ನಾನೊಂದು ನೀರಿನ ಹನಿಯು, ಚೈತನ್ಯದ ಜೀವದ ಸೆಲೆಯು
ಸಾಗರದೊಳು ನಲಿದಾಡುತಿರುವ ಋಣಿಯು,ಮಮತೆಯ ಖನಿಯು
ಅಲೆ ಅಲೆಗಳಲಾಡುವ ಪ್ರಕೃತಿಯ ಮಗುವು ಜೀವದ ರವರವವು
ಬಿಂಗದಿರನ ಜೊತೆಗೂಡುವೆನು,ಮೆಲ್ಲಮೆಲ್ಲನೆ ಆಗಸಕ್ಕೇರುವೆನು
ನನ್ನಂತೆಯೇ ಆಗಸಕ್ಕೇರುವವರ ಜೊತೆಗೂಡಿ ಮೋಡವಾಗುವೆನು
ಹಾರುತ ಹಾರುತ ಮಾರುತನ ಜೊತೆಗೆ ದೇಶ ಪರ್ಯಟನೆ ಮಾಡುವೆನು
ಎಲ್ಲೋ ಹುಟ್ಟಿ , ಎಲ್ಲೋ ಬೆಳೆದು ನಿಲ್ಲದೆ ಸಾಗಿದೆ ಪಯಣವು
ಸೊಬಗಿನ ಮಲೆಕಾನನದೊಲವಿಗೆ ಹಿತದಿ ಮನಸೋಲುವೆನು
ಮಲೆಯ ಹಸುರಿನ ಬನದೊಳು ಬಿಂಕದಿ ಮಳೆಯಾಗಿ ಕೆಳಗಿಳಿಯುವೆನು
ಬೆಟ್ಟ,ಗುಡ್ಡ,ಕಂದರ,ಕಣಿವೆಗಳಲಿ ಝರಿಝರಿಯಾಗಿ ಹರಿಯುವೆನು
ಧುಮ್ಮಿಕ್ಕುವ ಜೋಗದ ಜಲಪಾತದಿ ರಭಸದಿಂದ ಧುಮುಕುವೆನು
ಝರಿಯಾಗಿ, ತೊರೆಯಾಗಿ, ಜೀವನದಿಯ ಒಡಲ ಸೇರುವೆನು
ಹರಿಯುವೆನು ನಾನು ಹರಿಯುವೆನು ಚೈತನ್ಯದ ಚಿಲುಮೆಯಾಗುವೆನು
ನಿಲ್ಲದ ಪಯಣವು ನನ್ನೀ ಜೀವನವು ಬತ್ತದೆ ಹರಿಯುವ ನನ್ನೀ ನಲವು
ಭೂಮಿ ತಾಯಿಯ ಪಾದವ ತೊಳೆಯುತ ಕಡಲ ಸೇರಲು ಹರಿಯುವೆ
ಕಡಲ ಸೇರುವ ಗುರಿಯು ನನ್ನದು ತಾಯಿಯ ಮಮತೆಯ ಕಾಣುವ ಪರಿಯು
ತಾಯ ಕಾಣುವ ಹಂಬಲದಿ ನಡೆವೆನು ಕಾಣುವೆನೇ ನನ್ನ ತಾಯ ಒಲವನು
ಭಯ, ಆತಂಕದಿ ತರಾತುರಿಯಲಿ ಹೋರಾಡುವೆನು ಗುರಿಯನು ತಲುಪುವೆನು
ಹಕ್ಕಿಯ ಕಲರವ ಗಾಳಿಯ ಮೆಲುನಾದ ಮನದಿ ಮುದವನೇ ನೀಡುವುದು
ಇರಲಾರೆ ಇಲ್ಲೇ , ನಿಲ್ಲಲಾರೆ ಇಲ್ಲೇ, ಮುದದಿ ನಡೆವೆನು ಸುಖದಿಂದೇ
ಮತ್ತೆ ಮತ್ತೆ ಹಂಬಲಿಸುವೆ ಸವಿಯಲು ಈ ಪಯಣಾನುಭವದ ರಸದ ಹೊನಲ
ದೂರದಲ್ಲೆಲ್ಲೋ ಬಿಡದೆ ಸೆಳೆಯುತಿಹುದು ಅಮೃತಗಾನವೊಂದು
ಕರೆಯುತಿಹುದು ಕರುಳ ಕರೆಯೊಂದು ಸೇರು ಬಾ ಒಡಲೊಳೆಂದು
ಸೇರು ಬಾ ನನ್ನೀ ಕಡಲೊಳೆಂದು, ಸೇರು ಬಾ ನನ್ನೀ ಒಡಲೊಳಿಂದು।।
Monday, May 4, 2020
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment