Saturday, December 27, 2025

ಅರಳಿದ ಮನಸ್ಸು

ಒಳಗಿನ ಕಿಡಿ, ಚಿಕ್ಕದು ಪ್ರಕಾಶಮಾನ

ಚಿಂತನೆ ಬಡಿದೆಬ್ಬಿಸಿ, ಕತ್ತಲೆಯ ಓಡಿಸುವುದು.  

ಮಣ್ಣಿನ ಪಾತ್ರೆಯಲ್ಲ, ಬೇಕು,ಬೇಡಗಳ ತುಂಬುವುದಲ್ಲ, 

ಅದ್ಭುತ ಮಾರ್ಗಗಳನ್ನು ತೋರಿಸುವ ದಾರಿದೀಪ. 

 

ಪ್ರತಿ ಪ್ರಶ್ನೆ ಮೃದುವಾದ ಭಾವನೆಗಳ ಎಬ್ಬಿಸುವುದು, 

ಪ್ರತಿ ಕನಸು ಕಲಿಕೆಯ ಜ್ವಾಲೆಗೆ ಹೆಸರು ನೀಡುವುದು. 

ಒಮ್ಮೆ ಅರಳಿದ  ಮನಸ್ಸು ಹಾರಲು ಕಲಿಯುವುದು, 

ಮನ್ವಂತರದ ಮನುಕುಲಕ್ಕೆ ಜೀವಂತ ಬೆಳಕಾಗುವುದು.

Friday, December 26, 2025

ಮೊದಲ ಹೆಜ್ಜೆ

ಬೀಜವು ದೊಡ್ಡದಾಗಿರಬೇಕಿಲ್ಲ

ಜಗದ ಬೆಳಕ ಕಾಣಲು ಸಣ್ಣ ಆಸೆ, ಧೈರ್ಯ ಸಾಕು. 

ಮೊಗ್ಗು ಚಿಕ್ಕದಾದರೂ, ಭರವಸೆಯಿಂದ ಹಿಗ್ಗಿ,  

ಮರ ಆಕಾಶದತ್ತ ಎತ್ತರವಾಗಿ ಬೆಳೆವುದು.  

 

ಮಹತ್ವವು ಧೈರ್ಯದಿಂದಲೇ ಹುಟ್ಟುವುದು

ಚಿಕ್ಕ ಹೃದಯಗಳಲ್ಲಿ, ಭರವಸೆಯ ಕಂಗಳಲ್ಲಿ.  

ಇಂದಿನ ಚಿಕ್ಕ ಹೆಜ್ಜೆ, ಸರಳವಾದರೂ, 

ನಾಳೆಯ ಸಾಧನೆ ವಿಶ್ವ ವ್ಯಾಪಿಯಾಗುವುದು.  

Wednesday, December 24, 2025

ಅಟಲ - ಅಚಲ

ವಿನಯ ಮೂರ್ತಿ, ಧೈರ್ಯದ ದೀಪ,

ದೇಶದ ಹೃದಯದಲ್ಲಿ ಶಾಶ್ವತ ರೂಪ.

 

ರಾಜಕೀಯದ ಗಗನದಲ್ಲಿ ಬೆಳಕಾದವ,

ಕಾವ್ಯದ ಹೃದಯದಲ್ಲಿ ನೆಲೆಸಿದವ.

 

हार नहीं मानूंगा…” ಎಂದು ಘೋಷಿಸಿದವ,

ಅಸಾಧ್ಯವನ್ನೂ ಸಾಧ್ಯಗೊಳಿಸಿದವ.

 

ಸುಶಾಸನದ ದಾರಿ ತೋರಿದವ,

ಜನಮನದಿ ಕವಿಯಾಗಿ ಉಳಿದವ.

ಮನದ ಬೆಳಕು

ಕನಸುಗಳ ದಾರಿ ದೂರವಲ್ಲ,

ಮನದ ಬೆಳಕು ಹಾದಿ ತೋರಲಿದೆ.


