ಬೌದ್ದಿಕ ದಾಸ್ಯದಿಂದ ಸ್ವಾತಂತ್ರದೆಡೆಗೆ........



ಒಂದು ಸಾಮ್ರಾಜ್ಯ ಸ್ಥಾಪನೆಗೆ
ಕಾರಣರು ಮೊರು ಜನ
ಧರ್ಮಗುರು;
ಜನ/ಮೊಲ ನಿವಾಸಿಗಳು/ಎಲ್ಲಿಂದಲೋ ಬಂದವರು/ಭಕ್ಷಕರು;
ಆಡಳಿತಗಾರರು/ರಾಜಕಾರಣಿಗಳು/so called ರಕ್ಷಕರು;
ತಮ್ಮ ಮೊಗಿನ ನೇರಕ್ಕೆ ಎಲ್ಲವನ್ನೂ ಬದಲಾಯಿಸುವರು;
ಅನನ್ಯತೆಯ,ವೈವಿಧತೆಯ ಹೊಸಕುವರು;
ಅದ್ಯಾವುದೋ ಧರ್ಮಗ್ರಂಥ;
ಕೊರಳಲ್ಲಿ ಧರ್ಮಚಿನ್ಹೆ-ತೂಗುಗತ್ತಿ;
ಶುಭ್ರ ಬಿಳಿವಸ್ತ್ರ ಮುಚ್ಚಿದ ದೇಹ;
ಬಟ್ಟೆಯ ಹಿಂದೆ ಕೆರಳಿದ ಕಪ್ಪು ಹೃದಯ;
ಕಾಯುತ್ತಿದೆ ಹೊಸಕಲು;
ರುಧಿರ ಪ್ರಿಯ-ದಾಹ ಹೆಚ್ಚಾಗಿದೆ;
ಸ್ವಂತಿಕೆಯ ಲೇವಡಿ,ಅಪಹಾಸ್ಯ;
ಹೊತ್ತಿಸುವುದು ನಮ್ಮಲ್ಲಿಯೇ ಕೀಳರಿಮೆ;
ನಮ್ಮನ್ನು ನಾವು ಸಾಯಿಸಿಕೊಳ್ಳುವ ಪ್ರಕ್ರಿಯೆಗೆ ತಳ್ಳುವರು;
ನಮ್ಮತನದ ಮೇಲೆ ನಾವೇ ದೌರ್ಜನ್ಯಮಾಡಿಕೊಳ್ಳುವೆವು;
ನಮ್ಮ ಭಾಷೆ;
ನಮ್ಮ ಸಂಸ್ಕೃತಿ;
ನಮ್ಮ ಧರ್ಮ;
ನಮ್ಮ ಆಚರಣೆ;
ನಮ್ಮ ನಂಬಿಕೆ;
ಎಲ್ಲವೂ ಕಸವಾಗುವುದು;
ಒಂದು ಜನರ ಸಂಸ್ಕೃತಿಯ ನಾವೇ ಹೊಸಕುವೆವು
ಯಾರದೋ ಮಾತುಕೇಳಿ;
ನಮ್ಮದಲ್ಲದ ಭಾಷೆ;
ನಮ್ಮದಲ್ಲದ ಸಂಸ್ಕೃತಿ;
ನಮ್ಮದಲ್ಲದ ಧರ್ಮ;
ನಮ್ಮದಲ್ಲದ ಆಚರಣೆ,ನಂಬಿಕೆಗಳಿಗೆ
ನಮ್ಮನ್ನು ನಾವು ಮಾರಿಕೊಳ್ಳುವೆವು
ನಾವೇ ಪರಕೀಯರಿಗೆ ಕೊರಳಪಟ್ಟಿಕೊಡುವೆವು
ನಮ್ಮನು ನಾವೇ ಗುಲಾಮಗಿರಿಗೆ ಒಪ್ಪಿಸಿಕೊಳ್ಳುವೆವು
ನಮ್ಮ ತಾಯಿ ನಮ್ಮ ಈ ಹೀನಾಯ ಸ್ಥಿತಿ ನೋಡಿ ದುಃಖಿಸುವಳು
ನಾವು ಮಾತ್ರ ಅಭಿವೃದ್ಧಿಹೊಂದಿದೆವೆಂದು ನಲಿಯುವೆವು
ನಮ್ಮದಲ್ಲದ ನಾಡಿನಲ್ಲಿ
ನಮ್ಮ ಹಿರಿಕರ ಆತ್ಮಗಳು
ದುಃಖಿಸುತ್ತಿವೆ ನಮ್ಮ ಪರಿಸ್ಥಿತಿಯ ಕಂಡು
ನಾವು ಮಾತ್ರ ನಗುತ್ತಿದ್ದೇವೆ ನಮ್ಮದೆಲ್ಲವನ್ನೂ ಕಳೆದುಕೊಂಡು||

"ಗೂಗಿ ವಾ ಥಿ ಆಂಗೋ" ನನ್ನು ನೆನೆಯುತ್ತಾ .....

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...