Wednesday, December 17, 2014

ಭೀಭತ್ಸವೆಂದರೆ ಇದೇನೇ.....

ಭೀಭತ್ಸವೆಂದರೆ ಇದೇನೇ.....
ಮುಗ್ಧ ಮಕ್ಕಳ ಹತ್ಯಾಕಾಂಡ ಸಮರ್ಥನಿಯವೇ?
ವಾತ್ಸಲ್ಯ,ಪ್ರೀತಿ,ಕರುಣೆಗೆ ಯಾವುದೇ ಧರ್ಮದ ಸೋಂಕಿಲ್ಲ
ಪ್ರಕೃತಿಯ ಶುದ್ಧ ಪ್ರಮಾಣಗಳೆಂದರೆ ಅವೇನೇ....

ಮೂರ್ಖತನಕ್ಕೆ,ಹೇಡಿತನಕ್ಕೆ,ಗುಂಡಿನ ಮೊರೆತಕ್ಕೆ
ಮುಗ್ಧ ಅಮಾಯಕತೆ ಬಲಿಯಾಗಿರಬಹುದು
ಭಯೋತ್ಪಾದನೆ ಕ್ಷಣಿಕ ಗೆಲುವಿನ ನಗೆ ಬೀರಿರಬಹುದು
ಅದು ನಿಜವಾದ ಗೆಲುವಲ್ಲ,ಶಾಶ್ವತವೂ ಅಲ್ಲ;

ಯಾವುದೇ ಧರ್ಮವಿರಲಿ ಮಾನವೀಯತೆಯೇ ಬುನಾದಿ
ಅನಾದಿಯಿಂದಲೂ ದಯವೇ ಧರ್ಮದ ಮೂಲ
ರಕ್ತ ಪೀಪಾಸುಗಳಿಗೆ,ಸ್ವಾರ್ಥಿಗಳಿಗೆ ಕಾಣಿಸದು
ರಕ್ತ ಹರಿದರೆ,ಭಯ ತೋರಿದರೆ ಲೋಕ ತನ್ನದಾಗದು;

ಹಿಂದೂಧರ್ಮ ಬಿಕ್ಕಿತ್ತಿದೆ;
ಇಸ್ಲಾಂ ಧರ್ಮ ಕಣ್ಣೀರಿಡುತ್ತಿದೆ;
ಕ್ರಿಶ್ಚಿಯನ್ ಧರ್ಮ ನರಳುತ್ತಿದೆ;
ಮಾನವೀಯತೆಯ ಮೇಲೆ ಬಿದ್ದ ಕರಿನೆರಳಿಗೆ
ಅಮಾಯಕ ಮಕ್ಕಳ ಮಾರಣಹೋಮಕ್ಕೆ.......

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...