ಧೈರ್ಯದ ಹೆಜ್ಜೆ ಇಟ್ಟಾಗಲೇ,

ಮಿತಿಯೆಂಬ ಗೋಡೆ ಕುಸಿಯಲಿದೆ.


ನಂಬಿಕೆಯ ಬೀಜ ಬಿತ್ತಿದರೆ,

ಜೀವನದಲ್ಲಿ ಹೂವು ಅರಳಲಿದೆ.

ಅಸೀಮ ಮನಸ್ಸು

ಮನದಲ್ಲಿ  ಗಡಿಗಳು ನಿನ್ನ ದಾರಿಯಲ್ಲಿ,

ನಡೆ ಮುಕ್ತವಾಗಿ ತೊರೆದು ಭಯವಿಲ್ಲಿ.

 

ಕನಸುಗಳೆಲ್ಲಾ ನಿನ್ನ ಕೈಯಲ್ಲಿ,

ಧೈರ್ಯವಿದ್ದರೆ ಜಯವು ನಿನ್ನ ತೆಕ್ಕೆಯಲ್ಲಿ.

 

ಕಾಣದ ಮಿತಿಯೆಂದರೆ ಮನದ ಕಲ್ಪನೆ,

ಸಕಾರಾತ್ಮಕತೆ ನೀಡುತ್ತದೆ ಶಕ್ತಿಯ ಪರಿಕಲ್ಪನೆ.

 

ನಿನ್ನ ಮನಸ್ಸೇ ನಿನ್ನ ಅಗಾಧ ಬಲ,

ಅದು ತೆರೆದರೆ ಗೆಲುವೇ ನಿನ್ನ ಫಲ.

Tuesday, December 23, 2025

ನಾಳೆಗಳು ನನ್ನವು !

 ಕಂಡೆ ಅದೆಷ್ಟು ಸೂರ್ಯೋದಯಗಳ,

ಕಂಡೆ ಎಷ್ಟೊಂದು ಚಂದ್ರೋದಯಗಳ,

ಮನವು ಮುದಗೊಳ್ಳುವುದು ಪ್ರತಿದಿನ,

ಸಾರ್ಥಕತೆಯ ದಾರಿಗಳ ಹೆಜ್ಜೆ ತಡವರಿಸಿದೆ,

ಗುರಿ, ಗುರುವ ಹುಡುಕುತ್ತಲೇ ಮನವು ಅಲೆದಿದೆ,

ದಾರಿ ಹುಡುಕುವ ತವಕ ಮಾತ್ರ ಉಳಿದಿದೆ,

ದಾರಿಯ ಮೇಲೆ ಭರವಸೆಯ ಬೆಳಕು ಹರಿದಿದೆ,

ನಾಳೆಗಳ ಹುರುಪು ಇನ್ನೂ ಜೀವಂತ,

ನಾಳೆಗಳು ನನ್ನವು, ಬೆಳಕು ನನ್ನದು.

Saturday, December 20, 2025

ಪಾಹಿ ಮಾಧವ

ಕೊಳಲ ನಾದ ಕೋವಿದ,

ಗೋಪಿಕೆಯರ ಮನ ಸೆಳೆದ,

ಗೋಪಾಲಕರ ಪ್ರಾಣ ಸ್ನೇಹಿತ,

ಪಾಹಿ ಮಾಧವ.

 

ದುಷ್ಟರ ಸಂಹಾರಕ,

ಕಂಸ ದುಷ್ಟ ವಿನಾಶಕ,

ಪಾಂಡವರ ಪ್ರಿಯ ಪಾಲಕ,

ಪಾಹಿ ಮಾಧವ.

 

ಜಗದ ಕಷ್ಟ ನಿವಾರಕ,

ರಾಧಾ, ರುಕ್ಮಿಣಿಯರ ಮೋಹಕ,

ನೀಲ ಮೇಘ ಶ್ಯಾಮ ರೂಪಕ,

ಪಾಹಿ ಮಾಧವ.

 

ವಸುದೇವ, ದೇವಕಿ ಮನ ಮೋಹಕ,

ದೇವ, ದೇವತೆಗಳಿಂ ಪೂಜಿತ,

ರಾಕ್ಷಸ ಕುಲಾಂತಕ,

ಪಾಹಿ ಮಾಧವ.

 

ಬಲರಾಮಾನುಜ ಭಜಕ,

ಭಕ್ತ ಸುಜನಾ ಪಾಲಕ,

ಅರ್ಜುನ ಗೀತ ಘೋಷಕ,

ಪಾಹಿ ಮಾಧವ.

 

ಯಾದವ ಕುಲಭೂಷಣ,

ಕೌರವ ರಣಾಂತಕ,

'ಕೃಷ್ಣ' ಹೆಸರಿಂ ಶೋಭಿತ,

ಪಾಹಿ ಮಾಧವ.

Saturday, December 13, 2025

ಪ್ರೀತಿಯ ಗೆಳತಿ

ನನ್ನ ಪ್ರೀತಿಯ ಗೆಳತಿಯೇ,

ನಿನ್ನ ನಗುವು ನನ್ನ ಹೃದಯದ ಬೆಳಕು,

ನಿನ್ನ ಮಾತುಗಳು ಮಧುರ ಸಂಗೀತದಂತೆ,

ನಿನ್ನ ನೆನಪು ನನ್ನ ನಿತ್ಯದ ಪ್ರೇರಣೆ.

 

ನಿನ್ನೊಂದಿಗೆ ಕಳೆದ ಕ್ಷಣಗಳು,

ನನ್ನ ಜೀವನದ ಅಮೂಲ್ಯ ಆಭರಣ,

ನಿನ್ನ ಪ್ರೀತಿಯ ಸ್ಪರ್ಶದಿಂದ,

ನನ್ನ ಆತ್ಮವು ನಲಿಯುತ್ತಿದೆ.

 

ನೀನು ದೂರವಿದ್ದರೂ,

ನಿನ್ನ ನೆನಪು ನನ್ನ ಹತ್ತಿರವಿದೆ,

ನಿನ್ನ ವಾತ್ಸಲ್ಯದ ಬೆಳಕು,

ನನ್ನ ಹಾದಿಯನ್ನು ಬೆಳಗಿಸುತ್ತಿದೆ.

ಪ್ರೇರಣೆ ನೀನೇ ಆಗು!

ಆರೋಗ್ಯ,ಸಂತೋಷ,ಆಂತರಿಕ ತೃಪ್ತಿ,

ಉದ್ದೇಶಪೂರ್ಣ ಜೀವನವು ಹಾದಿ ತೆರವುದು.

ಪ್ರಶ್ನೆ ಇದೆ ಮನದಲ್ಲಿ ಚಿಕ್ಕದಾದರೂ ಹಿರಿದು,

ದಾರಿ ಹುಡುಕು, ನಿನ್ನ ಜೀವನದ ಶಿಲ್ಪಿ ನೀನೇ.

 

ಸಮಯ, ಹಣ, ಪ್ರತಿಭೆ, ಜೀವನ ಕಟ್ಟಿಕೊಳ್ಳಲು,

ಕಾಲ ಮುನ್ನಡೆಯಲು ಎಲ್ಲವ ಕೊಡು ಸಮಾಜಕ್ಕೆ,

ತೃಪ್ತಿಯ ಕಂಡುಕೋ, ನೋವುಂಡವರ ಕಣ್ಣೀರ ಒರೆಸಿ,

ಸಹಾಯ ಹಸ್ತವ ಚಾಚು, ಸಹಾಯ ಬೇಡಿ ಬಂದವರಿಗೆ.

 

ಬೇಸರದ ಹೊತ್ತಿನಲ್ಲಿ ಸಾಂತ್ವನವ ಹಂಚು, ಬೆಳಕು ಹರಡು, 

ಮಾತುಗಳ ಹಿಂದಿನ ನೋವ ತಿಳಿ, ಹೃದಯದ ಬಾಗಿಲು ತೆರೆ. 

