ಒಬ್ಬಂಟಿಯಾಗಿ ನಡೆದು ದಣಿವಾರಿಸಿಕೊಳ್ಳಲು
ಮರದ ಕೆಳಗೆ ಕುಳಿತೆ,ಸಂಜೆಯಾಕಾಶವ ದಿಟ್ಟಿಸುತ್ತಾ
ಹಕ್ಕಿಗಳ ಚಿಲಿಪಿಲಿ ಸದ್ದು,
ಜಾರುತ್ತಿರುವ ಸೂರ್ಯನ ಕಿರಣಗಳಿಗೆ ಬೇಡಿಕೆಯಿಡುತ್ತಾ
ಪ್ರಚೋದಿಸು ಪ್ರಚೋದಿಸು
ನನ್ನ ಮನದ ಭಾವಗಳ
ಮನದ ಸಂಕೀರ್ಣತೆಗಳ ಹೊಡೆದುಹಾಕಿ
ಮನದ ದುಗುಡಗಳ ಹೊಸಕಿಹಾಕಿ
ಹೊಸತನಕ್ಕೆ ಓಂಕಾರ ಹಾಕು ಬಾರೆಂದು ಪ್ರಾರ್ಥಿಸುತ್ತೇನೆ
ಕತ್ತಲು ಕವಿಯುತ್ತಿದ್ದಂತೆ
ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮಂಗಮಾಯ
ಮನದಲ್ಲಿ ಗೊಂದಲ ಇಮ್ಮಡಿಯಾಗಿದೆ
ಮನದಲ್ಲಿ ಪ್ರಾರ್ಥನೆಯ ಗುಂಗು ತಿಳಿಯಾಗುತ್ತಿದೆ
ಮನೋವಿಕಾರ ತೀವ್ರವಾಗತೊಡಗಿದೆ
ನಡೆದ ದಣಿವು ತಣ್ಣಗಾಗಿದ್ದರೂ
ಹಣೆಯ ಮೇಲೆಲ್ಲಾ ಬೆವರಿನ ತೋರಣ
ತುಂತುರು ಮಳೆಯ ಹನಿಯಂತೆ ಜಾರತೊಡಗಿತು
ಎದುರಿಸಲಾಗದೆ,ತಡೆಯಲಾಗದೆ
ಆ ಕತ್ತಲಿನ ಸಂಕೋಲೆಯ ಬಿಡಿಸಿಕೊಳ್ಳಲು
ಬೆಳಕಿನತ್ತ ಓಡುತ್ತಿದ್ದೇನೆ
ಬೆಳಕಿನತ್ತ ಓಡುತ್ತಿದ್ದೇನೆ, ನಿಲ್ಲದೆ,ನಿಲ್ಲದೆ.
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
No comments:
Post a Comment