ಒಬ್ಬಂಟಿಯಾಗಿ ನಡೆದು ದಣಿವಾರಿಸಿಕೊಳ್ಳಲು
ಮರದ ಕೆಳಗೆ ಕುಳಿತೆ,ಸಂಜೆಯಾಕಾಶವ ದಿಟ್ಟಿಸುತ್ತಾ
ಹಕ್ಕಿಗಳ ಚಿಲಿಪಿಲಿ ಸದ್ದು,
ಜಾರುತ್ತಿರುವ ಸೂರ್ಯನ ಕಿರಣಗಳಿಗೆ ಬೇಡಿಕೆಯಿಡುತ್ತಾ
ಪ್ರಚೋದಿಸು ಪ್ರಚೋದಿಸು
ನನ್ನ ಮನದ ಭಾವಗಳ
ಮನದ ಸಂಕೀರ್ಣತೆಗಳ ಹೊಡೆದುಹಾಕಿ
ಮನದ ದುಗುಡಗಳ ಹೊಸಕಿಹಾಕಿ
ಹೊಸತನಕ್ಕೆ ಓಂಕಾರ ಹಾಕು ಬಾರೆಂದು ಪ್ರಾರ್ಥಿಸುತ್ತೇನೆ
ಕತ್ತಲು ಕವಿಯುತ್ತಿದ್ದಂತೆ
ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮಂಗಮಾಯ
ಮನದಲ್ಲಿ ಗೊಂದಲ ಇಮ್ಮಡಿಯಾಗಿದೆ
ಮನದಲ್ಲಿ ಪ್ರಾರ್ಥನೆಯ ಗುಂಗು ತಿಳಿಯಾಗುತ್ತಿದೆ
ಮನೋವಿಕಾರ ತೀವ್ರವಾಗತೊಡಗಿದೆ
ನಡೆದ ದಣಿವು ತಣ್ಣಗಾಗಿದ್ದರೂ
ಹಣೆಯ ಮೇಲೆಲ್ಲಾ ಬೆವರಿನ ತೋರಣ
ತುಂತುರು ಮಳೆಯ ಹನಿಯಂತೆ ಜಾರತೊಡಗಿತು
ಎದುರಿಸಲಾಗದೆ,ತಡೆಯಲಾಗದೆ
ಆ ಕತ್ತಲಿನ ಸಂಕೋಲೆಯ ಬಿಡಿಸಿಕೊಳ್ಳಲು
ಬೆಳಕಿನತ್ತ ಓಡುತ್ತಿದ್ದೇನೆ
ಬೆಳಕಿನತ್ತ ಓಡುತ್ತಿದ್ದೇನೆ, ನಿಲ್ಲದೆ,ನಿಲ್ಲದೆ.
Subscribe to:
Post Comments (Atom)
ಮೌನ ನೃತ್ಯ
ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment