ್ಕಾರ;
ನಾನು ಮಾತ್ರ ಸೊರಗಿದ್ದೇನೆ,ನರಳುತ್ತಿದ್ದೇನೆ ಅಸಹಾಯಕನಾಗಿ;
ನನ್ನನ್ನು ರಕ್ಷಿಸಿ;ನನ್ನನ್ನು ರಕ್ಷಿಸಿ.

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...