ಸ್ವಾರ್ಥವಿಲ್ಲದೆ ಸೇವೆಯ ತೆರದಲಿ ಕಾಯಕದಲ್ಲಿ ನಿರ್ಲಿಪ್ತನಾಗು, 

ಮನಕೆ ಆನಂದ ನೀಡುವ ಕಾಯಕವೇ ಬೆಳಕ ಹಾದಿಯಾಗಲಿ. 

 

ಅವಮಾನ, ವಿಫಲತೆ, ಸಂಕಟಗಳೆಲ್ಲಾ ಪಾಠಗಳಾಗಲಿ, 

ಅನುಭವದ ಹಾದಿಯಲ್ಲಿ ಬೆಳೆಯಲಿ ವ್ಯಕ್ತಿತ್ವ ನಿರ್ಮಾಣ. 

ದಿನದಿನವೂ ಹೊಸ ಕನಸು, ಹೊಸ ಪ್ರಯತ್ನದ ಹೆಜ್ಜೆ, 

ಜೀವನದ ಉದ್ದೇಶವ ಹುಡುಕುವ ಪಯಣವೇ ಧರ್ಮ. 

 

ಅಂತರಂಗದ ಶಕ್ತಿ ನಂಬಿಕೆಯಡಿಯಲ್ಲಿ ಮೂಡಲಿ, 

ಅಜ್ಞಾತ ದಾರಿಯಲಿ ಸಹಜತೆ ನಿನ್ನ ದೀಪವಾಗಲಿ. 

ನಿನ್ನ ಹೆಜ್ಜೆಗಳಲ್ಲಿ ಸತ್ಯ, ನಿನ್ನ ನೋಟದಲ್ಲಿ ದಯೆ, 

ಲೋಕದ ಬದಲಾವಣೆಗೆ  ಪ್ರೇರಣೆ ನೀನೇ ಆಗು.

Friday, December 5, 2025

ನಾಯಕನ ಬೆಳಕು

ಕಾಲ್ನಡಿಗೆಯ ಸಣ್ಣ ಊರಿನಿಂದ ಹೆಜ್ಜೆಗಳು ನೂರಾದವು,

ರಾಜ್ಯ, ದೇಶ, ವಿದೇಶದ ದೊಡ್ಡ ಹೆದ್ದಾರಿಯವರೆಗೆ ನಡೆದವು,

ಸಾಧನೆ, ಶ್ರಮ, ನಂಬಿಕೆಯೇ ಉಸಿರಾಗಿಸಿಕೊಂಡ ಬಾಲಕ ,

ಭಾರತ ದೇಶಕ್ಕೆ ಹೊಸ ದಿಕ್ಕುದೆಸೆ ತೋರಿದ ಮಹಾನಾಯಕ.

 

ಅನಂತ ಆಕಾಶದಷ್ಟು ದೊಡ್ಡ ಕನಸುಗಳು,

ಬಾಲ್ಯದಲ್ಲೇ ದೇಶವ ಹೃದಯದಲ್ಲಿರಿಸಿದವರು,

ಜನರ ಕಷ್ಟ, ನೋವುಗಳಿಗೆ ಸ್ಪಂದಿಸಿದವರು,

ಸರಳತೆ, ಶ್ರದ್ಧೆ, ಶಿಸ್ತುಗಳ ಮೈಗೂಡಿಸಿಕೊಂಡವರು,

ಗೆಳೆಯರ, ಗುರುಗಳ ಹೃದಯ ಗೆದ್ದವರು.

 

ಅನವರತ ಅವಿರತ ಶ್ರಮದ ಸಂಕೇತ,

ಸ್ವಚ್ಛ ಭಾರತ, ಡಿಜಿಟಲ್ ಭಾರತ,

ಪ್ರತೀ ಹೆಜ್ಜೆಯಲ್ಲಿ ಹೊಸ ಬೆಳಕು.

