ಮತ್ತೆ ಅದೇ ತವಕ, ಕಾತರ ಅಸೆ ಕಂಗಳಿಂದ
ಮೊದಲು ನೋಡಿಬಿಡಬೇಕೆಂಬ ತೀವ್ರ ಹಂಬಲ
ಕಿಟಕಿಯ ಬಳಿ ಓದಿ ಬಂದೆ ಕಾತರದ ಕಂಗಳೊಂದಿಗೆ;
ಮನದಲ್ಲೇನೋ ಕಳವಳ ದೂರ ದೂರ ದಿಟ್ಟಿಸುತ್ತಿದೇನೆ
ಕಾಣಿಸಲಿಲ್ಲ ಮನದಲ್ಲಿ ನೆಲೆಸಿಹ ಆ ಸುಂದರ ಬಿಂಬ
ಮಂಜಿನ ತೆರೆ ನಿಧಾನವಾಗಿ ಸೆಳೆಯುತ್ತಿದೆ ಪ್ರಕೃತಿ
ನಗುವ ದೇವಶಿಲ್ಪದ ದರುಶನವಿಲ್ಲವಾಯಿತೆನೆಗಿಂದು
ಮುರುಟಿದೆ ಬೇಗುದಿಯಲಿ ಮನ ನರಳಿದೆ, ಪರಿತಪಿಸಿದೆ
ಆ ಧ್ಯಾನ ಮೂರ್ತಿಯ ಗೋಚರತೆ ಇಂದೆನೆಗೆ ಕನಸಾಗಿದೆ
ಹಬ್ಬುತ್ತಲಿರುವ ತಿಮಿರದ ಆವೇಗಕೆ ಸಂಜೆಯ ದೀಪ ಅರಿತು
ಮನದೊಳಾವರಣದಲಿ ದುಃಖ ಉಮ್ಮಳಿಸಿತು ಕಾಣದೆ ದೇವಶಿಲೆಯ
ದರುಶನ ಭಾಗ್ಯವಿಲ್ಲವಾಯಿತೆನೆಗಿಂದು , ನಾಳೆ ಏನೋ? ತಿಳಿದವರಾರು?
Saturday, May 30, 2020
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment