Sunday, October 30, 2011

ನಿರ್ಣಯ

ಒಮ್ಮೊಮ್ಮೆ ಏನೂ ಕಾಣದಾಗುತ್ತದೆ
ತಲೆಯಲ್ಲಿ ಶೂನ್ಯತೆ ಹೊಕ್ಕು ಖಿನ್ನತೆಗೆ ದೂಡುತ್ತದೆ
ಏಕೆ? ಏನು? ಒಂದೂ ಗೊತ್ತಾಗುವುದಿಲ್ಲ
ಹೊರಬರುವುದು ಕಷ್ಟವಾದರೂ
ಹೊರಬರಲೇ ಬೇಕಲ್ಲ!
ಬಿಡಿಸಿಕೊಳ್ಳಲಾಗದ ಈ ಯಾಂತ್ರಿಕತೆ
ಪ್ರತಿಯೊಂದರಲ್ಲೂ ಬೇಸರ ತರಿಸುತ್ತಿದೆ
ಹೊಸತನ ಬಯಸುತ್ತಿದ್ದೇನೆ
ಕಣ್ಣಿದ್ದೂ ಕುರುಡನಾಗಿದ್ದೇನೆ
ಮುಂದಿನ ದಾರಿ ಮಾತ್ರ ಕಾಣದಾಗಿದೆ
ದೀಪಾವಳಿ ಮುಗಿದಿದೆ
ಮನದಲ್ಲಿ ಮಾತ್ರ ಅರಿವಿನ ದೀಪ ಮೊಡಲಿಲ್ಲ
ಮನಕ್ಕೆ ಸಂತೋಷ ಎಲ್ಲಿಂದ ತರಲಿ
ಪೆಟ್ರೋಲ್,ಅನಿಲಗಳ ನಿತ್ಯಬಳಸುವ ದಿನಸಿಗಳ ಬೆಲೆಗಳು ಗಗನಕ್ಕೇರಿವೆ
ಶಾಸಕ,ಸಂಸದರ ಹಗರಣಗಳು ಅಸಹ್ಯಮೊಡಿಸುತ್ತಿದೆ
ರಾಜಕೀಯ ಬೇಸರಿಕೆ ಮೊಡಿಸುತ್ತಿದೆ
ಸಾಹಿತಿಗಳ ಗುಂಪುಗಾರಿಕೆ ಉಸಿರುಗಟ್ಟಿಸುತ್ತಿದೆ
ಆಫೀಸಿನಲ್ಲೋ ಚಮಚ,ಬಕೆಟುಗಳದ್ದೇ ಸದ್ದು
ಮೇಲಕ್ಕೇರಲಾಗದೆ,
ಕೆಳಗಿಯಲಾಗದೆ,
ಅತಂತ್ರ ಸ್ಥಿತಿಯಲ್ಲಿ ಬಳಲುತ್ತಿದ್ದೇನೆ
ಸಂತೋಷ,ಅಣ್ಣಾ ಮಾತ್ರ ಆಶಾಕಿರಣವಾಗಿದ್ದಾರೆ
ಮುಂದೆ ಹೋಗಲೇಬೇಕು
ಕಣ್ಣುಮುಚ್ಚಾದರೂ ಸರಿ ಕಾಲದೂಡುತ್ತೇನೆ
ಆ ಸರಿಯಾದ ಕಾಲಕ್ಕೆ, ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತೇನೆ

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...