ಭೀಭತ್ಸವೆಂದರೆ ಇದೇನೇ.....

ಭೀಭತ್ಸವೆಂದರೆ ಇದೇನೇ.....
ಮುಗ್ಧ ಮಕ್ಕಳ ಹತ್ಯಾಕಾಂಡ ಸಮರ್ಥನಿಯವೇ?
ವಾತ್ಸಲ್ಯ,ಪ್ರೀತಿ,ಕರುಣೆಗೆ ಯಾವುದೇ ಧರ್ಮದ ಸೋಂಕಿಲ್ಲ
ಪ್ರಕೃತಿಯ ಶುದ್ಧ ಪ್ರಮಾಣಗಳೆಂದರೆ ಅವೇನೇ....

ಮೂರ್ಖತನಕ್ಕೆ,ಹೇಡಿತನಕ್ಕೆ,ಗುಂಡಿನ ಮೊರೆತಕ್ಕೆ
ಮುಗ್ಧ ಅಮಾಯಕತೆ ಬಲಿಯಾಗಿರಬಹುದು
ಭಯೋತ್ಪಾದನೆ ಕ್ಷಣಿಕ ಗೆಲುವಿನ ನಗೆ ಬೀರಿರಬಹುದು
ಅದು ನಿಜವಾದ ಗೆಲುವಲ್ಲ,ಶಾಶ್ವತವೂ ಅಲ್ಲ;

ಯಾವುದೇ ಧರ್ಮವಿರಲಿ ಮಾನವೀಯತೆಯೇ ಬುನಾದಿ
ಅನಾದಿಯಿಂದಲೂ ದಯವೇ ಧರ್ಮದ ಮೂಲ
ರಕ್ತ ಪೀಪಾಸುಗಳಿಗೆ,ಸ್ವಾರ್ಥಿಗಳಿಗೆ ಕಾಣಿಸದು
ರಕ್ತ ಹರಿದರೆ,ಭಯ ತೋರಿದರೆ ಲೋಕ ತನ್ನದಾಗದು;

ಹಿಂದೂಧರ್ಮ ಬಿಕ್ಕಿತ್ತಿದೆ;
ಇಸ್ಲಾಂ ಧರ್ಮ ಕಣ್ಣೀರಿಡುತ್ತಿದೆ;
ಕ್ರಿಶ್ಚಿಯನ್ ಧರ್ಮ ನರಳುತ್ತಿದೆ;
ಮಾನವೀಯತೆಯ ಮೇಲೆ ಬಿದ್ದ ಕರಿನೆರಳಿಗೆ
ಅಮಾಯಕ ಮಕ್ಕಳ ಮಾರಣಹೋಮಕ್ಕೆ.......

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...