ರೈತರು, ಯುವಕರು, ಬಡವರಿಗೆ

ನಂಬಿಕೆಯ ಮಾತು ಕೊಟ್ಟವರು.

 

"ಸಬ್ಕಾ ಸಾಥ್, ಸಬ್ಕ ವಿಕಾಸ್ " ಒಬ್ಬೊಬ್ಬರ ಬದುಕಿಗೂ  ಸ್ಪೂರ್ತಿ.

ದೇಶದ ಜನರ ಆಶಾಕಿರಣ,  ಭರವಸೆ, ಅಸಹಾಯಕರ ಉಸಿರು,

ಇಂದು ನಾವು ಹೃದಯಪೂರ್ವಕವಾಗಿ

ಸಂತೋಷದಿಂದ  ಹುಟ್ಟುಹಬ್ಬ ಆಚರಿಸುತ್ತೇವೆ.

 

ಅವರಿಗೆ ಆಯಸ್ಸು, ಆರೋಗ್ಯ, ಶಕ್ತಿ, ಜ್ಞಾನ ದೊರಕಲಿ,

ಸನಾತನ ಧರ್ಮ ನಲಿಯಲಿ, ಭಾರತ ಇನ್ನಷ್ಟು ಬೆಳೆಯಲಿ.

ದೇಶದ ಪುತ್ರ ಮೋದಿಜಿಗೆ ಜನ್ಮದಿನದ ಶುಭಾಶಯಗಳು,

ನಮ್ಮ ಹೆಮ್ಮೆ, ನಮ್ಮ ನಾಯಕ, ನಮ್ಮ ಪ್ರೇರಣೆ.

 

(ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ  75ನೇ ಜನ್ಮದಿನದ ಅಂಗವಾಗಿ)

Sunday, November 30, 2025

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ,

ಅತಿನೀಲಿ ಕಿರಣಗಳ ರಕ್ಷಾ ಕವಚವದು,

ಭೂಮಿಗೆ ತಂಪಾದ ಬೆಳಕ ನೀಡುವುದು,

ಓಜೋನ್ ಅದರ ಹೆಸರು- ನಮ್ಮ ದೈವವದು.

 

ನಮಗೆ ಕಾಣದ ದೇವರದು,

ನಮ್ಮ ಆರೋಗ್ಯದ ರಕ್ಷಾ ಪದರವದು,

ನಮ್ಮ ಅಜ್ಞಾನದಿಂದ ಅದು ನಾಶವಾಗುತಿದೆ,

ನಮ್ಮ ರಕ್ಷಾ ಕವಚವ ನಾವೇ ಹಾನಿಮಾಡುತಿಹೆವು.

 

ಬುದ್ದಿವಂತ ಜನ ಅರಿವ ಮೂಡಿಸುತಿಹರು,

ರಾಸಾಯನಿಕಗಳೇ 'ಓಜೋನ್' ನಿನ  ಶತೃ,

ಬದಲಾವಣೆ ಬಂದಿದೆ, ನಿಧಾನ ಗತಿಯಲ್ಲಿ,

ಆಗಸದೆಡೆ ನೋಡು, ರಕ್ಷಿಸುವ ಮಾರ್ಗ ತೆರೆ.

 

ದಿನ "ಓಝೋನ್ ದಿನ" ನೆನಪಿಡೋಣ,

ಓಜೋನ್ ಪದರದ ಮಹತ್ವ ತಿಳಿಸೋಣ,

ಹೆಚ್ಚು ಮರ-ಗಿಡಗಳ ಬೆಳೆಸೋಣ,

ತ್ಯಾಜ್ಯ,ರಾಸಾಯನಿಕಗಳ ಕಡಿಮೆ ಬಳಸೋಣ,

ಮುಂದಿನ ಪೀಳಿಗೆಗೆ ಭೂಮಿಯ ರಕ್ಷಿಸೋಣ.


16th Sep - Ozone Day

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...