Saturday, May 30, 2020

ಪ್ರಕೃತಿ ಹಂಬಲ

ಮತ್ತೆ ಅದೇ ತವಕ, ಕಾತರ ಅಸೆ ಕಂಗಳಿಂದ
ಮೊದಲು ನೋಡಿಬಿಡಬೇಕೆಂಬ ತೀವ್ರ ಹಂಬಲ
ಕಿಟಕಿಯ ಬಳಿ ಓದಿ ಬಂದೆ ಕಾತರದ ಕಂಗಳೊಂದಿಗೆ;
ಮನದಲ್ಲೇನೋ ಕಳವಳ ದೂರ ದೂರ ದಿಟ್ಟಿಸುತ್ತಿದೇನೆ
ಕಾಣಿಸಲಿಲ್ಲ ಮನದಲ್ಲಿ ನೆಲೆಸಿಹ ಆ ಸುಂದರ ಬಿಂಬ
ಮಂಜಿನ ತೆರೆ ನಿಧಾನವಾಗಿ ಸೆಳೆಯುತ್ತಿದೆ ಪ್ರಕೃತಿ
ನಗುವ ದೇವಶಿಲ್ಪದ ದರುಶನವಿಲ್ಲವಾಯಿತೆನೆಗಿಂದು
ಮುರುಟಿದೆ ಬೇಗುದಿಯಲಿ ಮನ ನರಳಿದೆ, ಪರಿತಪಿಸಿದೆ
ಆ ಧ್ಯಾನ ಮೂರ್ತಿಯ ಗೋಚರತೆ ಇಂದೆನೆಗೆ ಕನಸಾಗಿದೆ
ಹಬ್ಬುತ್ತಲಿರುವ ತಿಮಿರದ ಆವೇಗಕೆ ಸಂಜೆಯ ದೀಪ ಅರಿತು
ಮನದೊಳಾವರಣದಲಿ ದುಃಖ ಉಮ್ಮಳಿಸಿತು ಕಾಣದೆ ದೇವಶಿಲೆಯ
ದರುಶನ ಭಾಗ್ಯವಿಲ್ಲವಾಯಿತೆನೆಗಿಂದು , ನಾಳೆ ಏನೋ? ತಿಳಿದವರಾರು?

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...