Monday, May 18, 2020

ಅಡ್ಡಗೋಡೆ

ಮನವು ತುಂಬಿಹುದು ನೂರು ಬೇಡ ಚಿಂತೆಗಳಿಂದ
ಪ್ರತಿನಡೆಯಲ್ಲೂ ಆತಂಕ,ಅಡೆತಡೆಗಳು;
ಬೇಸರ, ನೋವು ಸೊರಗಿ ನೊಂದು ಬೆಂದಿದೆ ಈ ಮನವು;
ಭರವಸೆ,ಆಶಾವಾದಗಳೆಲ್ಲ ಬರೀ ನೀರಸವೆನಿಸಿದೆ
ನಡೆಯದು ಈ ಜೀವನ ಬರೀ ಜೊಳ್ಳು ಮಾತಿನಲ್ಲಿ
ಮನದ ಅಡೆತಡೆಗಳೇ ನೂರಿರುವಾಗ, ಮೀರುವುದಾದರೂ ಹೇಗೆ?
ಅಡ್ಡಗೋಡೆಯಿಲ್ಲ ಸಾಧನೆಯ ಹಾದಿಗೆ;
ಮೀರು ಮನದ ಪರಿಧಿಯ,ಹಾರು ಸಾಧನೆಯ ಶಿಖರದೆಡೆಗೆ! ||

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...