ಒಂದು ವರ್ಷದಿಂದ ಎಡಬಿಡದೆ ಹೊಡೆದಾಡುತ್ತಿದ್ದೇನೆ
ನನ್ನ ಸ್ವಾಭಿಮಾನಕ್ಕೆ ಹೊಡೆತ ಬಿದ್ದ ದಿನದಿಂದ ಇಂದಿನವರೆಗೂ
ಸತತವಾಗಿ ಮೌನ ಕದನ ನನ್ನಲ್ಲೇ ನಡೆಯುತ್ತಿದೆ||
ಮಾಡಿದ ಓಳ್ಳೆಯ ಕೆಲಸ ಗೌರವ ತಾರದೆ
ಇದ್ದ ಸ್ವಾಭಿಮಾನವನ್ನೂ ನಾಶಮಾಡಿದೆ
ಮನದ ತುಂಬೆಲ್ಲಾ ಕತ್ತಲು ಆವರಿಸದಂತಿದೆ, ಬೆಳಕು ಕಾಣದೆ||
ಒಂಟಿಯಾಗಿ ಹಿಮದ ಕೊರೆಯುವ ನೆಲದಲ್ಲಿ
ಬೆವೆತು ನಡೆಯುತ್ತಿದ್ದೇನೆ ದಾರಿ ಕಾಣದೆ
ಮುಂದೆ ಹೋದವರು ನಗುತ್ತಿದ್ದಾರೆ ನನ್ನ ಅಸಹಾಯಕತೆಯ ಕಂಡು||
ಕಂಡ ಕಂಡವರ ಮೇಲೆ ಗೂಳಿಯಂತೆ ನುಗ್ಗಬೇಕೆನಿಸುತ್ತದೆ
ಆದರೆ ಆತ್ಮಗೌರವ ಅಡ್ಡ ಬರುತ್ತದೆ
ಎಲ್ಲರನ್ನೂ ಬಿಟ್ಟುಬಿಡಬೇಕೆನಿಸುತ್ತದೆ,ಬಿಡಲಾಗದು ತಿಳಿದಿದೆ||
ಕಾಲ ಬುದ್ದಿ ಕಲಿಸಬೇಕೆಂದು ಬಯಸುತ್ತೇನೆ
ಅದು ನನಗೂ ಹಾಗು ನನ್ನನ್ನು ಹಿಂಸಿಸುವರೆಗೂ
ನನ್ನ ಅಸಹಾಯಕತೆ ನನಗೆ ಪಾಠಕಲಿಸುತ್ತದೆ,ಅದಕ್ಕೆ ಕಾತುರನಾಗಿದ್ದೇನೆ||
Monday, October 31, 2011
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment