Thursday, January 1, 2015

ಮಾತು ಗೌಣ

ನಾವು ಎತ್ತ ಸಾಗುತ್ತಿದ್ದೇವೋ ಸ್ಪಷ್ಟತೆಯಿಲ್ಲ
ಸ್ವಾತಂತ್ರದಿಂದ ಗುಲಾಮಗಿರಿಯತ್ತಲೋ?
ಅನುಮಾನವಿದೆ,ಇಂದಲ್ಲದಿದ್ದರೂ ಮುಂದೊಂದು ದಿನ....
ನಮ್ಮದೇ ಅಸ್ಥಿತ್ವಕ್ಕೆ ಹೋರಾಡುತ್ತಿದ್ದೇವೆ
ಎಲ್ಲರೂ ನಮ್ಮವರೇ
ಮೈ ಬಣ್ಣ,ಹರಿಯುತ್ತಿರುವ ರಕ್ತ,ಉಸಿರಾಡುವ ಗಾಳಿ
ನಮ್ಮವರೆಂದುಕೊಂಡೆವು
ಆದರೇನಾಯಿತು?
ನಮ್ಮವರು ನಮಗೇ ಶತೃಗಳು
ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ;
ನಮ್ಮ ಮಾತಿಗೆ ಕಿಮ್ಮತಿಲ್ಲ;
ನಮ್ಮ ಕೈಗಳನ್ನೇ ಕಟ್ಟಿಹಾಕಿದ್ದಾರೆ;
ಕಣ್ಣುಗಳನ್ನೂ ಮುಚ್ಚಿದ್ದಾರೆ;
ಯಾವ ಬಟ್ಟೆಯಿಂದಲೋ?
ಮೃದುವಾಗಿದೆಯಾದರೂ ಕಠೋರವಾಗಿದೆ;
ಯಾರ ಕೈವಶವಾಗಿಹೆವೋ?
ಮಾತು ಗೌಣ;ಮೂಕ ರೋಧನ;
ಅಸಹಾಯಕರಾಗಿದ್ದೇವೆ;
ಮನದ ನೋವು ನಿಶಬ್ದವಾಗಿದೆ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...